ಆ್ಯಪ್ನಗರ

ಶ್ರದ್ಧಾ, ಭಕ್ತಿಯಿಂದ ಮೊಹರಂ ಆಚರಣೆ

ತಾಲೂಕಾದ್ಯಂತ ಮೊಹರಂ ಹಬ್ಬವನ್ನು ಹಿಂದು-ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಶುಕ್ರವಾರ ಆಚರಿಸಿದರು.

Vijaya Karnataka 22 Sep 2018, 5:00 am
ಕುಷ್ಟಗಿ ; ತಾಲೂಕಾದ್ಯಂತ ಮೊಹರಂ ಹಬ್ಬವನ್ನು ಹಿಂದು-ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಶುಕ್ರವಾರ ಆಚರಿಸಿದರು.
Vijaya Karnataka Web KPL-KPL21KST05


ಗುರುವಾರ ಸಂಜೆ ಕತಲ್‌ರಾತ್‌ ಆಚರಣೆ ವೇಳೆ ಹಿಂದು-ಮುಸ್ಲಿಂ ಸಮುದಾಯದವರು ಅಲಾಯಿದೇವರಿಗೆ ಸಕ್ಕರೆ ಓದಿಸಿಕೊಂಡು ಬರುವುದು ಕಂಡು ಬಂತು. ಪಟ್ಟಣ ಸೇರಿದಂತೆ ಎಲ್ಲ ಮಸೀದಿಗಳಲ್ಲಿ ಭಕ್ತರ ದಂಡು ಹೆಚ್ಚಿತ್ತು. ಪಟ್ಟಣದಲ್ಲಿನ ನಾನಾ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿರುವ ಅಲಾಯಿ ದೇವರಿಗೆ ಹೂವಿನ ಅಲಂಕಾರ ಮಾಡಲು ಭಕ್ತರು ದೌಢಾಯಿಸಿದರು. ಅಲಾಯಿದೇವರಿಗಾಗಿಯೇ ಹೂವಿನ ವ್ಯಾಪಾರಿಗಳು ವಿಶೇಷವಾಗಿ ಶೇರಾಗಳನ್ನು ತಯಾರಿಸಿದ್ದರು. ಹೂವಿನ ದರ ದುಬಾರಿ ಇದ್ದುದರಿಂದ ಪ್ರತಿ ಶೇರಾಗಳಿಗೆ 1ಸಾವಿರ ರೂ.ನಿಂದ 25 ಸಾವಿರ ರೂ.ವರೆಗೆ ಬೆಲೆ ಇತ್ತು. ಹೂವು ಅಭಾವ ತೀವ್ರವಾಗಿರುವ ಪರಿಣಾಮ ಬೇರೆ ಕಡೆಯಿಂದ ತರಿಸಲಾಗಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಒಂದೂವರೆ ಮಾರು ಹೂವಿಗೆ 100ರೂ. ಇತ್ತು.

ಶುಕ್ರವಾರ ಬೆಳಗಿನ ಜಾವ ಅಲಾಯಿ ದೇವರ ಸವಾರಿ ಆರಂಭವಾಯಿತು. ಎಲ್ಲಾ ಮಸೀದಿಗಳಿಂದ ಅಲಾಯಿ ದೇವರು, ಡೋಲಿಗಳನ್ನು ತರಲಾಗಿತ್ತು. ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಸಂಜೆ ಅಲಾಯಿ ದೇವರನ್ನು ಹೊಳೆಗೆ ಕಳುಹಿಸುವ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಎಲ್ಲ ಮಸೀದಿಗಳ ಅಲಾಯಿ ದೇವರು ಮತ್ತು ಡೋಲಿಗಳು ಇಲ್ಲಿನ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಬಳಿಯ ಮೈದಾನದಲ್ಲಿ ಸಮಾವೇಶಗೊಂಡವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ