ಗಂಗಾಧರ ಬಂಡಿಹಾಳ ಕೊಪ್ಪಳ
''ನನ್ನ ಜೀವವಾಗಿದ್ದ ಮೂವರು ಮಕ್ಕಳು ಕಣ್ಮುಚ್ಚಿ ಹೋದ ಮ್ಯಾಲ ನಾ ಯಾರಿಗಂತ ಬದುಕಲಿ? ನನಗ ಇನ್ಮುಂದ ಅಪ್ಪ ಅಂತ ಯಾರು ಕರೀತಾರ? ಸುಜಾತ, ಗವಿಸಿದ್ದ, ಅಮರೇಶ ಅಂತ ನಾ ಯಾರನ್ನ ಕರೆಯಬೇಕು?''
ತಾಲೂಕಿನ ಯಲಮಗೇರಿ ಗ್ರಾಮದಲ್ಲಿಹಳೆ ಮನೆಯ ಚಾವಣಿ ಕುಸಿತದಲ್ಲಿ ಮೂವರು ಮಕ್ಕಳನ್ನು ಕಳೆದುಕೊಂಡ ಸೋಮಣ್ಣನವರ ಆಕ್ರಂದನವಿದು. ಮರಣೋತ್ತರ ಪರೀಕ್ಷೆ ನಿಮಿತ್ತ ಜಿಲ್ಲಾಸ್ಪತ್ರೆಗೆ ತಂದ ಮಕ್ಕಳ ಶವಗಳ ಮುಂದೆ ತಂದೆಯ ರೋದನ ನೆರೆದವರ ಕಣ್ಣಾಲಿಗಳನ್ನು ತೇವಗೊಳಿಸಿದವು.
11 ವರ್ಷಗಳ ಹಿಂದೆಯೇ ಪತ್ನಿಯನ್ನು ಕಳೆದುಕೊಂಡಿದ್ದ ಸೋಮಣ್ಣ ಅವರು, ತನ್ನ ಮೂವರು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ್ದರು. ಈ ಮಕ್ಕಳಿಗೆ ತಂದೆ, ತಾಯಿ ಎರಡೂ ಆಗಿದ್ದರು. ಮೂವರು ಮಕ್ಕಳು ಬೆಳೆದು ದೊಡ್ಡವರಾದರೆ, ವಯಸ್ಸಾದ ತನಗೆ ನೆರವಾಗುತ್ತಾರೆ ಎಂಬ ಕನಸನ್ನೇ ಕಾಣುತ್ತಿದ್ದ ಅವರ ಪಾಲಿಗೆ ಹಳೆಯ ಮನೆ ಚಾವಣಿ ಯಮಸ್ವರೂಪಿಯಾಯಿತು.
ಮನೆ ಚಾವಣಿ ಕುಸಿತ: ಮೂವರು ಮಕ್ಕಳನ್ನು ಕಳೆದುಕೊಂಡು ಒಂಟಿಯಾದ ತಂದೆ
ಹಿರಿಯ ಮಗಳು ಸುಜಾತ ಮೊದಲ ವರ್ಷದ ಬಿಎ ವ್ಯಾಸಂಗಮಾಡುತ್ತಿದ್ದಳು. ಆಕೆಯನ್ನು ಮದುವೆ ಮಾಡಿಕೊಳ್ಳಲು ಸಂಬಂಧ ಹುಡುಕಿ ಬಂದಿದ್ದರೂ ಓದಬೇಕು ಎನ್ನುವ ಬಯಕೆಯಿಂದ ಬೇಗನೇ ಮದುವೆ ನಿರಾಕರಿಸಿದ್ದಳು. ತಂದೆ ಸೋಮಣ್ಣ, ಮಗಳ ಆಸೆಗೆ ನೀರೆರದು ಓದುವುದಕ್ಕೆ ಅವಕಾಶ ಕಲ್ಪಿಸಿದ್ದರು. ಓದಿ ದೊಡ್ಡ ಆಫೀಸರ್ ಆಗಬೇಕು ಎನ್ನುವ ಮಗಳ ಕನಸು ಮಾತ್ರ ಕಮರಿತು. ಹಿರಿಯ ಮಗಳು ಕುಟುಂಬದಲ್ಲಿ ತಾಯಿಯಂತೆ ಮನೆಯ ಜವಾಬ್ದಾರಿ ನಿರ್ವಹಿಸುತ್ತ ಎಲ್ಲರ ಮೆಚ್ಚುಗೆ ಗಳಿಸಿದ್ದಳು.
ಮಣ್ಣುಪಾಲಾದ ಹೋಳಿಗೆ
ಸೀಗೆ ಹುಣ್ಣಿಮೆ ನಿಮಿತ್ತ ಮನೆಯಲ್ಲಿ ಎಳ್ಳು ಹೋಳಿಗೆ ತಯಾರಿಸಲಾಗಿತ್ತು. ಹೋಳಿಗೆಗಳೆಲ್ಲಮಣ್ಣು ಪಾಲಾದವು. ''ಮಣ್ಣುಪಾಲಾದ ಹೋಳಿಗೆಯನ್ನು ಯಾರು ತಿನ್ನಬೇಕು?'' ಎಂದು ಸೋಮಣ್ಣ ಹಲವು ಘಟನೆಗಳನ್ನು ನೆನಪಿಸಿಕೊಂಡು ಕುಳಿತ ನೆಲವನ್ನು ಕಣ್ಣೀರಿನಿಂದ ತೋಯಿಸಿದರು. ಎರಡನೇ ಮಗ ಅಮರೇಶ ಎರಡನೇ ಪಿಯುಸಿಯಲ್ಲಿ ಓದುತ್ತಿದ್ದರೆ, ಕೊನೆಯ ಮಗ ಗವಿಸಿದ್ಧಪ್ಪ 9 ನೇ ತರಗತಿ ಓದುತ್ತಿದ್ದ.
ಶಿಥಿಲಗೊಂಡಿದ್ದ ಮನೆ ಬಿಚ್ಚಿ ಹೊಸದಾಗಿ ನಿರ್ಮಿಸಬೇಕು ಎಂದು ಸೋಮಣ್ಣನವರು ತನ್ನ ಮಕ್ಕಳೊಂದಿಗೆ ಹಲವು ಬಾರಿ ಚರ್ಚಿಸಿದ್ದರು. ಮುಂಬರುವ ಬೇಸಿಗೆಯಲ್ಲಿಈ ಮನೆ ಬಿಚ್ಚಿಸಿ ಹೊಸದಾಗಿ ಕಟ್ಟಿಸಲು ನಿರ್ಧರಿಸಿದ್ದರು. ಆದರೆ, ವಿಧಿಯಾಟ ಹೊಸ ಮನೆ ನಿರ್ಮಾಣದ ಮುನ್ನವೇ ಮೂವರು ಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸ್ವಲ್ಪ ಹೊತ್ತಿನ ನಂತರ ತಂದೆಯ ಗಂಟಲು ಕಟ್ಟಿ, ಮಾತುಗಳೇ ಹೊರಡದಾದವು.
ತಲಾ 5ಲಕ್ಷ ರೂ. ಪರಿಹಾರ ಘೋಷಣೆ
''ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ವಿತರಿಸಲಾಗುವುದು. ಎನ್ಡಿಆರ್ಎಫ್ ಯೋಜನೆಯಡಿ 4 ಲಕ್ಷ ರೂ., ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1ಲಕ್ಷ ರೂ. ಸೇರಿ 5ಲಕ್ಷ ರೂ.ಗಳಂತೆ ಮೂವರಿಗೆ 15 ಲಕ್ಷ ರೂ. ವಿತರಿಸಲಾಗುವುದು. ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದಲೂ ತಲಾ 2 ಲಕ್ಷ ರೂ. ಪರಿಹಾರ ವಿತರಿಸಲಾಗುತ್ತದೆ'' ಎಂದು ತಹಸೀಲ್ದಾರ್ ಜಿ.ಬಿ.ಮಜ್ಜಿಗೆ ತಿಳಿಸಿದ್ದಾರೆ.
''ನನ್ನ ಜೀವವಾಗಿದ್ದ ಮೂವರು ಮಕ್ಕಳು ಕಣ್ಮುಚ್ಚಿ ಹೋದ ಮ್ಯಾಲ ನಾ ಯಾರಿಗಂತ ಬದುಕಲಿ? ನನಗ ಇನ್ಮುಂದ ಅಪ್ಪ ಅಂತ ಯಾರು ಕರೀತಾರ? ಸುಜಾತ, ಗವಿಸಿದ್ದ, ಅಮರೇಶ ಅಂತ ನಾ ಯಾರನ್ನ ಕರೆಯಬೇಕು?''
ತಾಲೂಕಿನ ಯಲಮಗೇರಿ ಗ್ರಾಮದಲ್ಲಿಹಳೆ ಮನೆಯ ಚಾವಣಿ ಕುಸಿತದಲ್ಲಿ ಮೂವರು ಮಕ್ಕಳನ್ನು ಕಳೆದುಕೊಂಡ ಸೋಮಣ್ಣನವರ ಆಕ್ರಂದನವಿದು. ಮರಣೋತ್ತರ ಪರೀಕ್ಷೆ ನಿಮಿತ್ತ ಜಿಲ್ಲಾಸ್ಪತ್ರೆಗೆ ತಂದ ಮಕ್ಕಳ ಶವಗಳ ಮುಂದೆ ತಂದೆಯ ರೋದನ ನೆರೆದವರ ಕಣ್ಣಾಲಿಗಳನ್ನು ತೇವಗೊಳಿಸಿದವು.
11 ವರ್ಷಗಳ ಹಿಂದೆಯೇ ಪತ್ನಿಯನ್ನು ಕಳೆದುಕೊಂಡಿದ್ದ ಸೋಮಣ್ಣ ಅವರು, ತನ್ನ ಮೂವರು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ್ದರು. ಈ ಮಕ್ಕಳಿಗೆ ತಂದೆ, ತಾಯಿ ಎರಡೂ ಆಗಿದ್ದರು. ಮೂವರು ಮಕ್ಕಳು ಬೆಳೆದು ದೊಡ್ಡವರಾದರೆ, ವಯಸ್ಸಾದ ತನಗೆ ನೆರವಾಗುತ್ತಾರೆ ಎಂಬ ಕನಸನ್ನೇ ಕಾಣುತ್ತಿದ್ದ ಅವರ ಪಾಲಿಗೆ ಹಳೆಯ ಮನೆ ಚಾವಣಿ ಯಮಸ್ವರೂಪಿಯಾಯಿತು.
ಮನೆ ಚಾವಣಿ ಕುಸಿತ: ಮೂವರು ಮಕ್ಕಳನ್ನು ಕಳೆದುಕೊಂಡು ಒಂಟಿಯಾದ ತಂದೆ
ಹಿರಿಯ ಮಗಳು ಸುಜಾತ ಮೊದಲ ವರ್ಷದ ಬಿಎ ವ್ಯಾಸಂಗಮಾಡುತ್ತಿದ್ದಳು. ಆಕೆಯನ್ನು ಮದುವೆ ಮಾಡಿಕೊಳ್ಳಲು ಸಂಬಂಧ ಹುಡುಕಿ ಬಂದಿದ್ದರೂ ಓದಬೇಕು ಎನ್ನುವ ಬಯಕೆಯಿಂದ ಬೇಗನೇ ಮದುವೆ ನಿರಾಕರಿಸಿದ್ದಳು. ತಂದೆ ಸೋಮಣ್ಣ, ಮಗಳ ಆಸೆಗೆ ನೀರೆರದು ಓದುವುದಕ್ಕೆ ಅವಕಾಶ ಕಲ್ಪಿಸಿದ್ದರು. ಓದಿ ದೊಡ್ಡ ಆಫೀಸರ್ ಆಗಬೇಕು ಎನ್ನುವ ಮಗಳ ಕನಸು ಮಾತ್ರ ಕಮರಿತು. ಹಿರಿಯ ಮಗಳು ಕುಟುಂಬದಲ್ಲಿ ತಾಯಿಯಂತೆ ಮನೆಯ ಜವಾಬ್ದಾರಿ ನಿರ್ವಹಿಸುತ್ತ ಎಲ್ಲರ ಮೆಚ್ಚುಗೆ ಗಳಿಸಿದ್ದಳು.
ಮಣ್ಣುಪಾಲಾದ ಹೋಳಿಗೆ
ಸೀಗೆ ಹುಣ್ಣಿಮೆ ನಿಮಿತ್ತ ಮನೆಯಲ್ಲಿ ಎಳ್ಳು ಹೋಳಿಗೆ ತಯಾರಿಸಲಾಗಿತ್ತು. ಹೋಳಿಗೆಗಳೆಲ್ಲಮಣ್ಣು ಪಾಲಾದವು. ''ಮಣ್ಣುಪಾಲಾದ ಹೋಳಿಗೆಯನ್ನು ಯಾರು ತಿನ್ನಬೇಕು?'' ಎಂದು ಸೋಮಣ್ಣ ಹಲವು ಘಟನೆಗಳನ್ನು ನೆನಪಿಸಿಕೊಂಡು ಕುಳಿತ ನೆಲವನ್ನು ಕಣ್ಣೀರಿನಿಂದ ತೋಯಿಸಿದರು. ಎರಡನೇ ಮಗ ಅಮರೇಶ ಎರಡನೇ ಪಿಯುಸಿಯಲ್ಲಿ ಓದುತ್ತಿದ್ದರೆ, ಕೊನೆಯ ಮಗ ಗವಿಸಿದ್ಧಪ್ಪ 9 ನೇ ತರಗತಿ ಓದುತ್ತಿದ್ದ.
ಶಿಥಿಲಗೊಂಡಿದ್ದ ಮನೆ ಬಿಚ್ಚಿ ಹೊಸದಾಗಿ ನಿರ್ಮಿಸಬೇಕು ಎಂದು ಸೋಮಣ್ಣನವರು ತನ್ನ ಮಕ್ಕಳೊಂದಿಗೆ ಹಲವು ಬಾರಿ ಚರ್ಚಿಸಿದ್ದರು. ಮುಂಬರುವ ಬೇಸಿಗೆಯಲ್ಲಿಈ ಮನೆ ಬಿಚ್ಚಿಸಿ ಹೊಸದಾಗಿ ಕಟ್ಟಿಸಲು ನಿರ್ಧರಿಸಿದ್ದರು. ಆದರೆ, ವಿಧಿಯಾಟ ಹೊಸ ಮನೆ ನಿರ್ಮಾಣದ ಮುನ್ನವೇ ಮೂವರು ಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸ್ವಲ್ಪ ಹೊತ್ತಿನ ನಂತರ ತಂದೆಯ ಗಂಟಲು ಕಟ್ಟಿ, ಮಾತುಗಳೇ ಹೊರಡದಾದವು.
ತಲಾ 5ಲಕ್ಷ ರೂ. ಪರಿಹಾರ ಘೋಷಣೆ
''ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ವಿತರಿಸಲಾಗುವುದು. ಎನ್ಡಿಆರ್ಎಫ್ ಯೋಜನೆಯಡಿ 4 ಲಕ್ಷ ರೂ., ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1ಲಕ್ಷ ರೂ. ಸೇರಿ 5ಲಕ್ಷ ರೂ.ಗಳಂತೆ ಮೂವರಿಗೆ 15 ಲಕ್ಷ ರೂ. ವಿತರಿಸಲಾಗುವುದು. ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದಲೂ ತಲಾ 2 ಲಕ್ಷ ರೂ. ಪರಿಹಾರ ವಿತರಿಸಲಾಗುತ್ತದೆ'' ಎಂದು ತಹಸೀಲ್ದಾರ್ ಜಿ.ಬಿ.ಮಜ್ಜಿಗೆ ತಿಳಿಸಿದ್ದಾರೆ.