ಆ್ಯಪ್ನಗರ

ಸಿದ್ದರಾಮಯ್ಯ ಮೊದಲು ತಮ್ಮ ಮನೆ ಸ್ವಚ್ಛಗೊಳಿಸಲಿ: ಮಾಧುಸ್ವಾಮಿ ತಿರುಗೇಟು

ಬಿಜೆಪಿ ಕುರಿತ ಸಿದ್ಧರಾಮಯ್ಯ ಅವರ ಟೀಕೆಗಳಿಗೆ ಮಾಧುಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಮೊದಲು ತಮ್ಮ ಮನೆ ಸ್ವಚ್ಛಗೊಳಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ವಿಕ ಸುದ್ದಿಲೋಕ 10 Sep 2019, 2:03 pm
ಕೊಪ್ಪಳ: ಬಿಜೆಪಿ ಮತ್ತು ಸರಕಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿರುಗೇಟು ನೀಡಿದ್ದೇವೆ.
Vijaya Karnataka Web ಮಾಧುಸ್ವಾಮಿ


ಮಂಗಳವಾರ ಇಡೀ ದಿನ ಕೊಪ್ಪಳ ಜಿಲ್ಲೆ ಪ್ರವಾಸ ಕೈಗೊಂಡಿರುವ ಮಾಧುಸ್ವಾಮಿ, ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊದಲು ಕಾಂಗ್ರೆಸ್ ನವರು ತಮ್ಮ ಮನೆಯನ್ನು ತೊಳೆದುಕೊಳ್ಳಲಿ. ಆನಂತರ ಸಿದ್ದರಾಮಯ್ಯ ಬಿಜೆಪಿ ಬಗ್ಗೆ ಮಾತನಾಡಲಿ. ಸರಕಾರ ರಚನೆಯಾಗಿ ಎರಡು ತಿಂಗಳಾಗಿದೆ. ನಾವು ಕಾಂಗ್ರೆಸ್ ನವರಿಗೆ ನಿಮ್ಮ ಶಾಸಕಾಂಗ ಪಕ್ಷದ ನಾಯಕನ ಹೆಸರು ಕೊಡಿ ಅಂತಾ ಕೇಳಿದ್ದೇವೆ. ಅವರಿಗೆ ಇನ್ನೂ ಹೆಸರು ಕೊಡಲು ಆಗಿಲ್ಲ. ಸಿದ್ದರಾಮಯ್ಯ ಅವರನ್ನು ನಮ್ಮ ನಾಯಕ ಎಂದು ಕಾಂಗ್ರೆಸ್‌ ನ ಅನೇಕರು ಒಪ್ಪುವುದಿಲ್ಲ.

ಡಿಕೆಶಿ, ಎಚ್.ಕೆ.ಪಾಟೀಲ್, ಪರಮೇಶ್ವರ ಬಾಯಿಂದ ನಮ್ಮ ನಾಯಕ ಸಿದ್ದರಾಮಯ್ಯ ಅಂತಾ ಹೇಳಿಸಲಿ ನೋಡೊಣ. ಸಿದ್ದರಾಮಯ್ಯ ಮೊದಲು ತಮ್ಮ ಮನೆ ಸರಿಮಾಡಿಕೊಳ್ಳೋದು ಕಲಿಯಲಿ ಎಂದು ಮಾಧುಸ್ವಾಮಿ ಹೇಳಿದರು.

ಬಿಜೆಪಿ ಸರ್ಕಾರ ಕೇವಲ ಮೂರು ತಿಂಗಳು ಇರುತ್ತೆ ಅನ್ನೋ ಎಚ್ ಡಿಕೆ ಹೇಳಿಕೆ ವಿಚಾರ. ಸಮ್ಮಿಶ್ರ ಸರಕಾರ ಜನರಿಂದ ತಿರಸ್ಕಾರಗೊಂಡು ಬಿದ್ದು ಹೋಗಿತ್ತು. ಆದ್ರೆ ನಾವು ಜನರಿಂದ ಸೈ ಎನಿಸಿಕೊಂಡು ಮೂರು ತಿಂಗಳು ಇದ್ರೆ ಸಾಕು.

ಬಿಜೆಪಿ ವಿರುದ್ದ ಒಕ್ಕಲಿಗ ಸಮಾಜ ಪ್ರತಿಭಟನೆ ವಿಚಾರ, ಡಿಕೆ ಶಿವಕುಮಾರ್ ಬಂಧನ, ಜಾತಿಗೆ-ಧರ್ಮಕ್ಕೆ ಸಂಬಂಧಿಸಿದ ವಿಚಾರವಲ್ಲ. ಇಡಿ ಹತ್ತಿರ ಮಾಹಿತಿ‌ ಇದೆ ತನಿಖೆ ಮಾಡ್ತಾ ಇದ್ದಾರೆ. ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ