ಕೊಪ್ಪಳದಲ್ಲಿ ಶಿಕ್ಷಕರ ವರ್ಗಾವಣೆ: ವಿದ್ಯಾರ್ಥಿಗಳ ಪ್ರತಿಭಟನೆ
ಶಿಕ್ಷಕರ ಮೇಲೆ ವಿದ್ಯಾರ್ಥಿಗಳಿಗೆ ಅಪಾರ ಗೌರವ ಇತ್ತು. ಅವರ ವರ್ಗಾವಣೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ನೋವುಂಟಾಗಿದೆ.
Vijaya Karnataka Web 27 Jun 2019, 3:50 pm
ಕೊಪ್ಪಳ: ತಾಲೂಕಿನ ಬೆಟಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಖಂಡಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಶಿಕ್ಷಕರಾದ ವೀರಣ್ಣ ಮಟ್ಟಿ, ವಿರೂಪಾಕ್ಷಪ್ಪ ಮತಗಟ್ಟಿ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ. ವರ್ಗಾವಣೆ ರದ್ದು ಮಾಡಬೇಕು.
ಇಬ್ಬರು ಶಿಕ್ಷಕರು ಕನ್ನಡ, ಸಮಾಜ ವಿಜ್ಞಾನ ಬೋಧಿಸುತ್ತಿದ್ದರು.
ಹನ್ನೆರಡು ವರ್ಷಗಳಿಂದ ಇದೇ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ. ಉತ್ತಮವಾಗಿ ಬೋಧಿಸುವ ಮೂಲಕ ಶಾಲಾ ಮಕ್ಕಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ಈಗ ವರ್ಗಾವಣೆಯ ನಿಯಮದಿಂದಾಗಿ ಉತ್ತಮ ಶಿಕ್ಷಕರನ್ನು ಕಳೆದುಕೊಳ್ಳುವಂತಾಗಿದೆ. ಕೂಡಲೇ ಇಬ್ಬರು ಶಿಕ್ಷಕರ ವರ್ಗಾವಣೆ ರದ್ದುಗೊಳಿಸಲು ವಿದ್ಯಾರ್ಥಿಗಳು ಒತ್ತಾಯಿಸಿದರು.
ಶಿಕ್ಷಕರಾದ ವೀರಣ್ಣ ಮಟ್ಟಿ, ವಿರೂಪಾಕ್ಷಪ್ಪ ಮತಗಟ್ಟಿ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ. ವರ್ಗಾವಣೆ ರದ್ದು ಮಾಡಬೇಕು.
ಇಬ್ಬರು ಶಿಕ್ಷಕರು ಕನ್ನಡ, ಸಮಾಜ ವಿಜ್ಞಾನ ಬೋಧಿಸುತ್ತಿದ್ದರು.
ಹನ್ನೆರಡು ವರ್ಷಗಳಿಂದ ಇದೇ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ. ಉತ್ತಮವಾಗಿ ಬೋಧಿಸುವ ಮೂಲಕ ಶಾಲಾ ಮಕ್ಕಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ಈಗ ವರ್ಗಾವಣೆಯ ನಿಯಮದಿಂದಾಗಿ ಉತ್ತಮ ಶಿಕ್ಷಕರನ್ನು ಕಳೆದುಕೊಳ್ಳುವಂತಾಗಿದೆ. ಕೂಡಲೇ ಇಬ್ಬರು ಶಿಕ್ಷಕರ ವರ್ಗಾವಣೆ ರದ್ದುಗೊಳಿಸಲು ವಿದ್ಯಾರ್ಥಿಗಳು ಒತ್ತಾಯಿಸಿದರು.