ಆ್ಯಪ್ನಗರ

1.23 ಕೋಟಿ ರೂ. ವಿಮೆ ಪರಿಹಾರಕ್ಕೆ ಆದೇಶ ಇತಿಹಾಸ ಬರೆದ ನಾಗಮಂಗಲ ಜೆಎಂಎಫ್‌ಸಿ

ಪಟ್ಟಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 1.23 ಕೋಟಿ ರೂ. ಪರಿಹಾರಕ್ಕೆ ಆದೇಶಿಸುವ ಮೂಲಕ ದೊಡ್ಡದೊಂದು ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿ, ನಾಗಮಂಗಲದ ಜೆಎಂಎಫ್‌ಸಿ ನ್ಯಾಯಾಲಯ ಇತಿಹಾಸ ಸೃಷ್ಟಿಸಿದೆ.

Vijaya Karnataka 9 Sep 2018, 5:00 am
ನಾಗಮಂಗಲ: ಪಟ್ಟಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 1.23 ಕೋಟಿ ರೂ. ಪರಿಹಾರಕ್ಕೆ ಆದೇಶಿಸುವ ಮೂಲಕ ದೊಡ್ಡದೊಂದು ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿ, ನಾಗಮಂಗಲದ ಜೆಎಂಎಫ್‌ಸಿ ನ್ಯಾಯಾಲಯ ಇತಿಹಾಸ ಸೃಷ್ಟಿಸಿದೆ.
Vijaya Karnataka Web 1 23 crores order history to compensate for insurer nagamangala jmfc
1.23 ಕೋಟಿ ರೂ. ವಿಮೆ ಪರಿಹಾರಕ್ಕೆ ಆದೇಶ ಇತಿಹಾಸ ಬರೆದ ನಾಗಮಂಗಲ ಜೆಎಂಎಫ್‌ಸಿ


ತಾಲೂಕಿನ ಕೆಂಪಕೊಪ್ಪಲು ಗೇಟ್‌ನ ಜಲಸೂರು-ಬೆಂಗಳೂರು ರಾಜ್ಯ ಹೆದ್ದಾರಿ ಬಳಿ ಎರಡು ವರ್ಷದ ಹಿಂದೆ (2016) ಎರಡು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮಂಡ್ಯದ ವಿ.ಸಿ.ಫಾರಂನ ಪ್ರೊ.ಸಿದ್ದೇಗೌಡ ಸಾವಿಗೀಡಾದರು. ಈ ಸಂಬಂಧ ಎಚ್‌ಡಿಎಫ್‌ಸಿ ವಿಮೆ ಕಂಪನಿ ವಿರುದ್ಧ ಮೃತರ ಕುಟುಂಬದವರು ನಾಗಮಂಗಲದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, 1.26 ಕೋಟಿ ರೂ. ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಹಿರಿಯ ಶ್ರೇಣಿ ನ್ಯಾಯಾಧೀಧಿಶೆ ಎಂ.ಭಾರತಿ ನೇತೃತ್ವದಲ್ಲಿ ನಡೆದ ರಾಜಿ ಸಂಧಾನದ ಫಲವಾಗಿ ದೂರುದಾರರಿಗೆ 1.23 ಕೋಟಿ ರೂ. ಪರಿಹಾರದ ಹಣ ನೀಡಲು ವಿಮಾ ಕಂಪನಿ ಒಪ್ಪಿಗೆ ಸೂಚಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ರಾಜ್ಯದ ನ್ಯಾಯಾಂಗ ಇಲಾಖೆ ವ್ಯವಸ್ಥೆಯಲ್ಲಿ ಇಷ್ಟು ದೊಡ್ಡ ಮಟ್ಟದ ಪರಿಹಾರವನ್ನು ಕಡಿಮೆ ಅವಧಿಧಿಯಲ್ಲಿ ದೊರಕಿಸುವ ಮೂಲಕ ನಾಗಮಂಗಲ ನ್ಯಾಯಾಲಯ ಇತಿಹಾಸ ನಿರ್ಮಿಸಿದೆ.

ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ ಆಯೋಜಿಸುವ ಲೋಕ್‌ ಅದಾಲತ್‌ನಲ್ಲಿ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಧಿಶೆ ಎಂ.ಭಾರತಿ ಮತ್ತು ಕಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಧೀಶ ತಿಮ್ಮಯ್ಯ.ಜಿ. ನೇತೃತ್ವದಲ್ಲಿ ಚೆಕ್‌ ಬೌನ್ಸ್‌, ಆಸ್ತಿ ವಿವಾದ, ರಸ್ತೆ ಅಪಘಾತ ಸೇರಿದಂತೆ 75 ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗಿದೆ. ಕಳೆದ ತಿಂಗಳು ಜಿಲ್ಲೆಯಲ್ಲಿಯೇ ಅತಿ ಹೆಚ್ಚು 105 ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ