ಆ್ಯಪ್ನಗರ

ತಹಸೀಲ್ದಾರ್ ದಾಳಿ : 3 ರಾಶಿ ಮರಳು ಜಪ್ತಿ

ರಾಜಸ್ವ ನೀಡದೇ ಪಟ್ಟಣದ ಜೆಸ್ಕಾಂ ಕಚೇರಿ ಬಳಿ ಕೆಲವರು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ 3 ರಾಶಿ ಮರಳನ್ನು ತಹಸೀಲ್ದಾರ್ ಮಹಾಬಲೇಶ್ವರ ಅವರು ಭಾನುವಾರ ಜಪ್ತಿ ಮಾಡಿದರು.

Vijaya Karnataka 21 May 2018, 12:00 am
ಹಗರಿಬೊಮ್ಮನಹಳ್ಳಿ: ರಾಜಸ್ವ ನೀಡದೇ ಪಟ್ಟಣದ ಜೆಸ್ಕಾಂ ಕಚೇರಿ ಬಳಿ ಕೆಲವರು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ 3 ರಾಶಿ ಮರಳನ್ನು ತಹಸೀಲ್ದಾರ್ ಮಹಾಬಲೇಶ್ವರ ಅವರು ಭಾನುವಾರ ಜಪ್ತಿ ಮಾಡಿದರು.
Vijaya Karnataka Web BLR-BLY20HBH2


ಒಟ್ಟು 4 ಕಡೆಗಳಲ್ಲಿ ನಡೆಸಿ 3 ಕಡೆಗಳಲ್ಲಿನ ಮರಳನ್ನು ಜಪ್ತಿ ಮಾಡಿದರು. ಈ ವೇಳೆ ರೈತರು ಮತ್ತು ತಹಸೀಲ್ದಾರ್ ನಡುವೆ ವಾಗ್ವಾದ ನಡೆಯಿತು. ಲಾರಿಗಟ್ಟಲೆ ಅಕ್ರಮ ಸಾಗಣೆಯಾಗುತ್ತಿದ್ದರೂ, ವಸತಿ ಯೋಜನೆ ಮನೆಗಳ ನಿರ್ಮಾಣಕ್ಕೆ ಸಂಗ್ರಹಿಸಲಾದ ಮರಳು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ರೈತರ ಮನವಿ ತೀವ್ರಗೊಂಡ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸದೇ ಎಚ್ಚರಿಕೆ ನೀಡಿ ಕೈ ಬಿಡಲಾಯಿತು. ಆದರೆ, ಈ ನಡುವೆ ಗ್ರಾ.ಪಂ.ಮಾಜಿ ಸದಸ್ಯ ಹುಚ್ಚಪ್ಪ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಟ್ಟಿಗೆದ್ದ ತಹಸೀಲ್ದಾರ್, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. ಬಳಿಕ ಮಾತನಾಡಿ, ಹಲವು ಬಾರಿ ಮರಳು ಅಕ್ರಮ ಸಾಗಣೆ ಗುರುತಿಸಿ 10ಸಾವಿರ ರೂ.ನಂತೆ ದಂಡ ವಿಧಿಸಿದರೂ ಸಾಗಣೆ ನಿಂತಿಲ್ಲ. ಮರಳು ಅಕ್ರಮ ಸಾಗಣೆ ನಿರಂತರವಾಗಿರುವ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ