ಆ್ಯಪ್ನಗರ

ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಸಮೀಪದ ಹುಳ್ಕಿಹಾಳ ಗ್ರಾ.ಪಂ.ಆವರಣದಲ್ಲಿ 2015-16 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಬುಧವಾರ ನಡೆಯಿತು.

ವಿಕ ಸುದ್ದಿಲೋಕ 25 Mar 2016, 6:24 am
ಗಂಗಾವತಿ; ಸಮೀಪದ ಹುಳ್ಕಿಹಾಳ ಗ್ರಾ.ಪಂ.ಆವರಣದಲ್ಲಿ 2015-16 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಬುಧವಾರ ನಡೆಯಿತು.
Vijaya Karnataka Web social audit meeting
ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ


ತಾಲೂಕು ಸಾಮಾಜಿಕ ಪರಿಶೋಧಕ ವೀರನಗೌಡ ಪಿ. ಮಾತನಾಡಿ, ಕಳೆದ ವರ್ಷದ ಕ್ರಿಯಾಯೋಜನೆಯ ಒಟ್ಟು 44, 84,367 ಲಕ್ಷ ರೂ. ಬಳಕೆ ಮಾಡಲಾಗಿದೆ ಎಂದರು. ಪಿಡಿಒ ಪ್ರಕಾಶ ಹಿರೇಮಠ ಮಾತನಾಡಿ, ಬರಗಾಲದ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ನಮೂನೆ 6ರ ಅರ್ಜಿಯನ್ನು ಭರ್ತಿ ಮಾಡಿಕೊಡಬೇಕು ಎಂದರು. ಗ್ರಾಮದಲ್ಲಿ ಕುಡಿವ ನೀರು ಹಾಗೂ ಮೂಲ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು.

ಗ್ರಾ.ಪಂ. ಅಧ್ಯಕ್ಷ ಅಮರೇಶ ಶಿವನಗುತ್ತಿ, ಸದಸ್ಯರಾದ ವೀರೇಶ ಕಾರಟಗಿ, ಮಂಜುನಾಥ ತೊಂಡಿಹಾಳ, ಕಷ್ಣ ಬೇರಗಿ, ಶಿವಪ್ಪ, ಸತ್ಯನಾರಾಯಣ ಹಾಗೂ ಪ್ರಮುಖರಾದ ರಾಮಣ್ಣ ದಿಂಡೂರ, ಶರಣಪ್ಪ ನಾಯಕ, ಮಲ್ಲೇಶಪ್ಪ ಚಲುವಾದಿ, ಕರವಸೂಲಿಗಾರರಾದ ಅಮರೇಶ ಕಾರಟಗಿ, ಯಂಕೋಬ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ