ಆ್ಯಪ್ನಗರ

ಕನಕಗಿರಿ ದೇಗುಲಕ್ಕೆ ರಾಹುಲ್‌ ಭೇಟಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗಂಗಾವತಿ ತಾಲೂಕಿನ ಕನಕಗಿರಿ ಪಟ್ಟಣದ ಐತಿಹಾಸಿಕ ಕನಕಾಚಲಪತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Vijaya Karnataka Web 11 Feb 2018, 3:03 pm
ಕೊಪ್ಪಳ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗಂಗಾವತಿ ತಾಲೂಕಿನ ಕನಕಗಿರಿ ಪಟ್ಟಣದ ಐತಿಹಾಸಿಕ ಕನಕಾಚಲಪತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
Vijaya Karnataka Web rahul visit kanakagiri temple
ಕನಕಗಿರಿ ದೇಗುಲಕ್ಕೆ ರಾಹುಲ್‌ ಭೇಟಿ


ಕನಕಗಿರಿಗೆ ಮಧ್ಯಾಹ್ನ ಆಗಮಿಸಿ ಪ್ರವಾಸಿ ಮಂದಿರದಲ್ಲಿ ಊಟ ಮಾಡಿದರು. ನಂತರ ದೇವಾಲಯಕ್ಕೆ ಆಗಮಿಸಿದಾಗ ಪೂರ್ಣಕುಂಭ ಹಾಗೂ ಮಂಗಳ ವಾದ್ಯಗಳೊಂದಿಗೆ ದೇವಾಲಯಕ್ಕೆ ಬರ ಮಾಡಿಕೊಳ್ಳಲಾಯಿತು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಐತಿಹಾಸಿಕ ದೇವಾಲಯ ಸುತ್ತವೀಕ್ಷಿಸಿದರು. ಅರ್ಚಕರು ದೇವಾಲಯದ ಬಗ್ಗೆ ರಾಹುಲ್ ಅವರಿಗೆ ಮಾಹಿತಿ ನೀಡಿದರು.

ಬೆಳಗ್ಗೆ ಹೈದರಾಬಾದ್ ಕರ್ನಾಟಕದ ಎರಡನೇ ದಿನದ ಜನಾಶೀರ್ವಾದ ಯಾತ್ರೆ ಕುಕನೂರು ಪ್ರವಾಸಿ ಮಂದಿರದಿಂದ ಯಲಬುರ್ಗಾ ಪಟ್ಟಣದತ್ತ ಸಾಗಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಾಲಕನನ್ನು ಎತ್ತಿಕೊಂಡು ನಿಧಾನವಾಗಿ ಚಲಿಸುವ ಬಸ್ ನಲ್ಲಿ ಪೋಟೊ ತೆಗೆಸಿಕೊಂಡರು.

ಯಲಬುರ್ಗಾ ಪಟ್ಟಣದಲ್ಲಿ ಪೂರ್ಣಕುಂಭ ಮೇಳದೊಂದಿಗೆ ಸ್ವಾಗತ ಅವರನ್ನು ಸ್ವಾಗತಿಸಲಾಯಿತು. ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಾಹುಲ್ ಜನರತ್ತ ಕೈಬೀಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ