ಆ್ಯಪ್ನಗರ

ಡಿಸಿಎಂ ಸ್ಥಾನ ನಾನು ಕೇಳಿಲ್ಲ, ಜನರ ಅಭಿಪ್ರಾಯ ಅಷ್ಟೇ: ಶ್ರೀರಾಮುಲು

ವಾಲ್ಮೀಕಿ ಸಮುದಾಯವನ್ನು ಗುರುತಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಬಳ್ಳಾರಿ ವಿಭಜನೆ ಆಗಬೇಕು ಎನ್ನುವುದು ಉಪಚುನಾವಣೆ ಆದ ಮೇಲೆ ತೀರ್ಮಾನವಾಗತ್ತದೆ ಎಂದು ಹೇಳಿದರು.

Vijaya Karnataka Web 14 Oct 2019, 7:29 pm
ಕೊಪ್ಪಳ: ನನಗೆ ಉಪಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇಲ್ಲ. ನಾನು ಡಿ.ಸಿ.ಎಂ ಆಗಬೇಕೆಂದು ಎಲ್ಲಿಯೂ ಹೇಳಿಲ್ಲ. ಜನರ ಅಭಿಪ್ರಾಯ ಇತ್ತು, ಅದನ್ನೇ ಹೇಳಿದ್ದೇನೆ ಎಂದು ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.
Vijaya Karnataka Web ಶ್ರೀರಾಮುಲು
ಶ್ರೀರಾಮುಲು


ನಗರದ ಜಿಲ್ಲಾಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉಪ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರಕ್ಕೆ ನಾನು ಎಲ್ಲೂ ಕೇಳಿಕೊಂಡಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು, ಉಪ ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ಪಕ್ಷ ತೀರ್ಮಾನ ಪಕ್ಷ ಮಾಡುತ್ತದೆ. ಈ ಕುರಿತು ನಾನು ಏನನ್ನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಯಾವುದನ್ನು ಹುಡಕಿಕೊಂಡು ಹೋಗಿಲ್ಲ. ದೇವರು ಕೊಟ್ಟಿದ್ದು ಪಂಚಾಮೃತ. ದೇವರು ಯಾವತ್ತೊ ಒಂದು ದಿನ ಕೊಡಬಹುದು. ನಮ್ಮ ಸಮುದಾಯದಲ್ಲಿ ಡಿ.ಸಿ.ಎಂ ಸ್ಥಾನ ಸಿಗಬೇಕೆಂಬ ಆಸೆ ಇದೆ. ಆದರೆ ನನಗೆ ಪಾರ್ಟಿ ಮುಖ್ಯ ಎಂದು ಶ್ರೀರಾಮುಲು ತಿಳಿಸಿದರು.

ಇದೀಗ ಬೆಳಗಾವಿ - ಮೈಸೂರು ಜಿಲ್ಲೆಗಳಲ್ಲೂ ಪ್ರತ್ಯೇಕ ಜಿಲ್ಲೆ ಕೂಗು ಕೇಳಿಬಂದಿದೆ. ಮಾಜಿ - ಶಾಸಕರು ಮುಖ್ಯಮಂತ್ರಿಗಳು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಮುಂಬರುವ ಉಪ ಚುನಾವಣೆಯಲ್ಲಿ 15 ಸ್ಥಾನಕ್ಕೆ 15 ನಾವು ಗೆಲ್ಲುತ್ತೇವೆ ಶ್ರೀರಾಮುಲು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ