ಗಂಗಾವತಿ : ತಾಲೂಕು ಸಮೀಪದ ಆನೆಗೊಂದಿ ರಂಗನಾಥ ದೇವಸ್ಥಾನದ ರಥೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು. ದೇವಸ್ಥಾನ ಆವರಣದಿಂದ ಗ್ರಾಮದ ಪಾದಗಟ್ಟೆವರೆಗೆ ರಥ ಎಳೆಯಲಾಯಿತು. ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಭಾವ ಮೆರೆದರು. ಐತಿಹಾಸಿಕ ದೇವಸ್ಥಾನ ಎಂಬ ಖ್ಯಾತಿ ಪಡೆದಿರುವ ರಂಗನಾಥ ದೇವರಸ್ಥಾನದಲ್ಲಿ ಬೆಳಗ್ಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಆನೆಗೊಂದಿ ರಾಜವಂಶಸ್ಥರಾದ ನರಸಿಂಹದೇವರಾಯಲು, ಕೃಷ್ಣದೇವರಾಯ, ಹರಿಹರ ದೇವರಾಯ ಸೇರಿದಂತೆ ಇತರರು ಇದ್ದರು.
ರಂಗನಾಥ ದೇವರ ರಥೋತ್ಸವ
ತಾಲೂಕು ಸಮೀಪದ ಆನೆಗೊಂದಿ ರಂಗನಾಥ ದೇವಸ್ಥಾನದ ರಥೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು. ದೇವಸ್ಥಾನ ಆವರಣದಿಂದ ಗ್ರಾಮದ ಪಾದಗಟ್ಟೆವರೆಗೆ ರಥ ಎಳೆಯಲಾಯಿತು.
Vijaya Karnataka Web 9 Apr 2018, 5:00 am