ಆ್ಯಪ್ನಗರ

ಸೂಡಾನ್‌ನಲ್ಲಿ ಉಗ್ರರ ದಾಳಿಗೆ ಗಂಗಾವತಿ ಯುವಕ ಬಲಿ

ಗಂಗಾವತಿ ಶಾಸಕರ ಆಪ್ತ ಸಹಾಯಕರ ಮಗ ಸುಡಾನ್‌ನಲ್ಲಿ ಉಗ್ರರ ದಾಳಿಗೆ ಮೃತಪಟ್ಟ ಘಟನೆ ವರದಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ 19 Feb 2017, 5:57 pm
ಕೊಪ್ಪಳ: ಗಂಗಾವತಿ ಶಾಸಕರ ಆಪ್ತ ಸಹಾಯಕರ ಮಗ ಸುಡಾನ್‌ನಲ್ಲಿ ಉಗ್ರರ ದಾಳಿಗೆ ಮೃತಪಟ್ಟ ಘಟನೆ ವರದಿಯಾಗಿದೆ.
Vijaya Karnataka Web terror attack on indian youth
ಸೂಡಾನ್‌ನಲ್ಲಿ ಉಗ್ರರ ದಾಳಿಗೆ ಗಂಗಾವತಿ ಯುವಕ ಬಲಿ


ಸೂಡಾನ್‌ನ ಜ್ಯೂಬಾದ ಒಮಸ್ಕಿ ಎಂಬ ಕಂಪನಿಯಲ್ಲಿ ಸುಪರ್‌ವೈಜರ್ ಆಗಿ ಕೆಲಸ ಮಾಡುತ್ತಿದ್ದ ಸೈಯದ್ ಫರೂಕ್, ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿ ಅವರ ಪಿಎ ಎಸ್ ಬಿ ಖಾದ್ರಿ ಅವರ ದ್ವಿತೀಯ ಪುತ್ರನಾಗಿದ್ದಾನೆ.

ಕಳೆದ ಎರಡು ವರ್ಷದಿಂದ ಜ್ಯೂಬಾದಲ್ಲಿ ಕೆಲಸ ಮಾಡುತ್ತಿದ್ದ ಫಾರುಕ್‌, ಗಂಗಾವತಿಗೆ ಮೂರು ತಿಂಗಳ ಹಿಂದೆ ಬಂದು ತೆರಳಿದ್ದರು . ಶುಕ್ರವಾರ ನಮಾಜ ಮುಗಿಸಿ ಮರಳುತ್ತಿದ್ದಾಗ ಉಗ್ರರ ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ.

ಮೃತನ ದೇಹವನ್ನು ಭಾರತಕ್ಕೆ ಕಳುಹಿಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ. ಪ್ರಸಕ್ತ ಮೃತನ ಕುಟುಂಬದವರು ಕರ್ನೂಲದಲ್ಲಿದ್ದು. ಫಾರುಕ್‌ ಮೃತ ದೇಹ ಗಂಗಾವತಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ