ಆ್ಯಪ್ನಗರ

ಮಂಡ್ಯ: ಮೂವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

three teachers elected for best teacher award

Vijaya Karnataka 30 Sep 2018, 5:00 am
ಮಂಡ್ಯ: ಕರ್ನಾಟಕ ಸಂಘ ಗಾಂವಾದಿ ಬಿ.ಎಚ್.ಮಂಗೇಗೌಡ ಸ್ಮರಣಾರ್ಥ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕರಾದ ಕೆ.ನಾಗರಾಜ, ಎಸ್.ಸುಜಾತ ಮತ್ತು ಕೃಷಿ ಪ್ರಶಸ್ತಿಗೆ ಪ್ರಗತಿಪರ ಕೃಷಿಕ ಎಚ್.ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊಘಿ.ಜಯಪ್ರಕಾಶಗೌಡ ತಿಳಿಸಿದರು.
Vijaya Karnataka Web
ಮಂಡ್ಯ: ಮೂವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

ಕರ್ನಾಟಕ ಸಂಘದ ಕಚೇರಿ ಆವರಣದಲ್ಲಿ ಅ.೨ರಂದು ನಡೆಯುವ ಸಮಾರಂಭದಲ್ಲಿ ಮೂವರು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ತಲಾ ೫ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಅಂದು ಸಂಜೆ ೬ಕ್ಕೆ ಬೆಂಗಳೂರಿನ ಶ್ರೀಬೇಲಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀಶಿವರುದ್ರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರಂಭ ಆರಂಭಗೊಳ್ಳಲಿದೆ. ಜಿಲ್ಲಾಕಾರಿ ಎನ್.ಮಂಜುಶ್ರೀ ಅಧ್ಯಕ್ಷತೆಯಲ್ಲಿ ಜಿ.ಪಂ. ಸಿಇಒ ಕೆ.ಯಾಲಕ್ಕಿಗೌಡ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಡುವರು. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಬೆಕ್ಕಳಲೆಯ ಗ್ರಾಮ ವಿದ್ಯಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಂ.ರಘು ಭಾಗವಹಿಸುವರು ಎಂದರು. ಗೋಷ್ಠಿಯಲ್ಲಿ ಕರ್ನಾಟಕ ಸಂಘದ ಪ್ರಧಾನ ಕಾರ‌್ಯದರ್ಶಿ ಎಂ.ಕೆ.ಹರೀಶ್, ಕಾರ‌್ಯದರ್ಶಿ ಪಿ. ಲೋಕೇಶ್ ಚಂದಗಾಲು, ನಿವೃತ್ತ ಪ್ರಾಂಶು ಪಾಲ ಪ್ರೊಘಿ.ಅನಿಲ್‌ಕುಮಾರ್ ಹಾಜರಿದ್ದರು.
ಪ್ರಶಸ್ತಿ ಪುರಸ್ಕೃತರ ಪರಿಚಯ: ಕೆ.ನಾಗರಾಜ: ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೆ.ನಾಗರಾಜ ಅವರು ಮಂಡ್ಯದ ಶಂಕರಪುರದ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಹೆಸರಾಗಿದ್ದಾರೆ. ಉರ್ದು ಮಾತೃಭಾಷೆಯ ಮುಸ್ಲಿಂ ಮಕ್ಕಳೇ ಹೆಚ್ಚು ದಾಖಲಾಗುವ ಈ ಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸಿ, ಅವರನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಜ್ಜುಗೊಳಿಸುವ ಕಾಯಕವನ್ನು ಇರುವ ಮಾಡುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿ ಯಾಗಿಯೂ ಇವರು ಕಾರ‌್ಯ ನಿರ್ವಹಿಸುತ್ತಿದ್ದಾರೆ.
ಎಸ್.ಸುಜಾತ: ಮಂಡ್ಯ ನಗರದ ಕ್ರಿಶ್ವಿಯನ್ ಕಾಲನಿಯವರಾದ ಎಸ್.ಸುಜಾತ ಅವರು, ಮಂಡ್ಯ ತಾಲೂಕು ಬಸರಾಳು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿ ದ್ದಾರೆ. ಎಲ್ಲ ಅಗತ್ಯ ಬೋಧನಾ ತಂತ್ರಗಳನ್ನು ಬಳಸಿ ಬೋಸುತ್ತಿರುವ ಇವರ ಪರಿಶ್ರಮಕ್ಕೆ ೯ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಫಲಿತಾಂಶ ಬರುತ್ತಿದೆ.
ಎಚ್.ರಮೇಶ್: ಕೆ.ಆರ್.ಪೇಟೆ ತಾಲೂಕು ಮಾವಿನಕೆರೆಯವರಾದ ಎಚ್.ರಮೇಶ್, ೧೯೮೬ರಲ್ಲಿ ದಾಂಡೇಲಿಯಲ್ಲಿ ವನ ಪಾಲಕರಾಗಿ ವೃತ್ತಿ ಆರಂಭಿಸಿ ವಲಯ ನಂತರ ವಲಯ ಅರಣ್ಯಾಕಾರಿಯಾಗಿ ಶಿವಮೊಗ್ಗಘಿ, ಚಿಕ್ಕಮಗ ಳೂರು, ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ದ್ದಾರೆ. ನಿವೃತ್ತಿ ಬಳಿಕವೂ ಕಾಲಹರಣ ಮಾಡದೆ ತಮಗಿದ್ದ ಜಮೀನಿನಲ್ಲಿ ವಾಣಿಜ್ಯ ಮತ್ತು ಅರಣ್ಯ ಕೃಷಿ ಮಾಡುತ್ತಿದ್ದಾರೆ. ಶ್ರೀಗಂಧ ಹಾಗೂ ಕಾಳುಮೆಣಸನ್ನೂ ಬೆಳೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ