ಮಂಡ್ಯ: ಜಿಲ್ಲೆಯಕೃಷ್ಣರಾಜಪೇಟೆ ಕ್ಷೇತ್ರ ಉಪಚುನಾವಣೆ ವೇಳೆ 106 ವರ್ಷದ ಮಹಿಳೆ ಸಣ್ಣಮ್ಮ ಎಂಬುವವರು ಮತದಾನ ಮಾಡಿ ಹಲವರಿಗೆ ಮಾದರಿಯಾಗಿದ್ದಾರೆ.
ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆ ಪೈಕಿ ಬಹುತೇಕ ಕಡೆ ಮತದಾನ ಪ್ರಮಾಣ ಕಡಿಮೆಯಾಗಿರುವ ವರದಿಯಾಗಿದೆ. ಆದರೆ, 106 ವರ್ಷದ ಮಹಿಳೆ ಮತದಾನ ಮಾಡುವ ಮೂಲಕ ಮತ ಚಾಲಾವಣೆ ಮಾಡಲು ಬಾರದ ಯುವ ಪೀಳಿಗೆಗೆ ಮಂಡ್ಯ ಜಿಲ್ಲೆಯ ಸಣ್ಣಮ್ಮ ಮಾದರಿಯಾಗಿದ್ದಾರೆ.
ಕೃಷ್ಣರಾಜಪೇಟೆ ತಾಲೂಕಿನ ಸೊಳ್ಳೇಪುರ ಮತಗಟ್ಟೆಗೆ ತನ್ನ ಮೊಮ್ಮಕ್ಕಳ ಸಹಾಯದೊಂದಿಗೆ ಆಗಮಿಸಿದ್ದ 106 ವರ್ಷದ ಮಹಿಳೆ ಸಣ್ಣಮ್ಮ ಮತ ಚಲಾಯಿಸುವ ಮೂಲಕ ತನ್ನ ಹಕ್ಕು ಚಲಾಯಿಸಿದ್ದಾರೆ. ಉಪ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರನ್ನು ಆಯ್ಕೆ ಮಾಡಲು ತಮ್ಮ ಹಕ್ಕು ಚಲಾಯಿಸಿ ತನ್ನ ಮೊಮ್ಮಕ್ಕಳೊಂದಿಗೆ ಮತದಾನ ಮಾಡಿರುವ ಶಾಯಿಯ ಗುರುತನ್ನು ತೋರಿಸಿದ್ದು, ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಈ ಮೂಲಕ ಮತ ಚಾಲಾವಣೆ ಮಾಡಲು ಬಾರದ ಯುವ ಪೀಳಿಗೆಗೆ 106 ವರ್ಷದ ಮಹಿಳೆ ಸಣ್ಣಮ್ಮ ಮಾದರಿಯಾಗಿದ್ದಾರೆ. ಕೆ. ಆರ್. ಪೇಟೆ ಕ್ಷೇತ್ರದ ಶಾಸಕರಾಗಿದ್ದ ನಾರಾಯಣಗೌಡರು ರಾಜೀನಾಮೆ ನೀಡುವ ಮೂಲಕ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಸಮ್ಮಿಶ್ರ ಸರಕಾರಕ್ಕೆ ಬೆಂಬಲ ವಾಪಸ್ ಪಡೆಯಲು ನಾರಾಯಣಗೌಡರು ರಾಜೀನಾಮೆ ನೀಡಿದ್ದರು. ಈಗ ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಈ ಸುದ್ದಿ ಓದಿ: ಗೋಕಾಕದಲ್ಲಿ ಮದ್ಯ ಸೇವಿಸಿ ಬಂದ ಮತಗಟ್ಟೆ ಅಧಿಕಾರಿ ಅಮಾನತು
ಇದನ್ನೂ ಓದಿ: ವಿಜಯನಗರ ಕ್ಷೇತ್ರದಲ್ಲಿ 'ಕೈ' ಅಭ್ಯರ್ಥಿಗೆ ಮತ ಚಲಾಯಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್!
ಹೊಸಕೋಟೆ ಕ್ಷೇತ್ರದಲ್ಲಿ ಕೈಕೊಟ್ಟ ಮತಯಂತ್ರ: ಇವಿಎಂ ಸರಿಪಡಿಸುವಂತೆ ಎಂಟಿಬಿ ನಾಗರಾಜ್ ಮನವಿ
ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆ ಪೈಕಿ ಬಹುತೇಕ ಕಡೆ ಮತದಾನ ಪ್ರಮಾಣ ಕಡಿಮೆಯಾಗಿರುವ ವರದಿಯಾಗಿದೆ. ಆದರೆ, 106 ವರ್ಷದ ಮಹಿಳೆ ಮತದಾನ ಮಾಡುವ ಮೂಲಕ ಮತ ಚಾಲಾವಣೆ ಮಾಡಲು ಬಾರದ ಯುವ ಪೀಳಿಗೆಗೆ ಮಂಡ್ಯ ಜಿಲ್ಲೆಯ ಸಣ್ಣಮ್ಮ ಮಾದರಿಯಾಗಿದ್ದಾರೆ.
ಕೃಷ್ಣರಾಜಪೇಟೆ ತಾಲೂಕಿನ ಸೊಳ್ಳೇಪುರ ಮತಗಟ್ಟೆಗೆ ತನ್ನ ಮೊಮ್ಮಕ್ಕಳ ಸಹಾಯದೊಂದಿಗೆ ಆಗಮಿಸಿದ್ದ 106 ವರ್ಷದ ಮಹಿಳೆ ಸಣ್ಣಮ್ಮ ಮತ ಚಲಾಯಿಸುವ ಮೂಲಕ ತನ್ನ ಹಕ್ಕು ಚಲಾಯಿಸಿದ್ದಾರೆ. ಉಪ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರನ್ನು ಆಯ್ಕೆ ಮಾಡಲು ತಮ್ಮ ಹಕ್ಕು ಚಲಾಯಿಸಿ ತನ್ನ ಮೊಮ್ಮಕ್ಕಳೊಂದಿಗೆ ಮತದಾನ ಮಾಡಿರುವ ಶಾಯಿಯ ಗುರುತನ್ನು ತೋರಿಸಿದ್ದು, ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಈ ಮೂಲಕ ಮತ ಚಾಲಾವಣೆ ಮಾಡಲು ಬಾರದ ಯುವ ಪೀಳಿಗೆಗೆ 106 ವರ್ಷದ ಮಹಿಳೆ ಸಣ್ಣಮ್ಮ ಮಾದರಿಯಾಗಿದ್ದಾರೆ. ಕೆ. ಆರ್. ಪೇಟೆ ಕ್ಷೇತ್ರದ ಶಾಸಕರಾಗಿದ್ದ ನಾರಾಯಣಗೌಡರು ರಾಜೀನಾಮೆ ನೀಡುವ ಮೂಲಕ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಸಮ್ಮಿಶ್ರ ಸರಕಾರಕ್ಕೆ ಬೆಂಬಲ ವಾಪಸ್ ಪಡೆಯಲು ನಾರಾಯಣಗೌಡರು ರಾಜೀನಾಮೆ ನೀಡಿದ್ದರು. ಈಗ ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಈ ಸುದ್ದಿ ಓದಿ: ಗೋಕಾಕದಲ್ಲಿ ಮದ್ಯ ಸೇವಿಸಿ ಬಂದ ಮತಗಟ್ಟೆ ಅಧಿಕಾರಿ ಅಮಾನತು
ಇದನ್ನೂ ಓದಿ: ವಿಜಯನಗರ ಕ್ಷೇತ್ರದಲ್ಲಿ 'ಕೈ' ಅಭ್ಯರ್ಥಿಗೆ ಮತ ಚಲಾಯಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್!
ಹೊಸಕೋಟೆ ಕ್ಷೇತ್ರದಲ್ಲಿ ಕೈಕೊಟ್ಟ ಮತಯಂತ್ರ: ಇವಿಎಂ ಸರಿಪಡಿಸುವಂತೆ ಎಂಟಿಬಿ ನಾಗರಾಜ್ ಮನವಿ