ಆ್ಯಪ್ನಗರ

ಏರ್ ಸ್ಟ್ರೈಕ್ ಸಾಕ್ಷಿ ಬೇಕಿದ್ರೆ ಪಾಕ್‌ಗೆ ಹೋಗಿ ನೋಡ್ಕೊಂಡು ಬರ್ಲಿ: ಬಿಜೆಪಿ ಸಂಸದ ಕರಡಿ ಸಂಗಣ್ಣ

ದೇಶದ ಬಗ್ಗೆ ಅಭಿಮಾನವಿಲ್ಲದ ಶಾಸಕ ಹಿಟ್ನಾಳ್, ಅಭಿಮಾನ ಶೂನ್ಯ‌ ನಾಯಕರು ಎಂದು ಕರಿಬೇಕು. ಪಾಕಿಸ್ತಾನದ ಪ್ರತ್ಯಕ್ಷ ದರ್ಶಿಗಳೆ ಉಗ್ರರ ಡೆಡ್ ಬಾಡಿ ನೋಡಿದ್ದೆವೆ ಎಂದು ಹೇಳಿದ್ದಾರೆ.

Vijaya Karnataka Web 3 Mar 2019, 3:40 pm
ಕೊಪ್ಪಳ: ನಮ್ಮ‌ ಸೈನಿಕರ‌ ಮೇಲೆ ನಂಬಿಕೆ ಇಲ್ಲಾಂದ್ರೆ ಪಾಕಿಸ್ತಾನಕ್ಕೆ ಹೋಗಿ ನೊಡಿಕೊಂಡು ಬರಲಿ ಎಂದು ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರಿಗೆ ಟಾಂಗ್ ನೀಡಿದರು.
Vijaya Karnataka Web bjp


ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಬಗ್ಗೆ ಅಭಿಮಾನವಿಲ್ಲದ ಶಾಸಕ ಹಿಟ್ನಾಳ್, ಅಭಿಮಾನ ಶೂನ್ಯ‌ ನಾಯಕರು ಎಂದು ಕರಿಬೇಕು. ಪಾಕಿಸ್ತಾನದ ಪ್ರತ್ಯಕ್ಷ ದರ್ಶಿಗಳೆ ಉಗ್ರರ ಡೆಡ್ ಬಾಡಿ ನೋಡಿದ್ದೆವೆ ಎಂದು ಹೇಳಿರುವುದಾಗಿ ಅವರು ತಿಳಿಸಿದರು.

ಇನ್ನೂ ಇವರಿಗೆ ಪ್ರೂಫ್ ಬೇಕಾದರೆ ಅಲ್ಲಿಗೆ ಹೋಗಿ ನೋಡಿಕೊಂಡು ಬರಲಿ. ಉಗ್ರರ ಬಾಡಿ‌ ನೋಡೊ‌ ಆಸೆ ಇದೆ ಅಂದ್ರೆ ಪಾಕಿಸ್ತಾನಕ್ಕೆ ಹೊಗಲಿ. ರಾಘವೇಂದ್ರ ಹಿಟ್ನಾಳ್ ಇಲ್ಲಿರಲು ಅರ್ಹರಲ್ಲ ಅವರು ಪಾಕಿಸ್ತಾನದಲ್ಲೇ ಇರಲಿ.
ದೇಶದ ಬಗ್ಗೆ ಅಭಿಮಾನ ಇಲ್ಲದವರು ಪಾಕಿಸ್ತಾನದಲ್ಲೆ ಇರಲಿ ಎಂದರು.

ಶಾಸಕ ಹಿಟ್ನಾಳ್ ಸೈನಿಕರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸೈನಿಕರಿಗೆ ಅವಮಾನ‌ ಮಾಡಿದ್ದಾರೆ. ಸೈನಿಕರು ದೇಶಕ್ಕಾಗಿ ಹೆಂಡತಿ , ಮಕ್ಕಳು ಬಿಟ್ಟು ಹೋರಾಡುತ್ತಾರೆ. ಅಂತವರ ಬಗ್ಗೆ ಶಾಸಕರು ಈ ರೀತಿ ಮಾತಾಡ್ತಾರೆ ಅಂದರೆ ಅವರು ಹತಾಶರಾಗಿದ್ದಾರೆ ಎಂದು ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ