ಆ್ಯಪ್ನಗರ

ಕಾಮಗಾರಿ ಪರಿಶೀಲಿಸಿದ ಶಾಸಕ

ಇಲ್ಲಿನ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ನಡೆದಿರುವ ನಾನಾ ಕಟ್ಟಡಗಳ ಕಾಮಗಾರಿಗಳನ್ನು ಶಾಸಕ ಅಮರೇಗೌಡ ಬಯ್ಯಾಪುರ ಅವರು ಸೋಮವಾರ ಪರಿಶೀಲಿಸಿದರು.

Vijaya Karnataka 7 Aug 2018, 5:00 am
ಕುಷ್ಟಗಿ : ಇಲ್ಲಿನ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ನಡೆದಿರುವ ನಾನಾ ಕಟ್ಟಡಗಳ ಕಾಮಗಾರಿಗಳನ್ನು ಶಾಸಕ ಅಮರೇಗೌಡ ಬಯ್ಯಾಪುರ ಅವರು ಸೋಮವಾರ ಪರಿಶೀಲಿಸಿದರು. ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿರುವ ಹಾಸ್ಟೆಲ್‌ ಕಟ್ಟಡದ ಬಗ್ಗೆ ಶಾಸಕ ಮಾಹಿತಿ ಪಡೆದರು. ಕಟ್ಟಡ ಪೂರ್ಣಗೊಂಡು ಹಸ್ತಾಂತರವಾಗಲು ಸರಕಾರ ಇನ್ನೂ 55ಲಕ್ಷ ರೂ. ನೀಡಬೇಕು ಎನ್ನುವುದು ಶಾಸಕರ ಗಮನಕ್ಕೆ ಬಂದಿತು. ರಾಜ್ಯ ತಾಂತ್ರಿಕ ಶಿಕ್ಷ ಣ ಇಲಾಖೆ ನಿರ್ದೇಶಕಗೆ ಕರೆ ಮಾಡಿದ ಶಾಸಕ, ಬಾಕಿ ಇರುವ ಅನುದಾನವನ್ನು ಕೂಡಲೇ ನೀಡುವಂತೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಅವಶ್ಯಕತೆ ಇರುವುದರಿಂದ ಇಲಾಖೆ ತಕ್ಷ ಣ ಕ್ರಮ ಕೈಗೊಳ್ಳಬೇಕು ಎಂದರು. ವರ್ಕ್‌ಶಾಪ್‌ ಪರಿಶೀಲಿಸಿ ವಿದ್ಯುತ್‌ ಸಂಪರ್ಕ ಹಾಗೂ ವಿದ್ಯುತ್‌ ಬಿಲ್‌ ಬಾಕಿಯನ್ನು ಪಿಡಬ್ಲ್ಯುಡಿಯವರು ಪಾವತಿಸುವಂತೆ ಸೂಚಿಸಿದರು. ಹೈ.ಕ.ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ಮಂಜೂರಾಗಿರುವ 2 ಹಾಸ್ಟೆಲ್‌ ಕಟ್ಟಡಗಳ ಕಾಮಗಾರಿಯನ್ನು ವೀಕ್ಷಿಸಿದರು. ನಿರ್ಮಾಣಗೊಂಡಿರುವ ಸಿಬ್ಬಂದಿ ವಸತಿಗೃಹಗಳನ್ನು ಕಾಲೇಜಿಗೆ ಹಸ್ತಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕಾಲೇಜಿನ ಪ್ರಾಚಾರ್ಯ ಮತ್ತು ಸಿಬ್ಬಂದಿಯೊಂದಿಗೆ ಚರ್ಚಿಸಿ, ಬೆಂಗಳೂರಿನಲ್ಲಿ ತಾಂತ್ರಿಕ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕ ಅಮರೇಗೌಡ ಬಯ್ಯಾಪುರ ನೀಡಿದರು.
Vijaya Karnataka Web KPL-KPL6KST04


ಈ ಸಂದರ್ಭದಲ್ಲಿ ಪ್ರಾಚಾರ್ಯ ಆರ್‌.ಪಿ.ಕಿರಗಿ, ಪಿಡಬ್ಲ್ಯುಡಿ ಎಇಇ ಎಚ್‌.ಬಿ.ಕಂಠಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ