ಆ್ಯಪ್ನಗರ

ಅಂಗಡಿಯಿಂದ 177 ಮೊಬೈಲ್‌,ನಗದು ಕಳವು

ದುಷ್ಕರ್ಮಿಗಳು ಅಂಗಡಿಯ ರೋಲಿಂಗ್‌ ಷಟರ್‌ ಕೊರೆದು 10 ಲಕ್ಷ ರೂ. ಮೌಲ್ಯದ 177 ಮೊಬೈಲ್‌ಗಳು ಮತ್ತು 47 ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗವಿರುವ ಮೊಬೈಲ್‌ ಶೋರೂಂನಲ್ಲಿ ಶನಿವಾರ ನಡೆದಿದೆ.

Vijaya Karnataka 22 Jul 2019, 5:00 am
ನಾಗಮಂಗಲ : ದುಷ್ಕರ್ಮಿಗಳು ಅಂಗಡಿಯ ರೋಲಿಂಗ್‌ ಷಟರ್‌ ಕೊರೆದು 10 ಲಕ್ಷ ರೂ. ಮೌಲ್ಯದ 177 ಮೊಬೈಲ್‌ಗಳು ಮತ್ತು 47 ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗವಿರುವ ಮೊಬೈಲ್‌ ಶೋರೂಂನಲ್ಲಿ ಶನಿವಾರ ನಡೆದಿದೆ.
Vijaya Karnataka Web MDY-MDY21NGL3


ಪಟ್ಟಣದ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯ ಡಿವೈಎಸ್‌ಪಿ ಕಚೇರಿಗೆ ಕೂಗಳತೆ ದೂರದಲ್ಲಿರುವ ಸಂಗೀತಾ ಮೊಬೈಲ್‌ ಅಂಗಡಿಯಲ್ಲಿ ಘಟನೆ ನಡೆದಿದೆ. ಶನಿವಾರ ತಡರಾತ್ರಿ 2ರ ಸುಮಾರಿಗೆ ಶೋರೂಂನ ಅಂಗಡಿಯ ರೋಲಿಂಗ್‌ ಷಟರ್‌ ಅನ್ನು ಗ್ಯಾಸ್‌ಕಟ್ಟರ್‌ನಿಂದ ಕೊರೆದು ಒಳನುಗ್ಗಿರುವ ದುಷ್ಕರ್ಮಿಗಳು 10 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 177 ಮೊಬೈಲ್‌ಗಳು ಹಾಗೂ 47 ಸಾವಿರ ರೂ. ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಭಾನುವಾರ ಮುಂಜಾನೆ 5ರ ಸುಮಾರಿಗೆ ಈ ವಿಷಯ ತಿಳಿದು ಶೋರೂಂ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಎಸ್‌ಪಿ ಶಿವಪ್ರಕಾಶ್‌ ದೇವರಾಜ್‌, ಡಿವೈಎಸ್‌ಪಿ ಕೆ.ಪಿ.ವಿಶ್ವನಾಥ್‌, ಪಟ್ಟಣ ಠಾಣೆ ಪಿಎಸ್‌ಐ ರವಿಕಿರಣ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಶೋರೂಂ ವ್ಯವಸ್ಥಾಪಕ ಶ್ರೀನಿವಾಸ್‌ ದೂರು ನೀಡಿದ್ದು, ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ