ಆ್ಯಪ್ನಗರ

ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರ ಮನೆಯಲ್ಲಿ 8.18ಲಕ್ಷ ರೂ. ಪತ್ತೆ

ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಅವರ ಮನೆ ಮೇಲೆ ಚುನಾವಣಾಧಿಕಾರಿಗಳ ತಂಡ ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದು, ಮಂಚದ ಕೆಳಗೆ ಬಚ್ಚಿಟ್ಟಿದ್ದ 8.18ಲಕ್ಷ ರೂ. ಪತ್ತೆಯಾಗಿದೆ.

Vijaya Karnataka 10 May 2018, 12:00 am
ಗಂಗಾವತಿ: ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಅವರ ಮನೆ ಮೇಲೆ ಚುನಾವಣಾಧಿಕಾರಿಗಳ ತಂಡ ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದು, ಮಂಚದ ಕೆಳಗೆ ಬಚ್ಚಿಟ್ಟಿದ್ದ 8.18ಲಕ್ಷ ರೂ. ಪತ್ತೆಯಾಗಿದೆ.
Vijaya Karnataka Web KPL-KPL09GVT01


ತಹಸೀಲ್ದಾರ್ ಸಂತೋಷಿದೇವಿ, ಫ್ಲೈಯಿಂಗ್ ಸ್ಕ್ವಾಡ್ ಜಂಬಣ್ಣ ಐಲಿ ನೇತೃತ್ವದ ತಂಡ, ದಾಳಿ ನಡೆಸಿದೆ. ಈ ತಂಡ, ಸಿಂಗನಾಳ ವಿರೂಪಾಕ್ಷಪ್ಪ ಅವರ ನಿವಾಸದ ಎಲ್ಲ ಕೊಠಡಿಗಳನ್ನು ಪರಿಶೀಲಿಸಿತು. ಚೀಲವೊಂದರಲ್ಲಿ ಕಟ್ಟಿ ಮಂಚದ ಕೆಳಗೆ ಇಟ್ಟಿದ್ದ 8.18ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಯಿತು. ಮತ್ತೊಂದೆಡೆ ಅಬಕಾರಿ ಸಿಪಿಐ ಮಹಾದೇವ ಪೂಜಾರ ಅವರು, ಮನೆಯ ಆವರಣದ ಗೋದಾಮು, ಸರಕು ಸಾಗಣೆ ಲಾರಿ, ಟ್ರ್ಯಾಕ್ಟರ್‌ಗಳನ್ನು ತಪಾಸಣೆ ನಡೆಸಿದರು. ಸಿಂಗನಾಳ ವಿರೂಪಾಕ್ಷಪ್ಪ ಅವರ ಸೋದರ ಸುರೇಶ ಸಿಂಗನಾಳ ಅವರಿಗೆ ಸೇರಿದ ಕಚೇರಿ ಹಾಗೂ ಗೋದಾಮು ಪರಿಶೀಲಿಸಿದರು.

30 ಸಾವಿರ ರೂ. ಪತ್ತೆ: ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅವರ ಆಪ್ತ ಶಾಮಿದ್ ಮನಿಯಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಹಾಯಕ ಆಯುಕ್ತ, ಚುನಾವಣಾಧಿಕಾರಿ ರವಿ ಎಂ.ತಿರ್ಲಾಪುರ 30 ಸಾವಿರ ರೂ. ಜಪ್ತಿ ಮಾಡಿದರು. ಚುನಾವಣಾ ಆಯೋಗದ ನಿಯಮಾನುಸಾರ ಒಬ್ಬ ವ್ಯಕ್ತಿ ಮನೆ ಖರ್ಚು ವೆಚ್ಚಕ್ಕೆ 50 ಸಾವಿರ ರೂ. ನಗದು ಇಟ್ಟುಕೊಳ್ಳಬಹುದು. ಆದರೂ ಅದಕ್ಕಿಂತ ಕಡಿಮೆ ಮೊತ್ತ ಪತ್ತೆಯಾದರೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಶಾಮಿದ್ ಮನಿಯಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ