ಆ್ಯಪ್ನಗರ

ಟ್ರ್ಯಾಕ್ಟರ್‌ಗಳೊಂದಿಗೆ ಕೂಲಿಕಾರರ ಮುತ್ತಿಗೆ

ನರೇಗಾ ಯೋಜನೆಯಡಿ ನಿಡಶೇಸಿ ಕೆರೆ ಹೂಳೆತ್ತುವ ಕಾಮಗಾರಿಗೆ ಎನ್‌ಎಂಆರ್‌ ನೀಡುವಂತೆ ಒತ್ತಾಯಿಸಿ ತಾಲೂಕಿನ ತಳವಗೇರಾ ಗ್ರಾಮದ ಕೂಲಿಕಾರರು 21 ಟ್ರ್ಯಾಕ್ಟರ್‌ಗಳೊಂದಿಗೆ ತಾ.ಪಂ.ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆಯಿತು.

Vijaya Karnataka 23 Sep 2018, 5:00 am
ಕುಷ್ಟಗಿ ; ನರೇಗಾ ಯೋಜನೆಯಡಿ ನಿಡಶೇಸಿ ಕೆರೆ ಹೂಳೆತ್ತುವ ಕಾಮಗಾರಿಗೆ ಎನ್‌ಎಂಆರ್‌ ನೀಡುವಂತೆ ಒತ್ತಾಯಿಸಿ ತಾಲೂಕಿನ ತಳವಗೇರಾ ಗ್ರಾಮದ ಕೂಲಿಕಾರರು 21 ಟ್ರ್ಯಾಕ್ಟರ್‌ಗಳೊಂದಿಗೆ ತಾ.ಪಂ.ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆಯಿತು.
Vijaya Karnataka Web KPL-KPL22KST01


ಗ್ರಾಮದ ಅಂದಾಜು 500ಕ್ಕೂ ಹೆಚ್ಚು ಕೂಲಿಕಾರರು ನರೇಗಾ ಯೋಜನೆಯಡಿ ಉದ್ಯೋಗ ಬಯಸಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. 23 ಎನ್‌ಎಂಆರ್‌ಗಳನ್ನು ನೀಡಲಾಗಿತ್ತು. ಇನ್ನೂ 1 ಎನ್‌ಎಂಆರ್‌ನ್ನು ನೀಡಿರಲಿಲ್ಲ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಎನ್‌ಎಂಆರ್‌ ದೊರೆಯಬೇಕು ಎಂದು ಟ್ಯಾಕ್ಟರ್‌ಗಳೊಂದಿಗೆ ತಾ.ಪಂ.ಯ ಸಾಮರ್ಥ್ಯ‌ಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಂಬಂಧಿಸಿದ ನರೇಗಾ ಎಂಜನಿಯರ್‌ ಎನ್‌ಎಂಆರ್‌ನ್ನು ನೀಡುವ ಭರವಸೆ ನೀಡಿದರು. ಎನ್‌ಎಂಆರ್‌ನ್ನು ಪ್ರಿಂಟ್‌ ತೆಗೆದು ಕೆಲಸ ನಡೆಯುವ ಸ್ಥಳ ನಿಡಶೇಸಿ ಕೆರೆಗೆ ಬಂದು ನೀಡಲಾಗುವುದು ಎಂದರು. ತಾ.ಪಂ.ಹಿಂಭಾಗದ ಆವರಣವಿಡೀ ಟ್ರ್ಯಾಕ್ಟರ್‌ಗಳಿಂದ ತುಂಬಿತ್ತು. ನರೇಗಾ ಕಾಮಗಾರಿಗೆ ಬಳಕೆ ಮಾಡಿರುವ ಟ್ರ್ಯಾಕ್ಟರ್‌ಗಳ ಬಾಡಿಗೆಯನ್ನೂ ನೀಡುವಂತೆ ಒತ್ತಾಯಿಸಲಾಯಿತು. ತಾ.ಪಂ.ಇಒ ಕಚೇರಿಯಲ್ಲಿ ಇರಲಿಲ್ಲ. ಸಹಾಯಕ ನಿರ್ದೇಶಕ ಅರುಣಕುಮಾರ ಮತ್ತು ಸಿಬ್ಬಂದಿ ಕೂಲಿಕಾರರೊಂದಿಗೆ ಮಾತುಕತೆ ನಡೆಸಿ ಇತ್ಯರ್ಥಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ