ಆ್ಯಪ್ನಗರ

ಕೊಪ್ಪಳದಲ್ಲಿ ಹಿಂದೂ-ಮುಸ್ಲಿಂ ನೇಕಾರ ಕುಟುಂಬಗಳಿಂದ ಮೂಷಿಕನಿಗೆ ವಿಶೇಷ ಪೂಜೆ

ಸೀರೆಯ ನೂಲನ್ನು ಇಲಿಗಳು ತಿನ್ನದಿರಲಿ ಎಂಬ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣದಲ್ಲಿ ಗಣೇಶ ಹಬ್ಬದ ಮರುದಿನ ಇಲಿಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

Vijaya Karnataka Web 3 Sep 2019, 2:32 pm
ಕೊಪ್ಪಳ: ನಗರ ಸಮೀಪದ ಭಾಗ್ಯನಗರ ಪಟ್ಟಣದಲ್ಲಿ ಗಣೇಶನ ವಾಹನ ಇಲಿಗೆ ವಿಶೇಷ ಪೂಜೆಯನ್ನು ಮಂಗಳವಾರ ಸಲ್ಲಿಸಲಾಯಿತು. ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮರುದಿನವೇ ಗಣೇಶನ ವಾಹನ ಇಲಿಗೆ ಪೂಜೆ ಸಲ್ಲಿಸುವ ಪದ್ಧತಿ ಇಲ್ಲಿ ರೂಢಿಯಲ್ಲಿದೆ. ಹಿಂದೂ- ಮುಸ್ಲಿಂ ಸಮುದಾಯದ ನೇಕಾರ ಕುಟುಂಬಗಳು ಇಲಿಗೆ ಪೂಜೆ ಮಾಡುತ್ತವೆ.
Vijaya Karnataka Web Mushik Worship


ಭಾಗ್ಯನಗರ ಪಟ್ಟಣದ ನೇಕಾರ ಕುಟುಂಬದ ಜೀವನ ನಿರ್ವಹಣೆಗೆ ನೂಲೇ ಆಧಾರವಾಗಿದೆ. ನೂಲಿನಿಂದ ಸೀರೆಗಳನ್ನು ತಯಾರಿಸುತ್ತಿದ್ದಾರೆ. ಆದರೆ ಇಲಿಗಳು ನೂಲು ಕತ್ತರಿಸಿದರೆ ಸೀರೆ ವ್ಯರ್ಥವಾಗುತ್ತದೆ. ಆದ್ದರಿಂದ ಗಣೇಶನ ವಾಹನ ಇಲಿ ಪೂಜಿಸುವ ಆಚರಣೆ ಮೊದಲಿನಿಂದಲೂ ಬಂದಿದೆ. ಪೂಜೆ ಮಾಡಿದರೆ ಇಲಿಗಳು ನೂಲು ತಿನ್ನುವುದಿಲ್ಲ ಎಂಬ ನಂಬಿಕೆ ಇದೆ.

ಇಲಿ ಪೂಜೆಗಾಗಿ ಕಡಬು, ಬದನೆಕಾಯಿ ಪಲ್ಲೆ, ಸೊಂಡಿಗೆ, ಹಪ್ಪಳ, ಅನ್ನ, ಸಾಂಬಾರು ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ಮಣ್ಣಿನಿಂದ ತಯಾರಿಸಿದ ಇಲಿ ಇಟ್ಟು ಪೂಜೆ ಮಾಡಿ, ಕಾಯಿ ಒಡೆದು ಕರ್ಪೂರ ಹಾಗೂ ಊದುಬತ್ತಿ ಬೆಳಗುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ