ಆ್ಯಪ್ನಗರ

ಮೊಬೈಲ್‌ ಟಾರ್ಚ್‌ ಲೈಟಿನಲ್ಲೇ ರೋಗಿಗಳಿಗೆ ಚಿಕಿತ್ಸೆ

ಅವ್ಯವಸ್ಥೆಗಳ ಆಗರವಾದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೌಕರ್ಯಗಳಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Vijaya Karnataka 28 Jun 2018, 5:00 am
ಕುಕನೂರು : ಅವ್ಯವಸ್ಥೆಗಳ ಆಗರವಾದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೌಕರ್ಯಗಳಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web treat patients with mobile torch light
ಮೊಬೈಲ್‌ ಟಾರ್ಚ್‌ ಲೈಟಿನಲ್ಲೇ ರೋಗಿಗಳಿಗೆ ಚಿಕಿತ್ಸೆ


ಪಟ್ಟಣದಲ್ಲಿ ಸೋಮವಾರ ಸಂಜೆಯಿಂದ ಆಸ್ಪತ್ರೆಯಲ್ಲಿ ವಿದ್ಯುತ್‌ ಸೌಕರ್ಯ ಇಲ್ಲದೇ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿತ್ತು. ಆಸ್ಪತ್ರೆಯಲ್ಲಿ ಇನ್ರ್ವರ್ಟರ್‌ ಇದ್ದು ಇಲ್ಲದಂತಾಗಿದೆ. ಕರೆಂಟ್‌ ಪೂರೈಕೆ ಸ್ಥಗಿತಗೊಂಡ ಕೂಡಲೇ ವೈದ್ಯರು ಆಸ್ಪತ್ರೆಯಿಂದ ಮನೆ ಕಡೆ ನಡೆದರು. ಇತ್ತ ಸಿಬ್ಬಂದಿ ವೈದ್ಯರು ಬರೆದುಕೊಟ್ಟ ಚೀಟಿಗಳನ್ನು ಮೊಬೈಲ್‌ ಟಾರ್ಚ್‌ ಹಿಡಿದು ಗಮನಿಸಿ ರೋಗಿಗಳಿಗೆ ಚುಚ್ಚು ಮದ್ದು ನೀಡುತ್ತಿದ್ದ ದೃಶ್ಯ ಕಂಡುಬಂತು.ಅದರಲ್ಲೂ ಇತ್ತೀಚೆಗೆ ಹೆರಿಗೆಯಾಗಿ ವಾರ್ಡಿನಲ್ಲಿ ಇದ್ದ ಬಾಣಂತಿ ಸ್ಥಿತಿ ಹೇಳತೀರದಂತಾಗಿತ್ತು. ವಿದ್ಯುತ್‌ ಸ್ಥಗಿತಗೊಂಡರೆ ಸಾಕು ಸೊಳ್ಳೆಗಳ ಕಾಟ ಮಿತಿಮೀರಿರುತ್ತದೆ. ಕೆಲವು ರೋಗಿಗಳು ಸೊಳ್ಳೆಗಳ ಕಡಿತದಿಂದ ಆಸ್ಪತ್ರೆಯಲ್ಲೇ ಡೆಂಗೆ, ಮಲೇರಿಯಾ ಭೀತಿ ಎದುರಿಸುವಂತಾಗಿದೆ. ಆಸ್ಪತ್ರೆಯ ಪರಿಸ್ಥಿತಿ ಮನಗಂಡು ಕೆಲವರು ಇತ್ತ ಸುಳಿಯಲು ಹಿಂದೇಟು ಹಾಕುತ್ತಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಮೇಲಧಿಕಾರಿಗಳು ಹಾಗೂ ಶಾಸಕರು ಗಮನಹರಿಸಿ, ಇನ್ವರ್ಟರ್‌ ಹಾಗೂ ವಿದ್ಯುತ್‌ ವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ