ಕೊಪ್ಪಳ : ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಜಿ.ಪಂ.ನಿಂದ ವೀಲ್ಚೇರ್ ಹಾಗೂ ಸಮೀಪದೃಷ್ಟಿ ಕನ್ನಡಿಗಳನ್ನು ಜಿ.ಪಂ.ಸಿಇಒ ವೆಂಕಟರಾಜಾ ಬುಧವಾರ ಗ್ರಾ.ಪಂ.ಗಳಿಗೆ ವಿತರಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ವಿಕಲಚೇತನರು ಇರುವ ವಾರ್ಡ್ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಂತಹ ಮತಗಟ್ಟೆಗಳಲ್ಲಿ ಮಾತ್ರ ವೀಲ್ಚೇರ್ ಬಳಕೆಯಾಗಲು ಜವಾಬ್ದಾರಿಯುತ ವ್ಯಕ್ತಿಗೆ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಾಗಿ ನೀಡಬೇಕು. ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರು ಸಾಮಾನ್ಯರಂತೆ ತಮ್ಮ ಹಕ್ಕು ಭಾಧ್ಯತೆಗಳನ್ನು ನಿರ್ಭಯವಾಗಿ ಚಲಾಯಿಸಬಹುದಾಗಿದೆ. ಈ ದೃಷ್ಟಿಯಿಂದ ವಿಕಲಚೇತನರಿಗೆ ಸಹಕಾರಿಯಾಗಲು ಜಿಲ್ಲಾ ಪಂಚಾಯಿತಿಯಿಂದ ವಿಲ್ಚೇರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಂಧರು ಮತ ಚಲಾಯಿಸಲು ಸಮೀಪದೃಷ್ಟಿ ಕನ್ನಡಿಗಳನ್ನು (ಮ್ಯಾಗ್ನಿಫಯಿಂಗ್ ಗ್ಲಾಸ್) ಗ್ರಾ.ಪಂ.ಗಳು ತಮ್ಮ ಸ್ವಂತ ಸಂಪನ್ಮೂಲದಿಂದ ಖರೀದಿಸಿ ಅವುಗಳನ್ನು ಮತದಾನ ದಿನದಂದು ಸಂಬಂಧಿಸಿದ ಭೂತ್ ಮಟ್ಟದ ಅಧಿಕಾರಿಗಳಿಗೆ ವಿತರಣೆಯಾಗುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಚುನಾವಣಾ ದಿನದಂದು ಜಿಲ್ಲೆಯಲ್ಲಿ ಸುಗಮವಾಗಿ ಮತ ಚಲಾಯಿಸಲು ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ತಾ.ಪಂ.ಇಒ ಟಿ.ಕೃಷ್ಣಮೂರ್ತಿ, ತಾಲೂಕು ಯೋಜನಾಧಿಕಾರಿ ಶರಣಯ್ಯ ಸಸಿಮಠ ಸೇರಿದಂತೆ ತಾಲೂಕಿನ 38 ಗ್ರಾ.ಪಂ. ಗಳ ಪಿಡಿಒಗಳು, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಭಾಗವಹಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ವಿಕಲಚೇತನರು ಇರುವ ವಾರ್ಡ್ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಂತಹ ಮತಗಟ್ಟೆಗಳಲ್ಲಿ ಮಾತ್ರ ವೀಲ್ಚೇರ್ ಬಳಕೆಯಾಗಲು ಜವಾಬ್ದಾರಿಯುತ ವ್ಯಕ್ತಿಗೆ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಾಗಿ ನೀಡಬೇಕು. ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರು ಸಾಮಾನ್ಯರಂತೆ ತಮ್ಮ ಹಕ್ಕು ಭಾಧ್ಯತೆಗಳನ್ನು ನಿರ್ಭಯವಾಗಿ ಚಲಾಯಿಸಬಹುದಾಗಿದೆ. ಈ ದೃಷ್ಟಿಯಿಂದ ವಿಕಲಚೇತನರಿಗೆ ಸಹಕಾರಿಯಾಗಲು ಜಿಲ್ಲಾ ಪಂಚಾಯಿತಿಯಿಂದ ವಿಲ್ಚೇರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಂಧರು ಮತ ಚಲಾಯಿಸಲು ಸಮೀಪದೃಷ್ಟಿ ಕನ್ನಡಿಗಳನ್ನು (ಮ್ಯಾಗ್ನಿಫಯಿಂಗ್ ಗ್ಲಾಸ್) ಗ್ರಾ.ಪಂ.ಗಳು ತಮ್ಮ ಸ್ವಂತ ಸಂಪನ್ಮೂಲದಿಂದ ಖರೀದಿಸಿ ಅವುಗಳನ್ನು ಮತದಾನ ದಿನದಂದು ಸಂಬಂಧಿಸಿದ ಭೂತ್ ಮಟ್ಟದ ಅಧಿಕಾರಿಗಳಿಗೆ ವಿತರಣೆಯಾಗುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಚುನಾವಣಾ ದಿನದಂದು ಜಿಲ್ಲೆಯಲ್ಲಿ ಸುಗಮವಾಗಿ ಮತ ಚಲಾಯಿಸಲು ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ತಾ.ಪಂ.ಇಒ ಟಿ.ಕೃಷ್ಣಮೂರ್ತಿ, ತಾಲೂಕು ಯೋಜನಾಧಿಕಾರಿ ಶರಣಯ್ಯ ಸಸಿಮಠ ಸೇರಿದಂತೆ ತಾಲೂಕಿನ 38 ಗ್ರಾ.ಪಂ. ಗಳ ಪಿಡಿಒಗಳು, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಭಾಗವಹಿಸಿದರು.