ಆ್ಯಪ್ನಗರ

ಪಾಂಡವಪುರ: 35 ಸಾವಿರ ದನಗಳಿಗೆ ಲಸಿಕೆ ಗುರಿ

ಪಾಂಡವಪುರ: ಪಶುಸಂಗೋಪನಾ ಇಲಾಖೆ ವತಿಯಿಂದ ರಾಸುಗಳಿಗೆ ಹಾಕುವ ಕಾಲುಬಾಯಿ ಜ್ವರದ 14ನೇ ಸುತ್ತಿನ ಲಸಿಕೆ ಕಾರ‍್ಯಕ್ರಮಕ್ಕೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಅಶೋಕ್‌ ಚಾಲನೆ ನೀಡಿದರು.

Vijaya Karnataka 2 Jun 2018, 5:00 am
ಪಾಂಡವಪುರ: ಪಶುಸಂಗೋಪನಾ ಇಲಾಖೆ ವತಿಯಿಂದ ರಾಸುಗಳಿಗೆ ಹಾಕುವ ಕಾಲುಬಾಯಿ ಜ್ವರದ 14ನೇ ಸುತ್ತಿನ ಲಸಿಕೆ ಕಾರ‍್ಯಕ್ರಮಕ್ಕೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಅಶೋಕ್‌ ಚಾಲನೆ ನೀಡಿದರು.
Vijaya Karnataka Web  35
ಪಾಂಡವಪುರ: 35 ಸಾವಿರ ದನಗಳಿಗೆ ಲಸಿಕೆ ಗುರಿ


ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಎದುರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಸುಗಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪಶುಸಂಗೋಪನಾ ಇಲಾಖೆ ವತಿಯಿಂದ ಜೂ.1 ರಿಂದ 19ರ ವರೆಗೆ ತಾಲೂಕಿನಲ್ಲಿರುವ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ‍್ಯಕ್ರಮ ಹಮ್ಮಿಕೊಂಡಿದ್ದು, ತಾಲೂಕಿನ ಎಲ್ಲಾ ರೈತರು, ರಾಸುಗಳ ಮಾಲೀಕರು ತಮ್ಮ ರಾಸುಗಳಿಗೆ ಕಾಲುಬಾಯಿ ಜ್ವರ ಲಸಿಕೆಯನ್ನು ಹಾಕಿಸುವ ಮೂಲಕ ರಾಸುಗಳಿಗೆ ಕಾಲುಬಾಯಿ ಜ್ವರ ಬರದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

ತಾಲೂಕಿನಾದ್ಯಂತ ಸುಮಾರು 35 ಸಾವಿರ ದನಗಳು, 8,500 ಎಮ್ಮೆಗಳು ಹಾಗೂ 650 ಹಂದಿಗಳಿಗೆ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಿದ್ದಾರೆ. ಲಸಿಕೆ ಹಾಕುವುದಕ್ಕೆ ಸುಮಾರು ಮೂರು ತಂಡಗಳನ್ನು ಮಾಡಲಾಗಿದ್ದು, ಎಲ್ಲಾ ವೈದ್ಯರು ಸಿಬ್ಬಂದಿಗಳು ತಮ್ಮ ಗ್ರಾಮಗಳಿಯೇ ಬಂದು ರಾಸುಗಳಿಗೆ ಲಸಿಕೆ ಹಾಕಲಿದ್ದಾರೆ. ರಾಸುಗಳು ಮಾಲೀಕರು ತಮ್ಮ ಗ್ರಾಮಗಳಿಗೆ ಬರುವ ದಿನದ ಮಾಹಿತಿಯನ್ನು ತಮ್ಮ ಡೈರಿಗಳಲ್ಲಿ ಪಡೆದುಕೊಳ್ಳಬೇಕು, ಎಲ್ಲರು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.

ಸಂದರ್ಭದಲ್ಲಿ ತಾಪಂ ಸದಸ್ಯ ಸಿ.ಎಸ್‌.ಗೋಪಾಲೇಗೌಡ, ಡೈರಿ ಅಧ್ಯಕ್ಷ ವನರಾಜು, ಉಪಾಧ್ಯಕ್ಷೆ ತಾಯಮ್ಮದೊಡ್ಡಸ್ವಾಮೀಗೌಡ, ಮಾಜಿ ಅಧ್ಯಕ್ಷ ರಾದ ಸಿ.ಎಂ.ರಮೇಶ್‌, ವರದರಾಜು, ಲೋಕೇಶ್‌, ಮಹೇಶ್‌, ಮಾಜಿ ಉಪಾಧ್ಯಕ್ಷ ರಾಮೇಗೌಡ, ನಿರ್ದೇಶಕರಾದ ರೇವಣ್ಣ, ದಿನೇಶ್‌, ಗ್ರಾಪಂ ಸದಸ್ಯರಾದ ಸಿ.ಎ.ಲೋಕೇಶ್‌, ಸಿ.ಡಿ.ಮಹದೇವು, ರಾಮಚಂದ್ರು, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಿ.ಪ್ರಕಾಶ್‌, ಡೈರಿ ಕಾರ‍್ಯದರ್ಶಿ ಕಾಂತರಾಜು, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ನಟರಾಜು, ವೈದ್ಯರಾದ ಡಾ.ಎಂ.ಎಸ್‌.ನಂದಿನಿ, ಕೆ.ಎಂ.ಕಾವ್ಯ ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ