ಹನುಮಸಾಗರ (ಕೊಪ್ಪಳ): 10ಸಾವಿರ ರೂ.ಗಳಿಗಾಗಿ ಪುತ್ರನೊಬ್ಬ ತನ್ನ ತಂದೆಯನ್ನೇ ಕೊಲೆಮಾಡಿ ಪರಾರಿಯಾದ ಘಟನೆ, ಸಮೀಪದ ಬಾದಿಮನಾಳ ಕ್ರಾಸ್ ಬಳಿ ಮಂಗಳವಾರ ನಡೆದಿದೆ.
ಹಾಬಲಕಟ್ಟಿ ಗ್ರಾಮದ ಸಂಗಪ್ಪ ಸುಂಕದ (72)ಮೃತರು. ಹಿರಿಯ ಮಗ ಮಲ್ಲಪ್ಪ ಸುಂಕದ (35) ಕೊಲೆಮಾಡಿದ ಆರೋಪಿ. ಮಲ್ಲಪ್ಪ ಕಳೆದ ಕೆಲವು ವರ್ಷಗಳಿಂದ ಕುಟುಂಬದಿಂದ ಬೇರೆಯಾಗಿದ್ದು, ಯಲಬುಣಚಿ ಗ್ರಾಮದಲ್ಲಿ ತನ್ನ ಪತ್ನಿ, ಮಕ್ಕಳೊಂದಿಗೆ ವಾಸಿಸುತ್ತಿದ್ದಾನೆ. ಬೇರೆಯಾಗಿದ್ದರೂ ಹೊಲದಲ್ಲಿ ಕಡಿಸಿದ ಗಿಡಗಳ ಹಣ ಕೊಡುವಂತೆ ತಂದೆಗೆ ಪೀಡಿಸುತ್ತಿದ್ದ. ಆದರೆ, ಆತನಿಗೆ ತಂದೆ ಹಣ ಕೊಡಲು ನಿರಾಕರಿಸಿದ್ದರು.
ಸೋಮವಾರ ರಾತ್ರಿಯೇ ಹಾಬಲಕಟ್ಟಿ ಗ್ರಾಮಕ್ಕೆ ಬಂದಿದ್ದ ಮಲ್ಲಪ್ಪ, ಹಣಕ್ಕೆ ಸಂಬಂಧಿಸಿದಂತೆ ತಂದೆಯೊಂದಿಗೆ ಜಗಳವಾಡಿದ್ದಾನೆ. ಮಂಗಳವಾರ ಬೆಳಗಿನ ಜಾವ ಸಂಗಪ್ಪ ಎಂದಿನಂತೆ ಜಮೀನಿನ ಕೆಲಸಕ್ಕೆ ಹೊರಟ ಸಂದರ್ಭದಲ್ಲಿ ಹಿಂದಿನಿಂದ ಬಂದ ಮಲ್ಲಪ್ಪ ಕೊಡಲಿಯಿಂದ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಂಗಪ್ಪ ಸ್ಥಳದಲ್ಲೇ ಮೃತಪಟ್ಟರು. ಈ ಸಂದರ್ಭದಲ್ಲಿ ತಂದೆಯ ಬಳಿಯಿದ್ದ 19 ಸಾವಿರ ರೂ.ಗಳನ್ನು ತೆಗೆದುಕೊಂಡು ಮಲ್ಲಪ್ಪ ಪರಾರಿಯಾಗಿದ್ದಾನೆ.
ಸಂಗಪ್ಪ ಅವರ ಎರಡನೇ ಪುತ್ರ ಗೋವಾಕ್ಕೆ ದುಡಿಯಲು ಹೋಗಿದ್ದರೆ, ಮೂರನೇಯ ಪುತ್ರ ತಂದೆಯೊಂದಿಗೆ ಹೊಲಮನಿ ಕೆಲಸದಲ್ಲಿ ಕೈಜೋಡಿಸಿದ್ದಾನೆ. ಗಂಗಾವತಿ ಡಿವೈಎಸ್ಪಿ ಎಸ್.ಎಂ.ಸಂದಿಗವಾಡ, ಸಿಪಿಐ ಗಿರೀಶ್ ಆರ್., ಪಿಎಸ್ಐ ರಾಮಣ್ಣ ನಾಯಕ, ಎಎಸ್ಐ ಶಾಂತಪ್ಪ ಬೆಲ್ಲದ ಅವರು ಸ್ಥಳಕ್ಕೆ ಬೇಟಿ ನೀಡಿದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಬಲಕಟ್ಟಿ ಗ್ರಾಮದ ಸಂಗಪ್ಪ ಸುಂಕದ (72)ಮೃತರು. ಹಿರಿಯ ಮಗ ಮಲ್ಲಪ್ಪ ಸುಂಕದ (35) ಕೊಲೆಮಾಡಿದ ಆರೋಪಿ. ಮಲ್ಲಪ್ಪ ಕಳೆದ ಕೆಲವು ವರ್ಷಗಳಿಂದ ಕುಟುಂಬದಿಂದ ಬೇರೆಯಾಗಿದ್ದು, ಯಲಬುಣಚಿ ಗ್ರಾಮದಲ್ಲಿ ತನ್ನ ಪತ್ನಿ, ಮಕ್ಕಳೊಂದಿಗೆ ವಾಸಿಸುತ್ತಿದ್ದಾನೆ. ಬೇರೆಯಾಗಿದ್ದರೂ ಹೊಲದಲ್ಲಿ ಕಡಿಸಿದ ಗಿಡಗಳ ಹಣ ಕೊಡುವಂತೆ ತಂದೆಗೆ ಪೀಡಿಸುತ್ತಿದ್ದ. ಆದರೆ, ಆತನಿಗೆ ತಂದೆ ಹಣ ಕೊಡಲು ನಿರಾಕರಿಸಿದ್ದರು.
ಸೋಮವಾರ ರಾತ್ರಿಯೇ ಹಾಬಲಕಟ್ಟಿ ಗ್ರಾಮಕ್ಕೆ ಬಂದಿದ್ದ ಮಲ್ಲಪ್ಪ, ಹಣಕ್ಕೆ ಸಂಬಂಧಿಸಿದಂತೆ ತಂದೆಯೊಂದಿಗೆ ಜಗಳವಾಡಿದ್ದಾನೆ. ಮಂಗಳವಾರ ಬೆಳಗಿನ ಜಾವ ಸಂಗಪ್ಪ ಎಂದಿನಂತೆ ಜಮೀನಿನ ಕೆಲಸಕ್ಕೆ ಹೊರಟ ಸಂದರ್ಭದಲ್ಲಿ ಹಿಂದಿನಿಂದ ಬಂದ ಮಲ್ಲಪ್ಪ ಕೊಡಲಿಯಿಂದ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಂಗಪ್ಪ ಸ್ಥಳದಲ್ಲೇ ಮೃತಪಟ್ಟರು. ಈ ಸಂದರ್ಭದಲ್ಲಿ ತಂದೆಯ ಬಳಿಯಿದ್ದ 19 ಸಾವಿರ ರೂ.ಗಳನ್ನು ತೆಗೆದುಕೊಂಡು ಮಲ್ಲಪ್ಪ ಪರಾರಿಯಾಗಿದ್ದಾನೆ.
ಸಂಗಪ್ಪ ಅವರ ಎರಡನೇ ಪುತ್ರ ಗೋವಾಕ್ಕೆ ದುಡಿಯಲು ಹೋಗಿದ್ದರೆ, ಮೂರನೇಯ ಪುತ್ರ ತಂದೆಯೊಂದಿಗೆ ಹೊಲಮನಿ ಕೆಲಸದಲ್ಲಿ ಕೈಜೋಡಿಸಿದ್ದಾನೆ. ಗಂಗಾವತಿ ಡಿವೈಎಸ್ಪಿ ಎಸ್.ಎಂ.ಸಂದಿಗವಾಡ, ಸಿಪಿಐ ಗಿರೀಶ್ ಆರ್., ಪಿಎಸ್ಐ ರಾಮಣ್ಣ ನಾಯಕ, ಎಎಸ್ಐ ಶಾಂತಪ್ಪ ಬೆಲ್ಲದ ಅವರು ಸ್ಥಳಕ್ಕೆ ಬೇಟಿ ನೀಡಿದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.