ಇಳೆಗೆ ಮಳೆ; ಹಳ್ಳ-ಕೊಳ್ಳಗಳು ಭರ್ತಿ
ಸ್ಥಳೀಯ ವ್ಯಾಪ್ತಿಯ ಕವಲೂರು, ಅಳವಂಡಿ, ಹಟ್ಟಿ, ಬೆಳಗಟ್ಟಿ, ಘಟ್ಟಿರಡ್ಡಿಹಾಳ, ಗುಡಗೇರಿ ಮುಂತಾದ ಗ್ರಾಮಗಳಲ್ಲಿ ಬುಧವಾರ ಮಳೆ ಸುರಿದು ಭೂಮಿ ತಂಪೆರೆಯಿತು.
Vijaya Karnataka 20 Oct 2018, 5:00 am
ಅಳವಂಡಿ : ಸ್ಥಳೀಯ ವ್ಯಾಪ್ತಿಯ ಕವಲೂರು, ಅಳವಂಡಿ, ಹಟ್ಟಿ, ಬೆಳಗಟ್ಟಿ, ಘಟ್ಟಿರಡ್ಡಿಹಾಳ, ಗುಡಗೇರಿ ಮುಂತಾದ ಗ್ರಾಮಗಳಲ್ಲಿ ಬುಧವಾರ ಮಳೆ ಸುರಿದು ಭೂಮಿ ತಂಪೆರೆಯಿತು.
ಸುಮಾರು ನಾಲ್ಕು ತಿಂಗಳ ಬಿಡುವಿನ ನಂತರ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯಿಂದ ಕೆಲವು ಹಳ್ಳ ಕೊಳ್ಳಗಳು ತುಂಬಿ ಹರಿದು ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲ ಗ್ರಾಮಗಳಲ್ಲಿ ರೈತ ಬೆಳೆದ ಕಬ್ಬು ಭಾರಿ ಗಾಳಿ, ಮಳೆಗೆ ನೆಲಕ್ಕೆ ಬಿದ್ದು ಅಪಾರ ಹಾನಿ ಸಂಭವಿಸಿದೆ. ಸಮೀಪದ ರಘುನಾಥನಹಳ್ಳಿ ಪಕ್ಕದ ಹಿರೇ ಹಳ್ಳ ತುಂಬಿ ಹರಿದಿದ್ದರಿಂದ ಹಾಗೂ ಶಾಲಾ ಕಾಲೇಜಿಗೆ ರಜೆ ಇರುವುದರಿಂದ ಮಕ್ಕಳು ಹಾಗೂ ಯುವಕರು ಹಿರೇಹಳ್ಳದ ನೀರಿನಲ್ಲಿ ಈಜಿ ಸಂಭ್ರಮಿಸಿದ್ದು ಕಂಡು ಬಂತು.
ಸುಮಾರು ನಾಲ್ಕು ತಿಂಗಳ ಬಿಡುವಿನ ನಂತರ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯಿಂದ ಕೆಲವು ಹಳ್ಳ ಕೊಳ್ಳಗಳು ತುಂಬಿ ಹರಿದು ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲ ಗ್ರಾಮಗಳಲ್ಲಿ ರೈತ ಬೆಳೆದ ಕಬ್ಬು ಭಾರಿ ಗಾಳಿ, ಮಳೆಗೆ ನೆಲಕ್ಕೆ ಬಿದ್ದು ಅಪಾರ ಹಾನಿ ಸಂಭವಿಸಿದೆ. ಸಮೀಪದ ರಘುನಾಥನಹಳ್ಳಿ ಪಕ್ಕದ ಹಿರೇ ಹಳ್ಳ ತುಂಬಿ ಹರಿದಿದ್ದರಿಂದ ಹಾಗೂ ಶಾಲಾ ಕಾಲೇಜಿಗೆ ರಜೆ ಇರುವುದರಿಂದ ಮಕ್ಕಳು ಹಾಗೂ ಯುವಕರು ಹಿರೇಹಳ್ಳದ ನೀರಿನಲ್ಲಿ ಈಜಿ ಸಂಭ್ರಮಿಸಿದ್ದು ಕಂಡು ಬಂತು.