ಆ್ಯಪ್ನಗರ

ಎಲ್‌ಕೆಜಿ ವಿದ್ಯಾರ್ಥಿಗೆ ಥಳಿತ

ತಾಲೂಕಿನ ಹಿರೇಬೊಮ್ಮನಾಳ ಗ್ರಾಮದ ಸುಮಾರು 4 ವರ್ಷದ ಎಲ್‌ಕೆಜಿ ಬಾಲಕನಿಗೆ ಖಾಸಗಿ ಶಾಲೆಯ ಮುಖ್ಯಶಿಕ್ಷಕ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ...

Vijaya Karnataka 2 Jul 2018, 8:23 am
ಕೊಪ್ಪಳ: ತಾಲೂಕಿನ ಹಿರೇಬೊಮ್ಮನಾಳ ಗ್ರಾಮದ ಸುಮಾರು 4 ವರ್ಷದ ಎಲ್‌ಕೆಜಿ ಬಾಲಕನಿಗೆ ಖಾಸಗಿ ಶಾಲೆಯ ಮುಖ್ಯಶಿಕ್ಷಕ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
Vijaya Karnataka Web LKG student


ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿನ ಮಂಜುನಾಥ್‌ ಪಬ್ಲಿಕ್‌ ಶಾಲೆಯ ಮುಖ್ಯಗುರು ಪ್ರಭು ಮೇಣೆದಾಳ ಎಂಬಾತ ಕೃತ್ಯ ಎಸಗಿದ್ದಾರೆ. ಹೋಮ್‌ವರ್ಕ್‌ ಮಾಡಿಲ್ಲವೆಂದು ಮೈತುಂಬಾ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂದು ಗ್ರಾಮಕ್ಕೆ ಭೇಟಿ ನೀಡಿದ ಸುದ್ದಿಗಾರರ ಬಳಿ ಪಾಲಕರು ದೂರಿದರು.

ಕೋಲಿನಿಂದ ಶಿಕ್ಷಕ ಹೊಡೆದಿರುವುದರಿಂದ ಬಾಲಕನ ಚರ್ಮ ಕಿತ್ತು ಬರುವಂತಾಗಿದೆ. ಹೊಡೆತದಿಂದಾಗಿ ಬಾಲಕನಲ್ಲಿ ಜ್ವರ ಕಾಣಿಸಿಕೊಡಿವೆ. ಘಟನೆಯ ನಂತರ ಮುಖ್ಯ ಶಿಕ್ಷಕ ನಾಪತ್ತೆಯಾಗಿದ್ದಾರೆ. ಈ ನಡುವೆ ದೂರು ದಾಖಲಿಸದಂತೆ ಶಾಲೆಯ ಆಡಳಿತ ಮಂಡಳಿಯವರು, ಪಾಲಕರ ಮನವೊಲಿಸಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ವಿದ್ಯಾರ್ಥಿ ಮೈ ಮೇಲೆ ಪೆಟ್ಟು ಬಿದ್ದಿರುವ ಬಳಿಕ ತೆಗೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ