ಆ್ಯಪ್ನಗರ

‘ಕೂಲಿಕಾರರು ಆರ್ಥಿಕ ಬಲಿಷ್ಠರಾಗಲಿ’

ಪ್ರತಿಯೊಬ್ಬ ಕೂಲಿಕಾರರು ಆರ್ಥಿಕ ಬಲಿಷ್ಠರಾಗಬೇಕು ಎಂದು ಸಿಐಟಿಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.

Vijaya Karnataka 26 Jul 2018, 5:00 am
ಗಂಗಾವತಿ : ಪ್ರತಿಯೊಬ್ಬ ಕೂಲಿಕಾರರು ಆರ್ಥಿಕ ಬಲಿಷ್ಠರಾಗಬೇಕು ಎಂದು ಸಿಐಟಿಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.
Vijaya Karnataka Web KPL-KPL25CM04


ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಶ್ರೀಕೃಷ್ಣದೇವರಾಯ ಕಲಾಭವನದಲ್ಲಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೈಡ್‌ಯೂನಿಯನ್‌ ಸಂಘಟನೆಯ ಜಿಲ್ಲಾ ಸಮಿತಿಯಿಂದ ಬುಧವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು. ದೇಶದಲ್ಲಿರುವ ಸಂಪತ್ತು ಈಗಲೂ ಕೆಲ ಜನರ ಕೈ ಸೇರುತ್ತಿದೆ. ಹಾಗಾಗಿ ಅವರ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಅಸಂಘಟಿತ ಕಾರ್ಮಿಕರ, ಕೂಲಿಕಾರರ, ರೈತರ ಆದಾಯ ಮಾತ್ರ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ. ಕೂಲಿಕಾರರಿಗೆ, ಕಾರ್ಮಿಕರಿಗೆ ಅನುಕೂಲವಾಗಿರುವ 7ನೇ ವೇತನ ಆಯೋಗ, ಕನಿಷ್ಠ ವೇತನ, ಕಾಯಂ ಉದ್ಯೋಗ ಖಾತರಿ ಯೋಜನೆಗಳು ಜಾರಿಯಾಗದೆ. ದುಡಿಯುವ ವರ್ಗವನ್ನು ತುಳಿಯಲಾಗುತ್ತಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ರೈತರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ರಾಜಕೀಯ ನಾಯಕರು ಚುನಾವಣೆ ವೇಳೆ ಮಾತ್ರ ರೈತರಿಗೆ ನಂಬಿಕೆ ಹುಟ್ಟಿಸಿ ಮೋಸ ಮಾಡುತ್ತಿದ್ದಾರೆ. ದೇಶದ ಯುವ ಶಕ್ತಿಗೆ ಉದ್ಯೋಗ ಕೊರತೆ ಕಂಡು ಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುವಕರು ಜೀವನದ ಭದ್ರತೆ ಇಲ್ಲದಂತ ಉದ್ಯೋಗ ಮಾಡುತ್ತಿದ್ದಾರೆ. ನಾವೆಲ್ಲರೂ ಸಂಘಟಿತರಾಗಬೇಕು. ಸಂಘಟನೆಯ ಮೂಲಕ ನಮ್ಮ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಸಿಐಟಿಯು ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಆರ್‌.ಎಸ್‌.ಬಸವರಾಜ, ಸಂಘಟನೆಯ ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್‌, ಜಿ.ಕಾರ್ಯದರ್ಶಿ ಖಾಸಿಂ ಸರದಾರ, ಪ್ರಮುಖರಾದ ಲಕ್ಷ್ಮಿದೇವಿ, ಸಾವಿತ್ರಿ ಹಾಗೂ ಸಂಘಟನೆಯ ಮುಖಂಡರು ಇದ್ದರು.

====

ಖಾಸಾಗೀಕರಣ ಹಾಗೂ ಉದಾರೀಕರಣದಿಂದಾಗಿ ದೇಶದಲ್ಲಿ ಉಳ್ಳವರು ಮಾತ್ರ ಆರ್ಥಿಕ ಬಲಿಷ್ಠರಾಗುತ್ತಿದ್ದಾರೆ. ಆದರೆ ಕೂಲಿಕಾರಿಗೆ ಕನಿಷ್ಠ ವೇತನ ಜಾರಿಯಾಗದ ಪರಿಣಾಮ ಇದುವರೆಗೂ ಕೂಲಿಕಾರರಾಗಿಯೇ ಬದುಕು ಸಾಗಿಸುತ್ತಿದ್ದಾರೆ. ಹಾಗಾಗಿ ಕೂಲಿಕಾರರು ಎಚ್ಚೆತ್ತು ಹೋರಾಟದ ಮೂಲಕ ಅದನ್ನು ಪಡೆದುಕೊಳ್ಳಬೇಕು.

- ಮೀನಾಕ್ಷಿ ಸುಂದರಂ, ಸಿಐಟಿಯು ಸಂಘಟನೆಯ ರಾಜ್ಯ ಕಾರ್ಯದರ್ಶಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ