ಆ್ಯಪ್ನಗರ

ಭತ್ತದ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್‌ ತಂತಿ ಸ್ಪರ್ಶ: ಹುಲ್ಲು ಸಂಪೂರ್ಣ ಭಸ್ಮ

ಗೋ ಶಾಲೆಗಾಗಿ ಲಾರಿಯಲ್ಲಿ ಭತ್ತದ ಹುಲ್ಲು ತುಂಬಿಕೊಂಡು ಹೊರಟ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಶಾಟ್ ಸರ್ಕ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಜಮಾಯಿಸಿ ಲಾರಿಗೆ ನೀರು ಹಾಕಿ ಉಳಿಸಿದ್ದಾರೆ. ಆದರೆ ಭತ್ತದ ಹುಲ್ಲು ಸಂಪೂರ್ಣ ಭಸ್ಮವಾಗಿದೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka Web 15 Jun 2019, 7:25 pm
ಕೊಪ್ಪಳ: ಕಾರಟಗಿ ತಾಲೂಕಿನ ಗುಂಡೂರು ಕ್ಯಾಂಪ್‍ನಲ್ಲಿ ಭತ್ತದ ಲಾರಿಗೆ ಬೆಂಕಿ ಆಕಸ್ಮಿಕ ತಗುಲಿ ಶನಿವಾರ ಹೊತ್ತಿ ಉರಿದಿದೆ.

ಗೋ ಶಾಲೆಗಾಗಿ ಲಾರಿಯಲ್ಲಿ ಭತ್ತದ ಹುಲ್ಲು ತುಂಬಿಕೊಂಡು ಹೊರಟ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಶಾಟ್ ಸರ್ಕ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ.

ಒಣ ಹುಲ್ಲು ಆಗಿರುವುದರಿಂದ ಬೆಂಕಿ ಧಗಧಗಿಸಲು ಶುರುವಾಗಿದೆ. ಲಾರಿ ಚಾಲಕ ಬೆಂಕಿ ನಂದಿಸಲು ಭತ್ತದ ಗದ್ದೆಯಲ್ಲಿ ಲಾರಿ ಓಡಾಡಿಸಿದ್ದಾನೆ.

ಸ್ಥಳೀಯರು ಜಮಾಯಿಸಿ ಲಾರಿಗೆ ನೀರು ಹಾಕಿ ಉಳಿಸಿದ್ದಾರೆ. ಆದರೆ ಭತ್ತದ ಹುಲ್ಲು ಸಂಪೂರ್ಣ ಭಸ್ಮವಾಗಿದೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ