ಆ್ಯಪ್ನಗರ

ಟಾಪ್ ರ‌್ಯಾಂಕ್‌ಗೆ ಮತ್ತೆ ಪ್ರಯತ್ನ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಬಾರಿ 402ನೇ ರ‌್ಯಾಂಕ್. ಎರಡನೇ ಬಾರಿ 294ನೇ ರ‌್ಯಾಂಕ್. ಆದರೂ ಟಾಪ್ ರ‌್ಯಾಂಕ್ ಗಳಿಸುವ ಛಲ ಹೊಂದಿರುವ ಗಂಗಾವತಿಯ ಎಚ್.ವಿನೋದ್ ಪಾಟೀಲ್ ಮತ್ತೊಮ್ಮೆ ಪರೀಕ್ಷೆ ಎದುರಿಸುವ ಉಮೇದಿಯಲ್ಲಿದ್ದಾರೆ.

Vijaya Karnataka 29 Apr 2018, 12:00 am
ಗಂಗಾವತಿ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಬಾರಿ 402ನೇ ರ‌್ಯಾಂಕ್. ಎರಡನೇ ಬಾರಿ 294ನೇ ರ‌್ಯಾಂಕ್. ಆದರೂ ಟಾಪ್ ರ‌್ಯಾಂಕ್ ಗಳಿಸುವ ಛಲ ಹೊಂದಿರುವ ಗಂಗಾವತಿಯ ಎಚ್.ವಿನೋದ್ ಪಾಟೀಲ್ ಮತ್ತೊಮ್ಮೆ ಪರೀಕ್ಷೆ ಎದುರಿಸುವ ಉಮೇದಿಯಲ್ಲಿದ್ದಾರೆ.
Vijaya Karnataka Web BLR-BLY28HPT2


ನಗರದ ಅಕ್ಕಮಹಾದೇವಿ ಹಾಗೂ ದಿ.ಮಲ್ಲಿಕಾರ್ಜುನ ಗೌಡ ಅವರ ಪುತ್ರರಾಗಿರುವ ಅವರು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ 2016ನೇ ಸಾಲಿನಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 402ನೇ ರ‌್ಯಾಂಕ್ ಪಡೆದರು. ಅವರಿಗೆ ಜಿಎಸ್‌ಟಿ ಕಂಟ್ರೋಲ್ ಎಕ್ಸೆಲ್, ನಾರ್ಕೋಟಿಕ್ಸ್ (ಡ್ರಗ್ಸ್) ಸೇವೆಗೆ ಬಂದ ಆದೇಶ ಪತ್ರ ತಿರಸ್ಕರಿಸಿದರು. 2017ನೇ ಸಾಲಿನ ಪರೀಕ್ಷೆಯಲ್ಲಿ 294ನೇ ರ‌್ಯಾಂಕ್ ಪಡೆದಿದ್ದು, ಐಆರ್‌ಎಸ್(ಇಂಡಿಯನ್ ರೈಲ್ವೆ ಸರ್ವಿಸ್) ಮತ್ತು ತೆರಿಗೆ ಇಲಾಖೆ ವಿಭಾಗದ ಸೇವೆ ದೊರಕಿದೆ. ಆದರೂ ಈ ಹುದ್ದೆಯ ತರಬೇತಿಗೆ ತೆರಳಲು ಅವರಿಗೆ ಮನಸ್ಸಿಲ್ಲ.

‘‘ಐಎಎಸ್ ಟಾಪರ್ ಆಗಬೇಕೆಂಬ ಹೆಬ್ಬಯಕೆಯಿದೆ. ಮನೆಯಲ್ಲಿ ಇಷ್ಟೇ ಸಾಕು, ಬಂದಿರುವ ನೌಕರಿ ಬಿಡಬೇಡ ಎಂದು ಹೇಳುತ್ತಾರೆ. ಆದರೂ ನನಗೆ ಆತ್ಮವಿಶ್ವಾಸವಿದೆ. ಮುಂದಿನ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆಯುವೆ’’ ಎನ್ನುತ್ತಾರೆ ಎಚ್.ವಿನೋದ್ ಪಾಟೀಲ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ