ಆ್ಯಪ್ನಗರ

ಮೂರು ಪಕ್ಷಗಳು ಸೇರಿ ಸರಕಾರ ರಚಿಸಿ, ರಾಜ್ಯದ ಅಭಿವೃದ್ಧಿ ಮಾಡಿ: ಪೇಜಾವರ ಶ್ರೀ

ರಾಜ್ಯದಲ್ಲಿ ಎರಡು ದೋಸ್ತಿಯಲ್ಲ, ಮೂರು ಪಕ್ಷಗಳ ದೋಸ್ತಿಯೇ ಆಗಲಿ. ಪ್ರತಿಪಕ್ಷ ಇಲ್ಲದೇ ಸರಕಾರ ನಡೆಯಲಿ. ಆಡಳಿತ ನಡೆಸಲಿ ಎಂದು ಪೇಜಾವರ ಶ್ರೀ ತಿಳಿಸಿದರು.

Vijaya Karnataka Web 19 Jul 2019, 7:28 pm
ಕೊಪ್ಪಳ: ಮೂರು ಪಕ್ಷಗಳು ಸೇರಿ ರಚಿಸಿಬಿಡಲಿ. ಆಗಲಾದರೂ ರಾಜ್ಯ ಅಭಿವೃದ್ಧಿಯಾಗುವ ವಿಶ್ವಾಸ ಇದೆ ಎಂದು ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶ್ವ ತೀರ್ಥ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
Vijaya Karnataka Web ಪೇಜಾವರ ಶ್ರೀ
ಪೇಜಾವರ ಶ್ರೀ


ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಪೇಜಾವರ ಶ್ರೀಗಳು ಮಾತನಾಡಿದರು.

ಎಲ್ಲರೂ ಅಧಿಕಾರ ಗದ್ದುಗೆ ಏರಲು ಹಾತೊರೆಯುತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಚುನಾವಣೆ ಆಗಬಾರದು. ರಾಷ್ಟ್ರಪತಿ ಆಡಳಿತವೂ ಬರಬಾರದು. ಸರ್ವಪಕ್ಷೀಯ ಸರಕಾರವೇ ರಚನೆ ಆಗಲಿ ಎಂದರು.

ಚುನಾವಣೆಗೆ ಮುನ್ನ ಎಲ್ಲ ಪಕ್ಷಗಳು ಬೈದಾಡಿಕೊಂಡಿದೆ. ವಾಕ್ಸಮರ ನಡೆಸಿದೆ. ನಂತರ ಒಂದಾಗಿ ಸರಕಾರ ರಚಿಸಿದೆ. ಈಗಲೂ ಜಗಳ ಮುಂದುವರಿದಿದೆ. ಹೀಗಾಗಿ ಎಲ್ಲ ಪಕ್ಷಗಳು ಒಂದಾಗಿ ಸರಕಾರ ರಚಿಸಲಿ ಎಂದು ಶ್ರೀಗಳು ಆಗ್ರಹಿಸಿದರು.

ಬಿಜೆಪಿ ಹಿಂದೂ ಪರ ಎಂದು ಮೈತ್ರಿ ಸರಕಾರ ರಚನೆ ಮಾಡಲಾಗಿದೆ. ಆದರೆ ಬಿಜೆಪಿ ಜಾತ್ಯತೀತ ಪಕ್ಷವೂ ಹೌದು. ಇದಕ್ಕಾಗಿ ಮೂರು ಪಕ್ಷ ಜತೆಯಾಗಿ ಸರಕಾರ ರಚಿಸಲಿ. ಆಗ ರೆಸಾರ್ಟ್‌ ರಾಜಕೀಯ, ಪಕ್ಷಾಂತರ ಬಂದ್‌ ಆಗುತ್ತವೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ