ಆ್ಯಪ್ನಗರ

ಬಿಸಿಲ ಧಗೆ : ಗಿಡದ ನೆರಳೇ ಆಸರೆ

ದಿನದಿಂದ ದಿನಕ್ಕೆ ಬಿಸಿಲ ಧೆಗೆ ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಮನೆಯ ಅಕ್ಕಪಕ್ಕದ ಗಿಡದ ನೆರಳಿನ ಆಸರೆ ಪಡೆಯುತ್ತಿದ್ದಾರೆ.

Vijaya Karnataka 26 Apr 2018, 5:00 am
ಅಳವಂಡಿ : ದಿನದಿಂದ ದಿನಕ್ಕೆ ಬಿಸಿಲ ಧೆಗೆ ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಮನೆಯ ಅಕ್ಕಪಕ್ಕದ ಗಿಡದ ನೆರಳಿನ ಆಸರೆ ಪಡೆಯುತ್ತಿದ್ದಾರೆ.
Vijaya Karnataka Web KPL-KPL25ALD07


ದಿನವೂ 40 ಡಿಗ್ರಿಗೂ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು, ಮನೆಯಲ್ಲಿ ಫ್ಯಾನಿಲ್ಲದೇ ಕುಳಿತುಕೊಳ್ಳುವುದು ಕಷ್ಟಸಾಧ್ಯವಾಗಿದೆ. ಅನಿಯಮಿತ ಲೋಡ್‌ಶೆಡ್ಡಿಂಗ್‌ನಿಂದ ವಿದ್ಯುತ್‌ ಹೊಯ್ದಾಟ ಹೆಚ್ಚಿದ್ದರಿಂದ ಜನರು ಗಿಡ-ಮರಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಸಮೀಪದ ಕವಲೂರು, ಗುಡಗೇರಿ, ಬೆಳಗಟ್ಟಿ, ಹಟ್ಟಿ, ಭೈರಾಪುರ, ಘಟ್ಟಿರೆಡ್ಡಿಹಾಳ, ಬೋಚನಹಳ್ಳಿ, ಕಂಪ್ಲಿ ಮುಂತಾದ ಗ್ರಾಮಗಳಲ್ಲಿ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಬೇವಿನಮರ, ಆಲದಮರ ಸೇರಿದಂತೆ ಇನ್ನಿತರೆ ಮರಗಿಡಗಳ ಕೆಳಗೆ ಸಂಜೆವರೆಗೂ ಜನನಿಬಿಡತೆ ಕಂಡುಬರುತ್ತಿದೆ. ಬಿಸಿಲಿನ ತಾಪದಿಂದ ಮಕ್ಕಳು, ವೃದ್ಧರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ ಕುಡಿವ ನೀರಿನ ಅಭಾವವೂ ಜನಸಾಮಾನ್ಯರನ್ನು ಕಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ