ರವಿ ಪಿ.ನಾಯಕ, ಗಂಗಾವತಿ
ತುಂಗಭದ್ರಾ ನದಿ, ಹಳ್ಳ-ಕೊಳ್ಳಗಳಲ್ಲಿ ಮರಳು ಅಕ್ರಮ ಸಾಗಣೆ ದಂಧೆ ಜೋರಾಗಿ ನಡೆಯುತ್ತಿದೆ. ಒಂದೇ ಪರವಾನಗಿ ಮೇಲೆ ದಿನವಿಡೀ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ನಿಯಮ ಗಾಳಿಗೆ ತೂರಿ ತಾಲೂಕು ವ್ಯಾಪ್ತಿಯ ನಾನಾ ಕಡೆ ಮರಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ದೂರು, ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಅಕ್ರಮ ನಿಯಂತ್ರಣ ಮಾಡುತ್ತಿರುವುದನ್ನು ಬಿಟ್ಟರೆ, ಸಂಬಂಧ ಪಟ್ಟ ನಾನಾ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ದಂಧೆಕೋರರಿಗೆ ವರವಾಗಿ ಪರಿಣಮಿಸಿದೆ.
ಜಿಪಿಎಸ್ ಮಾಯ: ಮರಳು ಸಾಗಣೆಗೆ ಪರವಾನಗಿ ಪಡೆಯುತ್ತಿರುವ ಲಾರಿ,ಟ್ರ್ಯಾಕ್ಟರ್ಗಳಿಗೆ ಜಿಪಿಎಸ್ ವ್ಯವಸ್ಥೆ ಇಲ್ಲದಿದ್ದರೂ ಪರವಾನಗಿ ನೀಡಲಾಗುತ್ತಿದೆ. ಮರಳು ಅಕ್ರಮ ಸಾಗಣೆ ಮಾಲೀಕರ ಒತ್ತಡಕ್ಕೆ ಮಣಿದಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮರಳು ಸಾಗಣೆ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮರಳು ಸಾಗಣೆ ಮಾಡುತ್ತಿರುವ ವಾಹನಗಳ ದಾಖಲೆ, ಜಿಪಿಎಸ್, ನಂಬರ್ ಪ್ಲೇಟ್ ಸೇರಿದಂತೆ ಇತರೆ ದಾಖಲೆ ತೋರಿಸಿ ಪರವಾನಗಿ ಪಡೆಯಬೇಕು. ಆದರೆ, ಲೋಕೋಪಯೋಗಿ ಇಲಾಖೆಯಲ್ಲಿ ಕೆಲವರಿಗೆ ಸಲೀಸಾಗಿ ಪರವಾನಗಿ ಕೈಸೇರುತ್ತಿದೆ.
ಎಲ್ಲೆಲ್ಲಿ ಅಕ್ರಮ? : ಸಮೀಪದ ಮರಕುಂಬಿ, ಕೇಸರಹಟ್ಟಿ, ಚಿಕ್ಕಜಂತಕಲ್, ಶ್ರೀರಾಮನಗರ, ಮುಸ್ಟೂರು, ಮರಳಿ ಸೇರಿದಂತೆ ನಾನಾ ಕಡೆಗಳಲ್ಲಿನ ಹಳ್ಳದಿಂದ ಮರಳು ಅಕ್ರಮ ಸಾಗಣೆ ನಡೆಸಲಾಗುತ್ತಿದೆ. ಹಗಲಿನಲ್ಲಿ ಮರಳು ಸಂಗ್ರಹ ಮಾಡಿ ರಾತ್ರಿಯಿಡೀ ಸಾಗಣೆ ಮಾಡಲಾಗುತ್ತದೆ. ಲೋಕೋಪಯೋಗಿ ಇಲಾಖೆ ಟೆಂಡರ್ ಪ್ರಕ್ರಿಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಕ್ಕರಗೋಳ ಗ್ರಾಮ ವ್ಯಾಪ್ತಿಯಲ್ಲಿ 6 ಬ್ಲಾಕ್ಗಳಿವೆ. ನಂದಿಹಳ್ಳಿ 1, ನಂದಿಹಳ್ಳಿ-2, ಬೂನಹಟ್ಟಿ-1, ಕೊಟ್ನೆಕಲ್-ಬರಗೂರು-1, ಕುಂಟೋಜಿ ಸೇರಿದಂತೆ ಒಟ್ಟು 8 ಬ್ಲಾಕ್ಗಳಿವೆ. ಈ ಪೈಕಿ 3 ಮಾತ್ರ ಚಾಲ್ತಿಯಲ್ಲಿವೆ. ಬಾಕಿ 6 ಬ್ಲಾಕ್ಗಳ ಟೆಂಡರ್ ಅವಧಿ ಮುಕ್ತಾಯಗೊಂಡಿದೆ. ಟೆಂಡರ್ ಮುಕ್ತಾಯಗೊಂಡಿರುವ ಬ್ಲಾಕ್ಗಳಿಂದ ರಾತ್ರಿ ಮರಳು ಸಾಗಣೆ ಮಾಡಲಾಗುತ್ತಿದೆ.
ಏಜೆಂಟರ ಕರಾಮತ್ತು: ಸಮೀಪದ ಮರಕುಂಬಿ ಗ್ರಾಮದ ಬಳಿಯ ಹಳ್ಳದಲ್ಲಿ ರಾಶಿ ಮಾಡಿರುವ ಮರಳು ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸ್ ತಂಡ ಇತ್ತೀಚೆಗೆ ದಾಳಿ ನಡೆಸಿತ್ತು. ಆದರೆ, ಮಾಹಿತಿ ತಿಳಿದ ಅಕ್ರಮ ಮರಳು ದಂಧೆಕೋರರು ಟ್ರ್ಯಾಕ್ಟರ್, ವಾಹನ ಸಮೇತ ಪರಾರಿಯಾಗಿದ್ದಾರೆ. ಮರಳು ಸಾಗಣೆ ಮತ್ತು ಬೇಡಿಕೆ ತಕ್ಕಂತೆ ನಾನಾ ಗ್ರಾಮದಲ್ಲಿ ಮರಳು ಪೂರೈಕೆ ಮಾಡುವ ಏಜೆಂಟರುಗಳಿದ್ದಾರೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಿಗೆ ಮರಳು ಪೂರೈಕೆಗೆ ಸ್ವಯಂ ಘೋಷಿತ ದರಗಳು ನಿಗದಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ತಾಲೂಕು, ಜಿಲ್ಲೆಗಳಿಗೆ ಮರಳು ಸಾಗಣೆಗೆ ಟ್ರ್ಯಾಕ್ಟರ್ಗೆ 6 ರಿಂದ 7 ಸಾವಿರ ರೂ. ಇದ್ದರೆ, ಲಾರಿಗಳಿಗೆ 25 ರಿಂದ 30 ಸಾವಿರ ರೂ. ದರ ನಿಗದಿ ಮಾಡಿದ್ದಾರೆ. ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನಿಸುವ ಮೂಲಕ ತಾಲೂಕಿನಲ್ಲಿ ವ್ಯಾಪಕ ಮರಳು ದಂಧೆ ನಡೆಯುತ್ತಿದೆ. ಕಣ್ಣು ಮುಚ್ಚಿ ಪರವಾನಗಿ ನೀಡುತ್ತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮರಳು ಅಕ್ರಮ ಸಾಗಣೆದಾರರಿಗೆ ವರವಾಗಿ ಪರಿಣಮಿಸಿದೆ.
ಗಂಗಾವತಿ ತಾಲೂಕು ವ್ಯಾಪ್ತಿಯ ನಾನಾ ಬ್ಲಾಕ್, ತುಂಗಭದ್ರಾ ನದಿ ತೀರದ ಮರಳಿಗೆ ಬಾರಿ ಬೇಡಿಕೆ ಬಂದಿದೆ. ವಾರದಲ್ಲಿ ಮೂರು ದಿನ ನೆರೆಯ ಜಿಲ್ಲೆಗಳಿಗೆ ಪರವಾನಗಿ ಇಲ್ಲಿ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಮರಳು ಅಕ್ರಮ ಸಾಗಣೆ ನಡೆಸಲಾಗುತ್ತಿದೆ. ಸರಕಾರಿ ರಜಾ ದಿನಗಳಲ್ಲಿ ಹಳೆ ಪರವಾನಗಿ ಮೇಲೆ ಮರಳು ಸಾಗಣೆ ನಡೆಯುತ್ತಿದೆ. ಇದರ ಕಡಿವಾಣಕ್ಕೆ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ತುಂಗಭದ್ರಾ ನದಿ, ಹಳ್ಳ-ಕೊಳ್ಳಗಳಲ್ಲಿ ಮರಳು ಅಕ್ರಮ ಸಾಗಣೆ ದಂಧೆ ಜೋರಾಗಿ ನಡೆಯುತ್ತಿದೆ. ಒಂದೇ ಪರವಾನಗಿ ಮೇಲೆ ದಿನವಿಡೀ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ನಿಯಮ ಗಾಳಿಗೆ ತೂರಿ ತಾಲೂಕು ವ್ಯಾಪ್ತಿಯ ನಾನಾ ಕಡೆ ಮರಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ದೂರು, ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಅಕ್ರಮ ನಿಯಂತ್ರಣ ಮಾಡುತ್ತಿರುವುದನ್ನು ಬಿಟ್ಟರೆ, ಸಂಬಂಧ ಪಟ್ಟ ನಾನಾ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ದಂಧೆಕೋರರಿಗೆ ವರವಾಗಿ ಪರಿಣಮಿಸಿದೆ.
ಜಿಪಿಎಸ್ ಮಾಯ: ಮರಳು ಸಾಗಣೆಗೆ ಪರವಾನಗಿ ಪಡೆಯುತ್ತಿರುವ ಲಾರಿ,ಟ್ರ್ಯಾಕ್ಟರ್ಗಳಿಗೆ ಜಿಪಿಎಸ್ ವ್ಯವಸ್ಥೆ ಇಲ್ಲದಿದ್ದರೂ ಪರವಾನಗಿ ನೀಡಲಾಗುತ್ತಿದೆ. ಮರಳು ಅಕ್ರಮ ಸಾಗಣೆ ಮಾಲೀಕರ ಒತ್ತಡಕ್ಕೆ ಮಣಿದಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮರಳು ಸಾಗಣೆ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮರಳು ಸಾಗಣೆ ಮಾಡುತ್ತಿರುವ ವಾಹನಗಳ ದಾಖಲೆ, ಜಿಪಿಎಸ್, ನಂಬರ್ ಪ್ಲೇಟ್ ಸೇರಿದಂತೆ ಇತರೆ ದಾಖಲೆ ತೋರಿಸಿ ಪರವಾನಗಿ ಪಡೆಯಬೇಕು. ಆದರೆ, ಲೋಕೋಪಯೋಗಿ ಇಲಾಖೆಯಲ್ಲಿ ಕೆಲವರಿಗೆ ಸಲೀಸಾಗಿ ಪರವಾನಗಿ ಕೈಸೇರುತ್ತಿದೆ.
ಎಲ್ಲೆಲ್ಲಿ ಅಕ್ರಮ? : ಸಮೀಪದ ಮರಕುಂಬಿ, ಕೇಸರಹಟ್ಟಿ, ಚಿಕ್ಕಜಂತಕಲ್, ಶ್ರೀರಾಮನಗರ, ಮುಸ್ಟೂರು, ಮರಳಿ ಸೇರಿದಂತೆ ನಾನಾ ಕಡೆಗಳಲ್ಲಿನ ಹಳ್ಳದಿಂದ ಮರಳು ಅಕ್ರಮ ಸಾಗಣೆ ನಡೆಸಲಾಗುತ್ತಿದೆ. ಹಗಲಿನಲ್ಲಿ ಮರಳು ಸಂಗ್ರಹ ಮಾಡಿ ರಾತ್ರಿಯಿಡೀ ಸಾಗಣೆ ಮಾಡಲಾಗುತ್ತದೆ. ಲೋಕೋಪಯೋಗಿ ಇಲಾಖೆ ಟೆಂಡರ್ ಪ್ರಕ್ರಿಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಕ್ಕರಗೋಳ ಗ್ರಾಮ ವ್ಯಾಪ್ತಿಯಲ್ಲಿ 6 ಬ್ಲಾಕ್ಗಳಿವೆ. ನಂದಿಹಳ್ಳಿ 1, ನಂದಿಹಳ್ಳಿ-2, ಬೂನಹಟ್ಟಿ-1, ಕೊಟ್ನೆಕಲ್-ಬರಗೂರು-1, ಕುಂಟೋಜಿ ಸೇರಿದಂತೆ ಒಟ್ಟು 8 ಬ್ಲಾಕ್ಗಳಿವೆ. ಈ ಪೈಕಿ 3 ಮಾತ್ರ ಚಾಲ್ತಿಯಲ್ಲಿವೆ. ಬಾಕಿ 6 ಬ್ಲಾಕ್ಗಳ ಟೆಂಡರ್ ಅವಧಿ ಮುಕ್ತಾಯಗೊಂಡಿದೆ. ಟೆಂಡರ್ ಮುಕ್ತಾಯಗೊಂಡಿರುವ ಬ್ಲಾಕ್ಗಳಿಂದ ರಾತ್ರಿ ಮರಳು ಸಾಗಣೆ ಮಾಡಲಾಗುತ್ತಿದೆ.
ಏಜೆಂಟರ ಕರಾಮತ್ತು: ಸಮೀಪದ ಮರಕುಂಬಿ ಗ್ರಾಮದ ಬಳಿಯ ಹಳ್ಳದಲ್ಲಿ ರಾಶಿ ಮಾಡಿರುವ ಮರಳು ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸ್ ತಂಡ ಇತ್ತೀಚೆಗೆ ದಾಳಿ ನಡೆಸಿತ್ತು. ಆದರೆ, ಮಾಹಿತಿ ತಿಳಿದ ಅಕ್ರಮ ಮರಳು ದಂಧೆಕೋರರು ಟ್ರ್ಯಾಕ್ಟರ್, ವಾಹನ ಸಮೇತ ಪರಾರಿಯಾಗಿದ್ದಾರೆ. ಮರಳು ಸಾಗಣೆ ಮತ್ತು ಬೇಡಿಕೆ ತಕ್ಕಂತೆ ನಾನಾ ಗ್ರಾಮದಲ್ಲಿ ಮರಳು ಪೂರೈಕೆ ಮಾಡುವ ಏಜೆಂಟರುಗಳಿದ್ದಾರೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಿಗೆ ಮರಳು ಪೂರೈಕೆಗೆ ಸ್ವಯಂ ಘೋಷಿತ ದರಗಳು ನಿಗದಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ತಾಲೂಕು, ಜಿಲ್ಲೆಗಳಿಗೆ ಮರಳು ಸಾಗಣೆಗೆ ಟ್ರ್ಯಾಕ್ಟರ್ಗೆ 6 ರಿಂದ 7 ಸಾವಿರ ರೂ. ಇದ್ದರೆ, ಲಾರಿಗಳಿಗೆ 25 ರಿಂದ 30 ಸಾವಿರ ರೂ. ದರ ನಿಗದಿ ಮಾಡಿದ್ದಾರೆ. ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನಿಸುವ ಮೂಲಕ ತಾಲೂಕಿನಲ್ಲಿ ವ್ಯಾಪಕ ಮರಳು ದಂಧೆ ನಡೆಯುತ್ತಿದೆ. ಕಣ್ಣು ಮುಚ್ಚಿ ಪರವಾನಗಿ ನೀಡುತ್ತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮರಳು ಅಕ್ರಮ ಸಾಗಣೆದಾರರಿಗೆ ವರವಾಗಿ ಪರಿಣಮಿಸಿದೆ.
ಗಂಗಾವತಿ ತಾಲೂಕು ವ್ಯಾಪ್ತಿಯ ನಾನಾ ಬ್ಲಾಕ್, ತುಂಗಭದ್ರಾ ನದಿ ತೀರದ ಮರಳಿಗೆ ಬಾರಿ ಬೇಡಿಕೆ ಬಂದಿದೆ. ವಾರದಲ್ಲಿ ಮೂರು ದಿನ ನೆರೆಯ ಜಿಲ್ಲೆಗಳಿಗೆ ಪರವಾನಗಿ ಇಲ್ಲಿ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಮರಳು ಅಕ್ರಮ ಸಾಗಣೆ ನಡೆಸಲಾಗುತ್ತಿದೆ. ಸರಕಾರಿ ರಜಾ ದಿನಗಳಲ್ಲಿ ಹಳೆ ಪರವಾನಗಿ ಮೇಲೆ ಮರಳು ಸಾಗಣೆ ನಡೆಯುತ್ತಿದೆ. ಇದರ ಕಡಿವಾಣಕ್ಕೆ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.