ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಮಂಡ್ಯ ಪೊಲೀಸರು
ಮಂಡ್ಯ: ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹದಿಂದ ವಿಚಾರಣಾಧೀನ ಕೈದಿಯೊಬ್ಬ ಕರೆ ಮಾಡಿ ಹಣಕ್ಕಾಗಿ ವ್ಯಕ್ತಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಇಬ್ಬರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲದ ಸಲ್ಮಾನ್(19), ನಿಜಾಮುದ್ದೀನ್(22) ಬಂಧಿತರು. ಜೈಲಿನಲ್ಲಿದ್ದ ಕೈದಿ ಮೊಹಮ್ಮದ್ ರಫಿ ಎಂಬಾತ ಏ.6ರಂದು ಮುಡಾ ಅಧ್ಯಕ್ಷ ಮುನಾವರ್ ಖಾನ್ ಸಹೋದರ ಏಜಾಜ್ಖಾನ್ ಅವರಿಗೆ ಮೊಬೈಲ್ ಕರೆ ಮಾಡಿ, ತಾನು ಕಳುಹಿಸುವ ಇಬ್ಬರು ಹುಡುಗರಿಗೆ 5000ರೂ. ಹಣ ನೀಡುವಂತೆ ಬೆದರಿಕೆ ಹಾಕಿದ್ದ.
ಈ ಸಂಬಂಧ ಏಜಾಜ್ಖಾನ್ ಮಂಡ್ಯ ಪೂರ್ವ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಅದೇ ದಿನ ಸಂಜೆ ಹಣ ಕೊಡುವುದಾಗಿ ತಿಳಿಸಿ ಆರೋಪಿಗಳನ್ನು ಮಂಡ್ಯಕ್ಕೆ ಕರೆಸುವಂತೆ ಪೊಲೀಸರು ಏಜಾಜ್ಖಾನ್ಗೆ ತಿಳಿಸಿದ್ದರು. ಅದರಂತೆ ಏಜಾಜ್ಖಾನ್ ಹಣ ಕೊಡುವುದಾಗಿ ಹೇಳಿ ಆರೋಪಿಗಳನ್ನು ಕರೆಸಿದ್ದಾರೆ. ನಗರದ ಶುಗರ್ ಫ್ಯಾಕ್ಟರಿ ವೃತ್ತದಲ್ಲಿ ಆರೋಪಿ ಯುವಕರು ಹಣ ಪಡೆಯುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಿದ್ದಾರೆ. ಮಂಡ್ಯ ನಗರ ಸಿಪಿಐ ಸುರೇಶ್ಕುಮಾರ್, ಪಿಎಸ್ಐ ವೆಂಕಟೇಶ್ ನೇತೃತ್ವ ತಂಡ ಕಾರಾರಯಚರಣೆಯಲ್ಲಿ ಭಾಗವಹಿಸಿತ್ತು. ಜೈಲಿನಲ್ಲಿದ್ದ ಕೈದಿಗೆ ಮೊಬೈಲ್ ಹೇಗೆ ಸಿಕ್ಕಿತು ಎಂಬ ವಿಷಯ ತನಿಖೆಯಿಂದ ಹೊರಬರಬೇಕಿದೆ.