ಆ್ಯಪ್ನಗರ

ಶ್ರದ್ಧಾ ಭಕ್ತಿಯ ಗುಡ್ ಫ್ರೈಡೇ

ಯೇಸು ಕ್ರಿಸ್ತನ ಮರಣದ ದಿನವನ್ನು ಸ್ಮರಿಸುವ ಗುಡ್‌ಫ್ರೈಡೆಯನ್ನು ನಗರದ ನಾನಾ ಚರ್ಚುಗಳಲ್ಲಿ ಕ್ರೈಸ್ತ ಸಮುದಾಯವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ವಿಕ ಸುದ್ದಿಲೋಕ 26 Mar 2016, 5:14 am
ಮಂಡ್ಯ: ಯೇಸು ಕ್ರಿಸ್ತನ ಮರಣದ ದಿನವನ್ನು ಸ್ಮರಿಸುವ ಗುಡ್‌ಫ್ರೈಡೆಯನ್ನು ನಗರದ ನಾನಾ ಚರ್ಚುಗಳಲ್ಲಿ ಕ್ರೈಸ್ತ ಸಮುದಾಯವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
Vijaya Karnataka Web
ಶ್ರದ್ಧಾ ಭಕ್ತಿಯ ಗುಡ್ ಫ್ರೈಡೇ

ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಸಂತ ಜೋಸೆಫ್‌ರ ದೇವಾಲಯ, ಕ್ರಿಶ್ಚಿಯನ್ ಕಾಲನಿಯ ಸಾಡೇ ದೇವಾಲಯ, ಯತ್ತಗದಹಳ್ಳಿ ಬಡಾವಣೆ ಯಲ್ಲಿರುವ ಚರ್ಚ್‌ಗಳಲ್ಲಿ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು. ಶೋಕ ಸೂಚಕವಾಗಿ ಶುಕ್ರವಾರ ದಿನವಿಡೀ ಉಪವಾಸ ಮಾಡುವ ಕ್ರೈಸ್ತರು ಕ್ರೈಸ್ತನ ನೆನಪಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಏಸು ಕ್ರಿಸ್ತನ ಸ್ಮರಿಸಿದರು.
ಯೇಸುವಿನ ಸಪ್ತ ವಾಕ್ಯಗಳು, ಯೇಸುವಿನ ಜೀವನ ಚರಿತ್ರೆ, ಮರಣವನ್ನು ಧ್ಯಾನಿಸುವ ಪವಿತ್ರ ಶಿಲುಬೆ ಹಾದಿಯ ರೂಪಕವನ್ನು ಪ್ರಾತ್ಯಕ್ಷಿಕೆ ಮೂಲಕ ಬಿತ್ತರಿಸಲಾಯಿತು. ಯೇಸು ಸ್ವಾಮಿಯ ಧ್ಯಾನ ಮತ್ತು ವಿಶೇಷ ಗೀತಗಾಯನ ನಡೆಯಿತು. ಸಂತ ಜೋಸೆಫರ ದೇವಾಲಯದ ಫಾದರ್ ಎನ್.ಟಿ.ಜೋಸೆಫ್ ಮತ್ತು ಗುರು ವಿಜಯ್ ಮಾರ್ಟಿನ್ ಹೆನ್ರಿ, ಸೈಮನ್, ರೋಸಿ, ಜಾಕ್ಸಿನ್, ಸೋಫಿಯಾ, ಜಾನ್ಸನ್, ಸಿರಿಲ್, ರಾಜೇಶ್, ಶೇಖರ್ ಇತರರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಶ್ರೀರಂಗಪಟ್ಟಣ: ಸಾಮೂಹಿಕ ಪ್ರಾರ್ಥನೆ ಶ್ರೀರಂಗಪಟ್ಟಣ: ಗುಡ್ ಫ್ರೈಡೆ ಅಂಗವಾಗಿ ಶುಕ್ರವಾರ ಪಟ್ಟಣದ ಹೊರವಲಯದಲ್ಲಿರುವ ಗಂಜಾಂ ಅಬ್ಬೆದುಬ್ವಾ ಚರ್ಚ್ ನಲ್ಲಿ ಪಾಧರ್ ಡಾ.ದಯಾನಂದ ಪ್ರಭು ನೇತತ್ವದಲ್ಲಿ ಕ್ರಶ್ಚಿಯನ್ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ