ಆ್ಯಪ್ನಗರ

‘ಪ್ರಚಾರ ವೇಳೆ ಸುಳ್ಳೋ, ಪೊಳ್ಳೋ ಹೇಳಿ ಬರಬೇಕು’

ಜನರ ಮುಂದೆ ಪ್ರಚಾರಕ್ಕೆ ಹೋದಾಗ ರಾಜಕಾರಣಿಗಳು ವಿಷಯ ಗೊತ್ತಿಲ್ಲದಿದ್ದರೂ ಸುಳ್ಳೋ, ಪೊಳ್ಳೋ ಏನಾದರೊಂದು ಹೇಳಿ ಬರಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

Vijaya Karnataka 6 Dec 2017, 3:31 pm
ಕಾರಟಗಿ (ಕೊಪ್ಪಳ): ಜನರ ಮುಂದೆ ಪ್ರಚಾರಕ್ಕೆ ಹೋದಾಗ ರಾಜಕಾರಣಿಗಳು ವಿಷಯ ಗೊತ್ತಿಲ್ಲದಿದ್ದರೂ ಸುಳ್ಳೋ, ಪೊಳ್ಳೋ ಏನಾದರೊಂದು ಹೇಳಿ ಬರಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
Vijaya Karnataka Web news/koppal/propaganda
‘ಪ್ರಚಾರ ವೇಳೆ ಸುಳ್ಳೋ, ಪೊಳ್ಳೋ ಹೇಳಿ ಬರಬೇಕು’


ಸಮೀಪದ ನಾಗನಕಲ್ ಬಳಿಯ ಎಲ್‌ವಿಟಿ ತಪೋವನದಲ್ಲಿ ಬಿಜೆಪಿ ಬ್ಲಾಕ್ ಘಟಕ ಸೋಮವಾರ ಸಂಜೆ ಆಯೋಜಿಸಿದ್ದ ‘ಬೂತ್ ಮಟ್ಟದ ಸಶಕ್ತೀಕರಣ ಸಭೆ’ಯಲ್ಲಿ ಅವರು ಮಾತನಾಡಿದರು. ‘‘ಪಕ್ಷದ ಪರ ಪ್ರಚಾರಕ್ಕೆ ತೆರಳಿದಾಗ ಮತ ಕ್ರೋಢೀಕರಿಸುವ ಜವಾಬ್ದಾರಿ ಇರುತ್ತದೆ. ಜನರು ಪ್ರಶ್ನಿಸಿದಾಗ ರಾಜಕಾರಣಿಗಳು ಕೆಲವೊಮ್ಮೆ ವಿಷಯ ಗೊತ್ತಿಲ್ಲದಿದ್ದರೂ ಏನಾದರೊಂದು ಹೇಳಿ ಬರಬೇಕು’’ ಎಂದರು.

ಕೆಟ್ಟದಾಗಿ ಉತ್ತರಿಸಿ: ‘‘ವಾಜಪೇಯಿ, ಮನಮೋಹನ್‌ಸಿಂಗ್ ಹಾಗೂ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಪಾಕಿಸ್ತಾನದ ಸೈನಿಕರ ತಲೆ ಕತ್ತರಿಸಿದ್ದನ್ನು ನೋಡಿರದಿದ್ದರೂ ಜನರ ಮುಂದೆ ಸೈನಿಕರ ತಲೆ ಕಡಿಯಲಾಗಿದೆ ಎಂದು ಹೇಳಿಬಿಡಬೇಕು. ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ನಾವು ನೀಡುವ ಉತ್ತರಗಳ ವೈಖರಿಯನ್ನು ನೋಡಿ ಕಾರ್ಯಕರ್ತರು ಕಲಿಯಬೇಕು. ನಮಗಿಂತಲೂ ಕೆಟ್ಟದಾಗಿ ಅವರಿಗೆ ಉತ್ತರಿಸಬೇಕು’’ ಎಂದು ಬುದ್ಧಿವಾದ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಶಿವರಾಮನಗೌಡ, ಮಾಜಿ ಶಾಸಕ ಜಿ.ವೀರಪ್ಪ ಕೇಸರಹಟ್ಟಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ದಢೇಸುಗೂರು, ಪಕ್ಷದ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ