ಆ್ಯಪ್ನಗರ

ಗುಂಡುತೋಪಿನ ಸಂರಕ್ಷ ಣೆ, ಪುರಾತನ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಯುವಕರ ಶ್ರಮ

ವಿಕ ಸುದ್ದಿಲೋಕ ಕಿಕ್ಕೇರಿ ಪರಿಸರದ ಜತೆ ಅವಿನಾಭಾವ ಸಂಬಂಧ ಹೊಂದಿರುವ ಮನುಷ್ಯರು ಅಭಿವೃದ್ಧಿ ಹೆಸರಿನಲ್ಲಿ ಕಾಡನ್ನು ನಾಶಮಾಡಿ ಪರಿಸರದ ಮೇಲೆ ದೌರ್ಜನ್ಯ ನಡೆಸದೇ ...

Vijaya Karnataka 12 Jun 2018, 3:55 pm
ಕಿಕ್ಕೇರಿ: ಪರಿಸರದ ಜತೆ ಅವಿನಾಭಾವ ಸಂಬಂಧ ಹೊಂದಿರುವ ಮನುಷ್ಯರು ಅಭಿವೃದ್ಧಿ ಹೆಸರಿನಲ್ಲಿ ಕಾಡನ್ನು ನಾಶಮಾಡಿ ಪರಿಸರದ ಮೇಲೆ ದೌರ್ಜನ್ಯ ನಡೆಸದೇ ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಜೋಪಾನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ರಾಮದಾಸು ಮನವಿ ಮಾಡಿದರು.
Vijaya Karnataka Web protect nature


ಹಿರಿಕಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದ ಸಮೀಪ ಇರುವ ಗುಂಡುತೋಪಿನ ಸಂರಕ್ಷ ಣೆ ಹಾಗೂ ಪುರಾತನ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಮುಂದಾದ ಹಿರಿಕಳಲೆ ಗ್ರಾಮದ ಯುವಜನರನ್ನು ಅಭಿನಂದಿಸಿ ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ಪರಿಸರ ಅಸಮತೋಲನವನ್ನು ಹೋಗಲಾಡಿಸಿ ಅದರ ಸಂರಕ್ಷ ಣೆಗೆ ಎಲ್ಲರೂ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಮೈಸೂರು-ಚನ್ನರಾಯಪಟ್ಟಣ ಮುಖ್ಯರಸ್ತೆಗೆ ಹೊಂದಿಕೊಂಡಂತ್ತಿದ್ದ ಹಿರಿಕಳಲೆ ಜನರ ಜೀವನಾಡಿಯಾಗಿದ್ದ ಗುಂಡುತೋಪಿನಲ್ಲಿ ನೂರಾರು ಹಣ್ಣಿನ ಮರಗಳು ಕಾಡನ್ನು ಹೋಲುವಂತೆ ಬೆಳೆದು ನಿಂತಿದ್ದವು. ದಿನಕಳೆದಂತೆ ದುರಾಸೆಯ ಫಲವಾಗಿ ಗುಂಡುಪೋಪಿನಲ್ಲಿದ್ದ ಮರಗಳು ಮಾಯವಾಗಿವೆ. ಇಲ್ಲಿ ಮುಳ್ಳಿನ ಪೊದೆಗಳು, ಗಿಡಗಂಟಿಗಳು ಬೆಳೆದು ನಿಂತಿವೆ. ಗ್ರಾಮದ ಯುವಜನರು ಒಂದಾಗಿ ಪುರಾತನ ವೈಭವವನ್ನು ಮರುಕಳಿಸುವಂತೆ ಮಾಡಲು ಮುಂದಾಗಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ವಿಶ್ವಪರಿಸರ ದಿನಾಚರಣೆ ಸಂದರ್ಭದಲ್ಲಿ ನೂರಾರು ಹೂವು ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವ ಗುಂಡುತೋಪಿನ ಈ ಹಿಂದಿನ ವೈಭವವನ್ನು ತರುವ ದಿಕ್ಕಿನಲ್ಲಿ ಯುವ ಸಮುದಾಯ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿ ಗಿಡಗಂಟಿಗಳು, ಮುಳ್ಳಿನ ಪೊದೆಗಳನ್ನು ಶ್ರಮದಾನ ಹಾಗೂ ಜೆಸಿಬಿ ಯಂತ್ರದ ಸಹಾಯದಿಂದ ತೆರವು ಮಾಡಿ ಭೂಮಿಯನ್ನು ಸಮತಟ್ಟು ಮಾಡಿಸಿ ನಾನಾ ಹಣ್ಣುಗಳು ಸೇರಿದಂತೆ ಹಲವು ಬಗೆಯ ಸಸಿಗಳನ್ನು ನೆಡಲಾಯಿತು. ಹಾಗೆಯೇ ಗುಂಡುತೋಪಿನ ಪಕ್ಕದಲ್ಲಿ ಇರುವ ಪುರಾತನವಾದ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಶ್ರಮಿಸಲಾಯಿತು.

ಹಿರಿಕಳಲೆ ಗ್ರಾಮದ ಜನರ ಜೀವನಾಡಿಯಾಗಿರುವ ಗುಂಡುತೋಪಿನ ಒತ್ತುವರಿ ತೆರವುಗೊಳಿಸಿ ಹದ್ದುಬಸ್ತನ್ನು ಗುರುತಿಸಿ ಕಲ್ಲು ಹಾಕಿಸಿಕೊಡುವಂತೆ ಗ್ರಾಮದ ಪರವಾಗಿ ಮನವಿ ಸಲ್ಲಿಸಲಾಗುವುದು. ಒತ್ತುವರಿ ತೆರವಿನ ನಂತರ ಗುಂಡುತೋಪಿನ ಸುತ್ತಲೂ ತಂತಿಬೇಲಿ ಹಾಕಿಸಿ ಗುಂಡುತೋಪನ್ನು ವನದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ತಮ್ಮ ಸಮಾಜಮುಖಿ ಕೆಲಸವನ್ನು ಬೆಂಬಲಿಸಬೇಕು ಎಂದು ಗ್ರಾಮದ ಯುವಕ ಮಂಜೇಗೌಡ ಮನವಿ ಮಾಡಿದರು.

ಹಿರಿಕಳಲೆ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್‌, ವಿದ್ಯಾವರ್ಧಕ ವನಸಂವರ್ಧನಾ ಟ್ರಸ್ಟ್‌ನ ರಘು, ಮಹೇಶ್‌, ರವಿ, ಕೃಷ್ಣೆಗೌಡ, ಮೋಹನ, ರಮೇಶ್‌, ರವೀಂದ್ರಬಾಬು ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ