‘ಸ್ವಯಂ ಇಚ್ಛೆಯಿಂದ ಹೋಗಿರುವೆ’
ನನ್ನನ್ನು ಯಾರೂ ಅಪಹರಿಸಿಲ್ಲ. ಸ್ವಯಂ ಇಚ್ಛೆಯಿಂದಲೇ ಹೋಗಿರುವೆ. ಪಾಲಕರು ನನಗೆ ಬಲವಂತವಾಗಿ 2ನೇ ಮದುವೆ ಮಾಡಿದ್ದರು ಎಂದು ನವವಿವಾಹಿತೆ ಹೇಳಿಕೆ ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ.
Vijaya Karnataka 12 Oct 2018, 12:00 am
ಕೊಪ್ಪಳ : ನನ್ನನ್ನು ಯಾರೂ ಅಪಹರಿಸಿಲ್ಲ. ಸ್ವಯಂ ಇಚ್ಛೆಯಿಂದಲೇ ಹೋಗಿರುವೆ. ಪಾಲಕರು ನನಗೆ ಬಲವಂತವಾಗಿ 2ನೇ ಮದುವೆ ಮಾಡಿದ್ದರು ಎಂದು ನವವಿವಾಹಿತೆ ಹೇಳಿಕೆ ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ.
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಗುರುವಾರ ಸಂಜೆ ಆಗಮಿಸಿದ ನವವಿವಾಹಿತೆ ಗಾಯತ್ರಿ, ನನ್ನ ಅಪಹರಣ ಆಗಿಲ್ಲ ಎಂದಿದ್ದಾರೆ. ಜತೆಗೆ, ತಾನೂ ಪ್ರೀತಿಸಿದ್ದ ಈಗಾಗಲೇ ಬೆಂಗಳೂರಿನಲ್ಲಿ ತನ್ನೊಂದಿಗೆ ಮದುವೆಯಾಗಿರುವ ಅಂಜುಕುಮಾರ್ ಎಂಬಾತನ ಜತೆಗೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾರೆ.
ದೂರಿಗೆ ತಿರುವು: ಗಂಗಾವತಿ ತಾಲೂಕಿನ ನವಲಿ ಗ್ರಾಮದ ಮಲ್ಲನಗೌಡರ್ ಹಾಗೂ ಗುಡೂರು ಗ್ರಾಮದ ಗಾಯಿತ್ರಿ ಅವರ ಮದುವೆ ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ ಸೆ. 24 ರಂದು ಜರುಗಿತ್ತು. ಈ ಮದುವೆಗೆ ಎರಡು ಕುಟುಂಬಸ್ಥರು ಸಾಕ್ಷಿಯಾಗಿದ್ದರು. ಅ.7 ರಂದು ಗಾಯತ್ರಿ ಮನೆಯಿಂದ ಕಾಣೆಯಾಗಿದ್ದರು. ಅಪಹರಣ ಮಾಡಲಾಗಿದೆ ಎಂದು ನವವಿವಾಹಿತೆಯ ಪತಿ ಮಲ್ಲನಗೌಡರ್ ದೂರು ನೀಡಿದ್ದರು. ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು.
ಬಲವಂತದ ಮದುವೆ: ನೇರವಾಗಿ ಎಸ್ಪಿ ಕಚೇರಿಗೆ ಆಗಮಿಸಿರುವ ಗಾಯತ್ರಿ, ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದಾರೆ. ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ. ನಾನಾಗಿಯೇ ಅಂಜುಕುಮಾರ್ ಜತೆಗೆ ಹೋಗಿದ್ದೇನೆ. 6 ತಿಂಗಳು ಹಿಂದೆಯೇ ಬೆಂಗಳೂರಿನ ದೇವಾಲಯದಲ್ಲಿ ಅಂಜುಕುಮಾರ್ ಜತೆಗೆ ಮದುವೆಯಾಗಿದೆ. ಮನೆಯಲ್ಲಿ ವಿಷಯ ಗೊತ್ತಾಗಿತ್ತು. ನನ್ನ ಸಹೋದರರು ಸೇರಿದಂತೆ ಎಲ್ಲರೂ ಸೇರಿ ಒತ್ತಾಯದಿಂದ ಮಾವನ ಜತೆಗೆ ನನಗೆ ಎರಡನೇ ಮದುವೆ ಮಾಡಿಸಿದ್ದಾರೆ. ಇಷ್ಟವಿಲ್ಲದ್ದರಿಂದ ಮನೆ ಬಿಟ್ಟು ಹೋಗಿರುವೆ. ನನಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ವಿಚಾರಣೆ ಆರಂಭಿಸಿರುವ ಪೊಲೀಸರು, ಕೌನ್ಸೆಲಿಂಗ್ನ ಮೊರೆ ಹೋಗಿದ್ದಾರೆ.
ಸೋಮನಾಳ ಗ್ರಾಮದ ಅಂಜುಕುಮಾರ ಹಾಗೂ ಆತನ 6 ಜನ ಸ್ನೇಹಿತರ ವಿರುದ್ಧ ಅ.8 ರಂದು ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
...
ಗಾಯಿತ್ರಿಗೆ ನಾನಾ ಹಂತದಲ್ಲಿ ಕೌನ್ಸಲಿಂಗ್ ನಡೆಸಲಾಗುವುದು. ಕೌನ್ನೆಲಿಂಗ್ ಮುಗಿದ ಆಕೆ ಹೋಗಿದ್ದಾಳೆಯೇ? ಒತ್ತಾಯಕ್ಕೆ ಮಣಿದು ಹೋಗಿದ್ದಾಳೆಯೇ ಎನ್ನುವುದನ್ನು ತಿಳಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು.
- ರೇಣುಕಾ ಸುಕುಮಾರ್, ಎಸ್ಪಿ, ಕೊಪ್ಪಳ
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಗುರುವಾರ ಸಂಜೆ ಆಗಮಿಸಿದ ನವವಿವಾಹಿತೆ ಗಾಯತ್ರಿ, ನನ್ನ ಅಪಹರಣ ಆಗಿಲ್ಲ ಎಂದಿದ್ದಾರೆ. ಜತೆಗೆ, ತಾನೂ ಪ್ರೀತಿಸಿದ್ದ ಈಗಾಗಲೇ ಬೆಂಗಳೂರಿನಲ್ಲಿ ತನ್ನೊಂದಿಗೆ ಮದುವೆಯಾಗಿರುವ ಅಂಜುಕುಮಾರ್ ಎಂಬಾತನ ಜತೆಗೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾರೆ.
ದೂರಿಗೆ ತಿರುವು: ಗಂಗಾವತಿ ತಾಲೂಕಿನ ನವಲಿ ಗ್ರಾಮದ ಮಲ್ಲನಗೌಡರ್ ಹಾಗೂ ಗುಡೂರು ಗ್ರಾಮದ ಗಾಯಿತ್ರಿ ಅವರ ಮದುವೆ ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ ಸೆ. 24 ರಂದು ಜರುಗಿತ್ತು. ಈ ಮದುವೆಗೆ ಎರಡು ಕುಟುಂಬಸ್ಥರು ಸಾಕ್ಷಿಯಾಗಿದ್ದರು. ಅ.7 ರಂದು ಗಾಯತ್ರಿ ಮನೆಯಿಂದ ಕಾಣೆಯಾಗಿದ್ದರು. ಅಪಹರಣ ಮಾಡಲಾಗಿದೆ ಎಂದು ನವವಿವಾಹಿತೆಯ ಪತಿ ಮಲ್ಲನಗೌಡರ್ ದೂರು ನೀಡಿದ್ದರು. ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು.
ಬಲವಂತದ ಮದುವೆ: ನೇರವಾಗಿ ಎಸ್ಪಿ ಕಚೇರಿಗೆ ಆಗಮಿಸಿರುವ ಗಾಯತ್ರಿ, ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದಾರೆ. ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ. ನಾನಾಗಿಯೇ ಅಂಜುಕುಮಾರ್ ಜತೆಗೆ ಹೋಗಿದ್ದೇನೆ. 6 ತಿಂಗಳು ಹಿಂದೆಯೇ ಬೆಂಗಳೂರಿನ ದೇವಾಲಯದಲ್ಲಿ ಅಂಜುಕುಮಾರ್ ಜತೆಗೆ ಮದುವೆಯಾಗಿದೆ. ಮನೆಯಲ್ಲಿ ವಿಷಯ ಗೊತ್ತಾಗಿತ್ತು. ನನ್ನ ಸಹೋದರರು ಸೇರಿದಂತೆ ಎಲ್ಲರೂ ಸೇರಿ ಒತ್ತಾಯದಿಂದ ಮಾವನ ಜತೆಗೆ ನನಗೆ ಎರಡನೇ ಮದುವೆ ಮಾಡಿಸಿದ್ದಾರೆ. ಇಷ್ಟವಿಲ್ಲದ್ದರಿಂದ ಮನೆ ಬಿಟ್ಟು ಹೋಗಿರುವೆ. ನನಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ವಿಚಾರಣೆ ಆರಂಭಿಸಿರುವ ಪೊಲೀಸರು, ಕೌನ್ಸೆಲಿಂಗ್ನ ಮೊರೆ ಹೋಗಿದ್ದಾರೆ.
ಸೋಮನಾಳ ಗ್ರಾಮದ ಅಂಜುಕುಮಾರ ಹಾಗೂ ಆತನ 6 ಜನ ಸ್ನೇಹಿತರ ವಿರುದ್ಧ ಅ.8 ರಂದು ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
...
ಗಾಯಿತ್ರಿಗೆ ನಾನಾ ಹಂತದಲ್ಲಿ ಕೌನ್ಸಲಿಂಗ್ ನಡೆಸಲಾಗುವುದು. ಕೌನ್ನೆಲಿಂಗ್ ಮುಗಿದ ಆಕೆ ಹೋಗಿದ್ದಾಳೆಯೇ? ಒತ್ತಾಯಕ್ಕೆ ಮಣಿದು ಹೋಗಿದ್ದಾಳೆಯೇ ಎನ್ನುವುದನ್ನು ತಿಳಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು.
- ರೇಣುಕಾ ಸುಕುಮಾರ್, ಎಸ್ಪಿ, ಕೊಪ್ಪಳ