ಮಣಿಪುರ ವೀಕ್ಷಕರ ತಂಡ ಭೇಟಿ, ಪರಿಶೀಲನೆ
ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಣಿಪುರದಿಂದ ನಿಯೋಜನೆ ಮಾಡಲಾಗಿರುವ ಎಂ.ಜೈಸಿಂಗ್ ನೇತೃತ್ವದ ವೀಕ್ಷಕರ ತಂಡ ನಾಮಪತ್ರ ಸಲ್ಲಿಕಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
Vijaya Karnataka 25 Apr 2018, 5:00 am
ಗಂಗಾವತಿ : ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಣಿಪುರದಿಂದ ನಿಯೋಜನೆ ಮಾಡಲಾಗಿರುವ ಎಂ.ಜೈಸಿಂಗ್ ನೇತೃತ್ವದ ವೀಕ್ಷಕರ ತಂಡ ನಾಮಪತ್ರ ಸಲ್ಲಿಕಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಗರದ ಎಪಿಎಂಸಿಯಲ್ಲಿ ಕನಕಗಿರಿ ಕ್ಷೇತ್ರದ ನಾಮಪತ್ರ ಸಲ್ಲಿಕಾ ಕೇಂದ್ರ ಹಾಗೂ ಆನೆಗೊಂದಿ ರಸ್ತೆ ತಹಸಿಲ್ ಕಚೇರಿಯಲ್ಲಿನ ನಾಮಪತ್ರ ಸಲ್ಲಿಕಾ ಕೇಂದ್ರಕ್ಕೆ ಭೇಟಿ ನೀಡಿದರು.ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಆಗುತ್ತಿರುವ ತೊಂದರೆ, ಕೇಂದ್ರ ಚುನಾವಣಾ ಆಯೋಗದ ನಿಯಮಗಳ ಪಾಲನೆ ಸೇರಿದಂತೆ ಭದ್ರತಾ ಲೋಪದೋಷ ಪರಿಶೀಲಿಸಿದರು.
ದೂರು ಸ್ವೀಕಾರ ಕೇಂದ್ರ: ಚುನಾವಣೆಗೆ ಸಂಬಂಧಿಸಿದಂತೆ ಸುವಿಧಾ, ಸಮಾಧಾನ ಆ್ಯಪ್ ಮೂಲಕ ದೂರು, ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯುತ್ತಿರುವ ಗಣಕಯಂತ್ರ ವಿಭಾಗದ ವೀಕ್ಷಣೆ ಮಾಡಿದರು. ನೀತಿ ಸಂಹಿತೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ ಒಟ್ಟು 92 ವಾಹನಗಳಿಗೆ ಅನುಮತಿ ನಿಡಲಾಗಿದೆ. ಚುನಾವಣೆ ನಿಯಮ ಉಲ್ಲಂಘನೆಗೆ ಸಬಂಧಿಸಿದಂತೆ ಒಟ್ಟು 8 ದೂರುಗಳನ್ನು ಸಾರ್ವಜನಿಕರು ನೀಡಿದ್ದಾರೆ ಎಂಬ ಮಾಹಿತಿಯನ್ನು ಗಣಕಯಂತ್ರ ಸಿಬ್ಬಂದಿ ನೀಡಿದರು.ನಗರಸಭೆ ಸಿಬ್ಬಂದಿಗಳಿಂದ ನಿಯೋಜನೆ ಮಾಡಲಾಗಿರುವ ಲೆಕ್ಕಪತ್ರ ವಿಭಾಗ ಪರೀಶಿಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಜೈಸಿಂಗ್, ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಗೆ ನಿಯೋಜನೆ ಮಾಡಲಾಗಿದೆ. ಕನಕಗಿರಿ ಮತ್ತು ಗಂಗಾವತಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಲ್ಲಿಕೆಯಾಗುತ್ತಿರುವ ನಾಮಪತ್ರ ಸೇರಿ ಒಟ್ಟಾರೆಯಾಗಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ವೀಕ್ಷಕರ ತಂಡದ ಅಧಿಕಾರಿ ವಿನೋದಕುಮಾರ, ತಾಲೂಕು ಚುನಾವಣಾ ವಿಭಾಗದ ಶಿರಸ್ತೇದಾರ್ ಎಂ.ಗುರುರಾಜ ಸೇರಿದಂತೆ ಇತರರು ಇದ್ದರು.
ನಗರದ ಎಪಿಎಂಸಿಯಲ್ಲಿ ಕನಕಗಿರಿ ಕ್ಷೇತ್ರದ ನಾಮಪತ್ರ ಸಲ್ಲಿಕಾ ಕೇಂದ್ರ ಹಾಗೂ ಆನೆಗೊಂದಿ ರಸ್ತೆ ತಹಸಿಲ್ ಕಚೇರಿಯಲ್ಲಿನ ನಾಮಪತ್ರ ಸಲ್ಲಿಕಾ ಕೇಂದ್ರಕ್ಕೆ ಭೇಟಿ ನೀಡಿದರು.ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಆಗುತ್ತಿರುವ ತೊಂದರೆ, ಕೇಂದ್ರ ಚುನಾವಣಾ ಆಯೋಗದ ನಿಯಮಗಳ ಪಾಲನೆ ಸೇರಿದಂತೆ ಭದ್ರತಾ ಲೋಪದೋಷ ಪರಿಶೀಲಿಸಿದರು.
ದೂರು ಸ್ವೀಕಾರ ಕೇಂದ್ರ: ಚುನಾವಣೆಗೆ ಸಂಬಂಧಿಸಿದಂತೆ ಸುವಿಧಾ, ಸಮಾಧಾನ ಆ್ಯಪ್ ಮೂಲಕ ದೂರು, ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯುತ್ತಿರುವ ಗಣಕಯಂತ್ರ ವಿಭಾಗದ ವೀಕ್ಷಣೆ ಮಾಡಿದರು. ನೀತಿ ಸಂಹಿತೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ ಒಟ್ಟು 92 ವಾಹನಗಳಿಗೆ ಅನುಮತಿ ನಿಡಲಾಗಿದೆ. ಚುನಾವಣೆ ನಿಯಮ ಉಲ್ಲಂಘನೆಗೆ ಸಬಂಧಿಸಿದಂತೆ ಒಟ್ಟು 8 ದೂರುಗಳನ್ನು ಸಾರ್ವಜನಿಕರು ನೀಡಿದ್ದಾರೆ ಎಂಬ ಮಾಹಿತಿಯನ್ನು ಗಣಕಯಂತ್ರ ಸಿಬ್ಬಂದಿ ನೀಡಿದರು.ನಗರಸಭೆ ಸಿಬ್ಬಂದಿಗಳಿಂದ ನಿಯೋಜನೆ ಮಾಡಲಾಗಿರುವ ಲೆಕ್ಕಪತ್ರ ವಿಭಾಗ ಪರೀಶಿಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಜೈಸಿಂಗ್, ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಗೆ ನಿಯೋಜನೆ ಮಾಡಲಾಗಿದೆ. ಕನಕಗಿರಿ ಮತ್ತು ಗಂಗಾವತಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಲ್ಲಿಕೆಯಾಗುತ್ತಿರುವ ನಾಮಪತ್ರ ಸೇರಿ ಒಟ್ಟಾರೆಯಾಗಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ವೀಕ್ಷಕರ ತಂಡದ ಅಧಿಕಾರಿ ವಿನೋದಕುಮಾರ, ತಾಲೂಕು ಚುನಾವಣಾ ವಿಭಾಗದ ಶಿರಸ್ತೇದಾರ್ ಎಂ.ಗುರುರಾಜ ಸೇರಿದಂತೆ ಇತರರು ಇದ್ದರು.