ಯಲಬುರ್ಗಾ; ಪ್ರಾಥಮಿಕ ಶಾಲಾ ಶಿಕ್ಷ ಕರ ಹೆಚ್ಚುವರಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ತಾಲೂಕು ಘಟಕದಿಂದ ಬಿಇಒ ಕಚೇರಿಯ ವ್ಯವಸ್ಥಾಪಕ ಪದ್ಮನಾಭ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕಾಧ್ಯಕ್ಷ ಮಹೇಶ ಬೆದವಟ್ಟಿ ಮಾತನಾಡಿ, ಶಾಲೆಯಲ್ಲಿನ ಮಕ್ಕಳ ಸಂಖ್ಯೆಗಳ ಅನುಪಾತಕ್ಕೆ ತಕ್ಕಂತೆ ಈಗಾಗಲೇ ಜೂ.6ರಂದು ರಾಜ್ಯಾದ್ಯಂತ ಹೆಚ್ಚುವರಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಜು.2ರಂದು ಅವೈಜ್ಞಾನಿಕವಾಗಿ, ಅಸಮಂಜಸವಾದ ಹೆಚ್ಚುವರಿ ಪ್ರಕ್ರಿಯೆ ಕುರಿತು ಮತ್ತೊಮ್ಮೆ ಆದೇಶ ಹೊರಡಿಸಲಾಗಿದೆ. ಈ ಪ್ರಕ್ರಿಯೆಯನ್ನು ಕೈಗೊಂಡಲ್ಲಿ ತಾಲೂಕಿನಿಂದ ಬಹುತೇಕ ಶಿಕ್ಷ ಕರು ಹೊರ ಹೋಗಬೇಕಾಗುತ್ತದೆ. ಅಲ್ಲದೇ ತಾಲೂಕಿನಲ್ಲಿ ಏಕೋಪಾಧ್ಯಾಯ ಶಾಲೆಗಳಿಗೆ ಸರಕಾರವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇನ್ನು ಹೆಚ್ಚುವರಿ ಪ್ರಕ್ರಿಯೆ ಕೈಗೊಂಡಲ್ಲಿ ಒಂದು ಶಾಲೆಯ ಸಂಪೂರ್ಣ ಜವಾಬ್ದಾರಿ ಒಬ್ಬ ಶಿಕ್ಷ ಕರ ಮೇಲೆ ಬಿದ್ದಂತಾಗುತ್ತದೆ. ಶಾಲೆಗಳ ಸಬಲೀಕರಣ ದೃಷ್ಟಿಯಿಂದ ಸರಕಾರ ಎಚ್ಚೆತ್ತು ಹೆಚ್ಚುವರಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಸಂಘದಿಂದ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ಮುಂದೆ ಜು.14ರಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಶಿಕ್ಷ ಕರಾದ ಎಸ್.ವಿ.ಧರಣಾ, ರೇಣುಕಾ ಬಾಗಲಿ, ಅಕ್ಕಮಹಾದೇವಿ ಹಿರೇಮಠ, ಹನುಮಂತಪ್ಪ ದೊಡ್ಮನಿ, ಮಾರುತೇಶ ತಳವಾರ, ಮಹೇಶ ಅಸೂಟಿ, ಮಹೇಶ ಸಬರದ, ಶರಣಯ್ಯ ಸರಗಣಾಚಾರ, ಸುರೇಶ ಮಡಿವಾಳರ್,ಸಿದ್ದಲಿಂಗಪ್ಪ ಶ್ಯಾಗೋಟಿ, ಬಸಮ್ಮ ಮೇಟಿ ಇತರರಿದ್ದರು.