ಆ್ಯಪ್ನಗರ

ಕೊಪ್ಪಳ: ಪಾರಂಪರಿಕ ವಿರುಪಾಪುರ ಗಡ್ಡೆಯಲ್ಲಿದ್ದ ಅನಧಿಕೃತ ರೆಸಾರ್ಟ್ ಕೊನೆಗೂ‌ ತೆರವು, ಈವರೆಗೆ 20 ರೆಸಾರ್ಟ್ಸ್‌‌ ನೆಲಸಮ!

ಅನಧಿಕೃತ ಕಟ್ಟಡಗಳ ತೆರವಿಗೆ ಕಳೆದ ಆರು ತಿಂಗಳ ಹಿಂದೆಯೇ ಕೋರ್ಟ್‌ ಆದೇಶ ನೀಡಿತ್ತು. ಆಗ ಬಹುತೇಕ ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಲಕ್ಷಿತ್ರ್ಮ ಗೋಲ್ಡನ್‌ ಬೀಚ್‌ ರೆಸಾರ್ಟ್‌ ಮಾಲೀಕರು ಮಾತ್ರ ತೆರವು ಕಾರ್ಯಾಚರಣೆ ಪ್ರಶ್ನಿಸಿ, ಕೋರ್ಟ್‌ ಮೊರೆ ಹೋಗಿದ್ದರು.

Vijaya Karnataka Web 2 Oct 2020, 10:52 am
ಗಂಗಾವತಿ: ಹಂಪಿ ವಿಶ್ವ ಪರಂಪರೆ ವ್ಯಾಪ್ತಿಯಲ್ಲಿರುವ ವಿರುಪಾಪುರಗಡ್ಡೆಯಲ್ಲಿ ನಿರ್ಮಿಸಿದ್ದ ಅನಧಿಕೃತ ರೆಸಾರ್ಟ್‌ನ್ನು ಹಂಪಿ ಪ್ರಾಧಿಕಾರ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾಡಳಿತದ ನೇತೃತ್ವದಲ್ಲಿ ಗುರುವಾರ ತೆರವು ಮಾಡಲಾಯಿತು.
Vijaya Karnataka Web KPL-2


ಅನಧಿಕೃತ ಕಟ್ಟಡಗಳ ತೆರವಿಗೆ ಕಳೆದ ಆರು ತಿಂಗಳ ಹಿಂದೆಯೇ ಕೋರ್ಟ್‌ ಆದೇಶ ನೀಡಿತ್ತು. ಆಗ ಬಹುತೇಕ ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಲಕ್ಷಿತ್ರ್ಮ ಗೋಲ್ಡನ್‌ ಬೀಚ್‌ ರೆಸಾರ್ಟ್‌ ಮಾಲೀಕರು ಮಾತ್ರ ತೆರವು ಕಾರ್ಯಾಚರಣೆ ಪ್ರಶ್ನಿಸಿ, ಕೋರ್ಟ್‌ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಕೋರ್ಟ್‌, ರೆಸಾರ್ಟ್‌ ತೆರವಿಗೆ ಇತ್ತೀಚೆಗೆ ಆದೇಶ ನೀಡಿದೆ. ತೆರವು ಕಾರ್ಯಾಚರಣೆ ವೇಳೆ ಹಂಪಿ ಪ್ರಾಧಿಕಾರ ಇಲಾಖೆ ಆಯುಕ್ತ ಬಿ.ಎನ್‌.ಲೋಕೇಶ್‌, ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಸಿದ್ಧರಾಮೇಶ, ತಹಸೀಲ್ದಾರ್‌ ಎಂ.ರೇಣುಕಾ, ಡಿವೈಎಸ್ಪಿ ರುದ್ರೇಶ್‌ ಉಜ್ಜಿನಕೊಪ್ಪ, ಪಿಎಸ್‌ಐ ದೊಡ್ಡಪ್ಪ ಹಾಗೂ ಇತರರಿದ್ದರು. ಇನ್ನು ಕೋರ್ಟ್‌ ಆದೇಶದಂತೆ ಈ ಹಿಂದೆ ಇದೇ ಸ್ಥಳಗಳಲ್ಲಿ ಎದ್ದು ನಿಂತಿದ್ದ 19 ಅನಧಿಕೃತ ರೆಸಾರ್ಟ್‌ಗಳನ್ನು ನೆಲಸಮ ಮಾಡಲಾಗಿತ್ತು.

ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇವಿಯ ದರ್ಶನ ಭಾಗ್ಯ ಮತ್ತೆ 15 ದಿನ ಮುಂದೂಡಿಕೆ

ಕಳೆದ 2011ರಿಂದ ಇಲ್ಲಿರುವ ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿತ್ತು. ಆದರೆ ಅಧಿಕಾರಿಗಳು ತೆರವಿಗೆ ತೆರಳಿದಾಗ ಎಲ್ಲ ರೆಸಾರ್ಟ್‌ ಮಾಲೀಕರು ಕೋರ್ಟ್‌ನತ್ತ ಓಡುತ್ತಿದ್ದರು. ಈ ಹಿನ್ನೆಲೆ ತೆರವಿಗೆ ಕೊಂಚ ಹಿನ್ನಡೆಯಾಗಿತ್ತು. ಇದೀಗ ಕೊನೆಗೂ ಎಲ್ಲಾ ಅಕ್ರಮ ರೆಸಾರ್ಟ್‌ಗಳು ತೆರವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ