ಆ್ಯಪ್ನಗರ

ಬಡವನ ಮಂದಹಾಸವೇ ದೇವರಿಗೆ ಪ್ರಸಾದ: ಮುಂಡರಗಿ ಶ್ರೀಅಭಿಮತ

ಬಡವನು ಸಂತೃಪ್ತಿಯಿಂದ ಮಂದಹಾಸ ಬೀರಿದರೆ ಅದೇ ದೇವರಿಗೆ ಮಹಾಪ್ರಸಾದವಾಗಲಿದೆ ಎಂದು ಮುಂಡರಗಿಯ ನಾಡೋಜ ಶ್ರೀಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು.

Vijaya Karnataka 18 Aug 2018, 5:00 am
ಕುಕನೂರು : ಬಡವನು ಸಂತೃಪ್ತಿಯಿಂದ ಮಂದಹಾಸ ಬೀರಿದರೆ ಅದೇ ದೇವರಿಗೆ ಮಹಾಪ್ರಸಾದವಾಗಲಿದೆ ಎಂದು ಮುಂಡರಗಿಯ ನಾಡೋಜ ಶ್ರೀಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು.
Vijaya Karnataka Web KPL-KPL17KKN P4


ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಗುರುವಾರ ನಡೆದ ಅನ್ನದಾನೀಶ್ವರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದವರು, ಬಡವ, ಬಲ್ಲಿದ ಎಂಬುದು ಬೇದ ತಾಳಲಾರದೇ, ಸದಾ ಸಮರಸ ಜೀವನ ಮನುಕುಲದ ಧರ್ಮ ಎಂಬ ನಡೆಯಲ್ಲಿ ಬದುಕಬೇಕು. ದೇವರಿಗೆ ನೈವಿದ್ಯ, ಪ್ರಸಾದದ ಭಕ್ತಿಗಿಂತ ಬಡವನು ಸಂತೃಪ್ತಿ ಜೀವನದಿಂದ ತನ್ನ ಮೊಗದಲ್ಲಿ ಮಂದಹಾಸ ಬೀರಿದರೆ ಅದುವೇ ಸಾರ್ಥಕ ಜೀವನವಾಗಲಿದೆ. ಶರಣರು, ಸಂತರು ಮನುಷ್ಯ ಧರ್ಮ ನೆಲೆಗೊಳ್ಳುವಂತೆ ಶ್ರಮಿಸಿದರು. ಅಂತವರಲ್ಲಿ ಮುಂಡರಗಿ ಪೀಠಾಧಿಪತಿಗಳು ಸಮಾಜಕ್ಕೆ ಅನನ್ಯ ಸೇವೆ ನೀಡಿದ್ದಾರೆ. ಸಹಸ್ರ ವರ್ಷಗಳಿಂದ ಪ್ರಜಾಸಂಕುಲಕ್ಕೆ ಮಾರ್ಗದರ್ಶನ ನೀಡುತ್ತಾ ಮುಂಡರಗಿ ಅನ್ನದಾನೀಶ್ವರ ಮಠ ಕಾರ್ಯ ಮಾಡುತ್ತಾ ಬಂದಿದೆ. ಶ್ರೀಮಠದ ಮೂಲ ಪೂಜ್ಯರು ಪವಾಡ ಹಾಗೂ ಸಾಮಾಜಿಕ ಕಳಕಳಿಯ ತಪಸ್ವಿ ಎಂದರು.

ಶಾಸಕ ಹಾಲಪ್ಪ ಆಚಾರ ಮಾತನಾಡಿ, ಪುರಾಣ-ಪ್ರವಚನಗಳು ಸಂಸ್ಕಾರ ನೀಡುತ್ತವೆ. ಭಕ್ತಿ ಮನದಲ್ಲಿ ನೆಲೆಗೊಳ್ಳಲು ಆಚರಣೆ ಅವಶ್ಯ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪಾಲಕರು ಗಮನ ಹರಿಸಬೇಕು ಎಂದರು. ಇದೇ ವೇಳೆ ಅನ್ನದಾನೀಶ್ವರ ಪೂಜಾ ಮಂದಿರ ಉದ್ಘಾಟನಾ ಹಾಗೂ ಶಾಸಕರಿಗೆ ಸನ್ಮಾನ ಜರುಗಿತು.

ಯಲಬುರ್ಗಾ ಬಸವಲಿಂಗೇಶ್ವರ ಶಿವಾಚಾರ್ಯ. ಮಹಾದೇವ ದೇವರು, ವೀರಯ್ಯ ತೋಂಟದಾರ್ಯಮಠ, ಗದಿಗೆಪ್ಪ ಪವಾಡಶೆಟ್ಟಿ, ಬಸಪ್ಪ ಮಾಸ್ತರ ಕವಲೂರ, ಪಿಎಸ್‌ಐ ರಾಘವೇಂದ್ರ, ಜಗದೀಶಯ್ಯ ಕಳ್ಳಿಮಠ, ವಿ.ಜಿ ಬಳಗೇರಿ, ವೀರಯ್ಯ ಉಳ್ಳಾಗಡ್ಡಿ, ಶೇಖಪ್ಪ ಶಿರೂರ, ಬಸವರಾಜ ಬಣ್ಣಬಾವಿ, ಸಂಗಪ್ಪ ಗುತ್ತಿ, ಕಳಕಪ್ಪ ಹತ್ತಿಕಟಿಗಿ, ಬಸಪ್ಪ ಬಂಗಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ