ಆ್ಯಪ್ನಗರ

ಬಿಂಡಿಗನವಿಲೆಯಲ್ಲಿ ಗರುಡ ದೇವರ ಬ್ರಹ್ಮರಥೋತ್ಸವ

ತಾಲೂಕಿನ ಇತಿಹಾಸ ಪ್ರಸಿದ್ಧ ಬಿಂಡಿಗನವಿಲೆಯ ಶ್ರೀ ಚನ್ನಕೇಶವಸ್ವಾಮಿ ಗರುಡ ದೇವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.

Vijaya Karnataka 2 Feb 2018, 4:10 am
ನಾಗಮಂಗಲ: ತಾಲೂಕಿನ ಇತಿಹಾಸ ಪ್ರಸಿದ್ಧ ಬಿಂಡಿಗನವಿಲೆಯ ಶ್ರೀ ಚನ್ನಕೇಶವಸ್ವಾಮಿ ಗರುಡ ದೇವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.
Vijaya Karnataka Web
ಬಿಂಡಿಗನವಿಲೆಯಲ್ಲಿ ಗರುಡ ದೇವರ ಬ್ರಹ್ಮರಥೋತ್ಸವ


ಹನ್ನೆರಡು ದಿನ ನಡೆಯುವ ಶ್ರೀ ಚನ್ನಕೇಶವಸ್ವಾಮಿ ಗರುಡ ದೇವರ ರಥೋತ್ಸವದ ಅಂಗವಾಗಿ ಜ.24ರಿಂದ ನಾನಾ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಗುರುವಾರ ಬೆಳಗ್ಗೆ ಪೂವಂಗಿ ಸೇವೆ, ರಥ ಪ್ರತಿಷ್ಠೆ ಯಾತ್ರಾ ದಾನೋತ್ಸವ ಪ್ರಾಕಾರ, ತಿರುವೀದಿ ಉತ್ಸವ ನಂತರ ಶ್ರೀ ಭಾಷ್ಯಕಾರರ ಸನ್ನಿಧಿ ಮತ್ತು ಶ್ರೀ ವೈನತೇಯ ನಿಲಯದಲ್ಲಿ ಮಂಟಪಡ್ಡಿ ಉತ್ಸವದ ನಂತರ ಮಧ್ಯಾಹ್ನ 12ರ ಅಭಿಜಿನ್‌ ಮುಹೂರ್ತದಲ್ಲಿ ಬ್ರಹ್ಮ ರಥೋತ್ಸವ ನಡೆಯಿತು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವ ಸಮರ್ಪಿಸಿದರು. ನಂತರ ಗರುಡೋತ್ಸವ, ಬಿಸಿಲು ಮಾಳಿಗೆ ಉತ್ಸವ, ಪಲ್ಲಕಿ ಉತ್ಸವ, ಜಲಕ್ರೀಡೋತ್ಸವ ಹಾಗೂ ಡೋಲೋತ್ಸವ ನಡೆಯಿತು.

ಫೆ.2ರಂದು ಮೃಗಬೇಟೆ ಉತ್ಸವಾಂಗ ಕುದುರೆ ಉತ್ಸವ, ಸಂಧಾನ ಲೀಲೋತ್ಸವ ಹಾಗೂ ಅವಭೃತೋತ್ಸವ, ಹನುಮದ್ವಾಹನ, ಫಣಿಮಾಲೆ ಹಾಗೂ ಪೂರ್ಣಾಹುತಿ ನಡೆಯಲಿದೆ. ಪೆ. 3ರಂದು ಮಹಾಭಿಷೇಕ, ಪುಷ್ಪಯಾಗ, ದ್ವಾದಶಾರಾಧನೆ, ಉದ್ವಾಸನ ಪ್ರಬಂಧ ಮತ್ತು ಸೇರ್ತಿ ಸೇವೆ ಹಾಗೂ ಫೆ. 4ರಂದು ಬೆಳಿಗ್ಗೆ ಗರುಡೋತ್ಸವ ಹಾಗೂ ರಾತ್ರಿ ಬೆಳ್ಳಿ ಗರುಡ (ವೈರಮುಡಿ) ಉತ್ಸವದೊಂದಿಗೆ ಬ್ರಹ್ಮೋತ್ಸವಕ್ಕೆ ಸಾಂಪ್ರದಾಯಿಕ ತೆರೆ ಬೀಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ