ಆ್ಯಪ್ನಗರ

ಹೃದಯಾಘಾತ ನಂತರ ಬಸ್ ನಿಲ್ಲಿಸಿ ಪ್ರಯಾಣಿಕರ ರಕ್ಷಿಸಿದ ಚಾಲಕ

ತಾಲೂಕಿನ ಕಿಡದಾಳ ಬಳಿ ಗುರುವಾರ, ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು, ಹೃದಯಾಘಾತವಾದ ತಕ್ಷಣ ಬಸ್ ನಿಲ್ಲಿಸಿ, 34 ಪ್ರಯಾಣಿಕರನ್ನು ಅಪಾಯದಿಂದ ರಕ್ಷಿಸಿದ್ದಾರೆ.

Vijaya Karnataka 6 Jul 2018, 12:00 am
ಕೊಪ್ಪಳ: ತಾಲೂಕಿನ ಕಿಡದಾಳ ಬಳಿ ಗುರುವಾರ, ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು, ಹೃದಯಾಘಾತವಾದ ತಕ್ಷಣ ಬಸ್ ನಿಲ್ಲಿಸಿ, 34 ಪ್ರಯಾಣಿಕರನ್ನು ಅಪಾಯದಿಂದ ರಕ್ಷಿಸಿದ್ದಾರೆ.
Vijaya Karnataka Web stop the bus after a heart attack and passenger protected driver
ಹೃದಯಾಘಾತ ನಂತರ ಬಸ್ ನಿಲ್ಲಿಸಿ ಪ್ರಯಾಣಿಕರ ರಕ್ಷಿಸಿದ ಚಾಲಕ


ಬಸ್ ಚಾಲಕ ಅಣ್ಣಿಗೇರಿಯ ಶಿವಪ್ಪ ಹಿರೇಕೊಪ್ಪ ಅವರು ಹೃದಯಾಘಾತಕ್ಕೆ ಒಳಗಾದವರು. ಹುಬ್ಬಳ್ಳಿ ಸಾರಿಗೆ ಘಟಕ 1ನೇ ಡಿಪೋದ ಬಸ್, ಹೈದರಾಬಾದ್‌ದಿಂದ ಹುಬ್ಬಳ್ಳಿಗೆ ಹೊರಟಿತ್ತು. ಕೊಪ್ಪಳ ಇನ್ನೂ 4 ಕಿ.ಮೀ. ಅಂತರದಲ್ಲಿದ್ದಾಗ ಶಿವಪ್ಪ ಅವರಿಗೆ ಹೃದಯಾಘಾತವಾಗಿದೆ. ಬಸ್ ನಿಲ್ಲಿಸಿ, ಕೆಳಗಿಳಿದ ಅವರನ್ನು ಅದೇ ರಸ್ತೆಯಲ್ಲಿ ಬಂದ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ‘‘ತನ್ನ ಜೀವ ಲೆಕ್ಕಿಸದೇ ಚಾಲಕ ನಮ್ಮೆಲ್ಲರ ಪ್ರಾಣ ಉಳಿಸಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ’’ ಎಂದು ಪ್ರಯಾಣಿಕರು ಹಾರೈಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ