ಆ್ಯಪ್ನಗರ

ಪಾಲಹಳ್ಳಿ ಎತ್ತಿನಗಾಡಿ ಓಟ ರೋಮಾಂಚನ

ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಶಂಭುಲಿಂಗೇಶ್ವರ ಯುವಕರ ಬಳಗ ಆಯೋಜಿಸಿದ್ದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ನೋಡುಗರನ್ನು ರೋಮಾಂಚನ ಗೊಳಿಸಿತು.

Vijaya Karnataka Web 29 Feb 2016, 5:07 am
ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಶಂಭುಲಿಂಗೇಶ್ವರ ಯುವಕರ ಬಳಗ ಆಯೋಜಿಸಿದ್ದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ನೋಡುಗರನ್ನು ರೋಮಾಂಚನ ಗೊಳಿಸಿತು.
Vijaya Karnataka Web
ಪಾಲಹಳ್ಳಿ ಎತ್ತಿನಗಾಡಿ ಓಟ ರೋಮಾಂಚನ

ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ನಂಜನಗೂಡು, ಕೊಳ್ಳೇಗಾಲ, ತುಮಕೂರು, ರಾಮನಗರ, ಹುಬ್ಬಳ್ಳಿ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಜೋಡೆತ್ತುಗಳಿಗೆ ಎತ್ತಿನಗಾಡಿಯನ್ನು ಕಟ್ಟಿ ಸವಾರರು ಚಾಟಿ ಬೀಸಿ ಗೆಲುವಿಗೆ ಸೆಣಸಿದರು. ಸ್ಪರ್ಧೆಯಿಂದ ಹಿಂದೆ ಬೀಳುವ ಎತ್ತುಗಳ ಸವಾರರು ಎತ್ತುಗಳ ಬಾಲ ಹಿಡಿದು ಬಾಯಿಂದ ಕಚ್ಚಿ, ಬಾರುಕೋಲಿನಿಂದ ಬೆದರಿಸಿ ಗುರಿ ಮುಟ್ಟಲು ಶ್ರಮಿಸಿದರು. ಯಾವುದೇ ಅನಾಹುತವಾಗದಂತೆ ಸುಮಾರು 300 ಮೀಟರ್ ದೂರ ಎರಡು ಕಡೆ ಮರದ ಕಂಬಗಳಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸ್ಪರ್ಧೆಗೆ ಚಾಲನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ