ಆ್ಯಪ್ನಗರ

ನಾಮಪತ್ರ ಸಲ್ಲಿಕೆ ಕೊನೆ ದಿನ ಬಿರು ಬಿಸಿಲಿನಲ್ಲಿ ರೋಡ್‌ ಶೋ

ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆ ದಿನವಾಗಿದ್ದು, ಜೆಡಿಎಸ್‌, ಎಂಇಪಿ, ಸಿಪಿಐಎಂ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದರು.

Vijaya Karnataka 25 Apr 2018, 5:00 am
ಗಂಗಾವತಿ : ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆ ದಿನವಾಗಿದ್ದು, ಜೆಡಿಎಸ್‌, ಎಂಇಪಿ, ಸಿಪಿಐಎಂ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದರು.
Vijaya Karnataka Web KPL-KPL24GVT01


ಗಂಗಾವತಿ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿ ಕರಿಯಣ್ಣ ಸಂಗಟಿ ಸಾವಿರಾರು ಜನ ಕಾರ್ಯಕರ್ತರೊಂದಿಗೆ ರೋಡ್‌ ಶೋ ನಡೆಸಿ ತಹಸಿಲ್‌ ಕಚೇರಿಯಲ್ಲಿನ ನಾಮಪತ್ರ ಸಲ್ಲಿಸಿದರು. ನಗರದ ಗಂಗಾವತಿ ವೃತ್ತದಿಂದ ಗಣೇಶ ಸರ್ಕಲ್‌, ಭಗೀರಥ ವೃತ್ತ, ನೀಲಕಂಠೇಶ್ವರ ವೃತ್ತ, ಶ್ರೀಕೃಷ್ಣದೇವರಾಯ ವೃತ್ತ ಸೇರಿದಂತೆ ಇತರೆ ಕಡೆ ಮೆರವಣಿಗೆ ನಡೆಸಿದರು.

ಸಿಪಿಐಎಂ:
ಸಿಪಿಐಎಂ ಅಭ್ಯರ್ಥಿ ನಾಗರಾಜ ಗುರುಶಾಂತನವರ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ 10 ಗಂಟೆಗೆ ನಗರದ ಸಿಬಿಎಸ್‌ ವೃತ್ತದಿಂದ ಮಹಾವೀರ ಸರ್ಕಲ್‌, ಗಾಂಧಿವೃತ್ತ, ಬಸವಣ್ಣ ಸರ್ಕಲ್‌, ಪಂಪಾನಗರ, ಅಂಬೇಡ್ಕರ್‌ ನಗರ ಸೇರಿದಂತೆ ನಾನಾ ಕಡೆ ಮೆರವಣಿಗೆ ನಡೆಸಿದರು. ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನಿಂದ ಆಗಮಿಸಿದ್ದ ಎಂಇಪಿ ಅಭ್ಯರ್ಥಿ ವಿನಯಕುಮಾರ ರೆಡ್ಡಿ ಪಕ್ಷದ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದರು.

ಬಿಸಿಲಲ್ಲಿ ರೋಡ್‌ ಶೋ: ಬಿರು ಬಿಸಿಲಿನಲ್ಲಿ ನಾಮಪತ್ರ ಸಲ್ಲಿಕೆ ಮುನ್ನ ನಾನಾ ಪಕ್ಷದ ಕಾರ್ಯಕರ್ತರು ರೋಡ್‌ ಶೋ ನಡೆಸಿದರು. ಬಿಸಿಲಿನ ತಾಪಕ್ಕೆ ಕಾರ್ಯಕರ್ತರು ಸಂಕಟ ಪಡಬೇಕಾಯಿತು. ಮಹಿಳೆಯರು ಮಕ್ಕಳೊಂದಿಗೆ ಆಗಮಿಸಿದ್ದ ಕಾರ್ಯಕರ್ತರು ರೋಡ್‌ ಶೋ ಉದ್ದಕ್ಕೂ ಗಿಡ ಮರಗಳ ನೆರಳಿನ ಆಸರೆ ಪಡೆದರು. ರಮೇಶ ಜೋಗಿನ್‌, ದಿಗಂಬರರಾವ್‌, ಸೈಯದ್‌ ಜರಿಯಣ್ಣ , ಫಾತೀಮಾ, ಆಯಿಶಾ ಬೇಗಂ ಸೇರಿದಂತೆ ಇತರರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಆರ್‌.ಶ್ರೀನಾಥ, ಅಭ್ಯರ್ಥಿ ಕರಿಯಣ್ಣ ಸಂಗಟಿ, ನಗರ ಘಟಕದ ಅಧ್ಯಕ್ಷ ಶೇಖ್‌ ನಬಿಸಾಬ್‌ ಮುಖಂಡರಾದ ಪಿ.ಅಖ್ತರ್‌ಸಾಬ್‌, ರಾಘವೇಂದ್ರ, ನಿಧಿ ಚಕ್ರವರ್ತಿ. ಎಂಇಪಿ ಅಭ್ಯರ್ಥಿ ವಿನಯಕುಮಾರ ರೆಡ್ಡಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ