ಆ್ಯಪ್ನಗರ

ರೈತರಿಂದ ಎಪಿಎಂಸಿಯಲ್ಲಿ ಪ್ರತಿಭಟನೆ

ರೈತರು ಬೆಳೆದ ತೊಗರಿಯನ್ನು ಸರಕಾರ ಬೆಂಬಲ ಬೆಲೆ ನೀಡದೆ ಖರೀದಿಸಲು ನಿರಾಕರಿಸಿದ್ದಕ್ಕೆ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು.

Vijaya Karnataka 23 Feb 2019, 5:00 am
ಹನುಮಸಾಗರ : ರೈತರು ಬೆಳೆದ ತೊಗರಿಯನ್ನು ಸರಕಾರ ಬೆಂಬಲ ಬೆಲೆ ನೀಡದೆ ಖರೀದಿಸಲು ನಿರಾಕರಿಸಿದ್ದಕ್ಕೆ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು.
Vijaya Karnataka Web KPL-KPL22HSR1


ಸರಕಾರದ ಬೆಂಬಲ ಬೆಲೆ ಅಡಿ ತೊಗರಿ ಮಾರಾಟ ಮಾಡಲು ಆನ್‌ಲೈನ್‌ನಲ್ಲಿ ನೋಂದಾಯಿಸಿದ ರೈತರು ಫೆ.21ರಂದು ಎಪಿಎಂಸಿಗೆ ಆಗಮಿಸಿದ್ದರು. ರೈತರ ತೊಗರಿ ಪರಿಶೀಲನೆ ಮಾಡಿದ ಫುಡ್‌ ಕಾಪೋರ್‍ರೇಶನ್‌ ಆಫ್‌ ಇಂಡಿಯಾ(ಎಫ್‌ಸಿಐ) ಕಂಪನಿ ಕೇಳುವಷ್ಟು ಗುಣಮಟ್ಟದ ತೊಗರಿಯಿಲ್ಲ. ಆದ್ದರಿಂದ ತೊಗರಿ ಖರೀದಿ ಮಾಡುವುದಿಲ್ಲ ಎಂದು ನಿರಾಕರಣೆ ಮಾಡಿ ಹಿಂದಿರುಗಿದರು.

ರೈತರು ಮಾತನಾಡಿ, ತಾಲೂಕಿನಾದ್ಯಂತ ಬರಗಾಲ ಆವರಿಸಿದೆ. ಇದರಿಂದಾಗಿ ಈ ವರ್ಷ ತೊಗರಿ ಗುಣಮಟ್ಟ ಸ್ವಲ್ಪ ಕುಂಠಿತವಾಗಿದೆ. ಈಗಾಗಲೇ ತೊಗರಿ ರಾಶಿ ಮಾಡಿ ಮೂರು ತಿಂಗಳಾಗಿದೆ. ಇನ್ನೂ ಮನೆಯಲ್ಲಿಟ್ಟರೆ ತೊಗರಿ ಹಾಳಾಗುತ್ತವೆ. ಅಧಿಕಾರಿಗಳು ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ಆದಷ್ಟು ಬೇಗ ಬೆಳೆದಿರುವ ತೊಗರಿಯನ್ನು ಖರೀದಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ವೇಳೆಯಲ್ಲಿ ಎಪಿಎಂಸಿಯ ಎಲ್ಲ ವರ್ತಕರು ಎಂದಿನಂತೆ ಅಂಗಡಿಮುಂಗಟ್ಟುಗಳನ್ನು ತೆರೆದು ಕಾರ್ಯನಿರ್ವಹಿಸಿದವು. ಪ್ರತಿಭಟನಾಕಾರರು ಯಾವುದೇ ವಾಹನಗಳು ಒಳಗೆ ಆಗಮಿಸದಂತೆ ಮುಖ್ಯ ದ್ವಾರಕ್ಕೆ ಮುಳ್ಳಿನ ಕಂಠಿಗಳನ್ನು ಹಚ್ಚಿದ್ದರು.

ಪ್ರಮುಖರಾದ ರಾಜಸಾಬ್‌ ಆಲೂರ, ಹನುಮಂತಪ್ಪ ಹಲಕೂಲಿ, ಸಂಗಮೇಶ ಗುರಿಕರ, ದೇವಪ್ಪ ಮೆಣಸಗಿ, ಶಿವಪುತ್ರಪ್ಪ ಕೋಳೂರ, ರಮೇಶ ಬಡಿಗೇರ, ಶಿವಕಾಮತಪ್ಪ ಹಾದಿಮನಿ, ಹುಲ್ಲಪ್ಪ ಗಡೇಕಾರ, ಶರಣಪ್ಪ, ಮದ್ನಾಳ, ಯಮನೂರಪ್ಪ ಮಡಿವಾಳರ, ಹಸನಸಾಬ್‌ ಹನುಮನಾಳ, ಹೂಲಗೇರಿ, ಗೊರೇಬಿಹಾಳ, ಅಂಟರಠಾಣಾ, ಕಡಿವಾಲ, ಅಡವಿಬಾವಿ ಹೀಗೆ ನಾನಾ ಗ್ರಾಮಗಳ ರೈತರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ