ಆ್ಯಪ್ನಗರ

ಮಂಡ್ಯಕ್ಕೆ ಕೊರೊನಾ ಸಿಹಿ-ಕಹಿ; ನಾಲ್ವರಿಗೆ ಸೋಂಕು, 20 ಮಂದಿ ಗುಣಮುಖ

ಸಕ್ಕರೆ ನಾಡು ಮಂಡ್ಯಕ್ಕೆ ಕೊರೊನಾ ವೈರಸ್‌ ಮಂಗಳವಾರ ಸ್ವಲ್ಪ ಕಹಿ ಜಾಸ್ತಿ ಸಿಹಿಯನ್ನು ನೀಡಿದೆ. ಮಹಾರಾಷ್ಟ್ರದಿಂದ ಬಂದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ಮತ್ತೊಂದೆಡೆ 20 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Vijaya Karnataka Web 2 Jun 2020, 9:28 pm
ಮಂಡ್ಯ: ಮಂಡ್ಯ ಜಿಲ್ಲೆಗೆ ಮಂಗಳವಾರ ಕೊರೊನಾ ವಿಷಯದಲ್ಲಿ ಸಿಹಿ-ಕಹಿ ಎರಡೂ ದೊರೆತಿದೆ. ಒಂದೆಡೆ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಮತ್ತೊಂದೆಡೆ 20 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 289ಕ್ಕೇರಿದೆ.
Vijaya Karnataka Web ಕೊರೊನಾ ವೈರಸ್‌
ಸಾಂದರ್ಭಿಕ ಚಿತ್ರ


ಮಂಗಳವಾರ ಪತ್ತೆಯಾಗಿರುವ ಹೊಸ ಪ್ರಕರಣಗಳ ನಾಲ್ವರೂ (ಪಿ-3457,ಪಿ-3458, ಪಿ-3459 ಹಾಗೂ ಪಿ-3460) ಮಹಾರಾಷ್ಟ್ರದಿಂದ ಮಂಡ್ಯಕ್ಕೆ ಬಂದವರು. ಹೊಸ ಸೋಂಕಿತರಲ್ಲಿ ಮೂವರು ಪುರುಷರು, ಒಬ್ಬರು ಮಹಿಳೆ ಇದ್ದಾರೆ. ಈ ಪೈಕಿ ಪಿ-3458 ಸಂಖ್ಯೆಯ ಸೋಂಕಿತ 8 ವರ್ಷದ ಬಾಲಕನಾಗಿದ್ದಾನೆ. ನಾಲ್ವರನ್ನೂ ಮಂಡ್ಯ ಮಿಮ್ಸ್ ಬೋಧಕ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

20 ಜನ ಗುಣಮುಖ
ಪಿ-1210, ಪಿ-1212, ಪಿ-1213, ಪಿ-1214, ಪಿ-1215, ಪಿ-1472, ಪಿ-1217, ಪಿ-1218, ಪಿ-1219, ಪಿ-1220, ಪಿ-1221, ಪಿ-1222, ಪಿ-1229, ಪಿ-1230, ಪಿ-1231, ಪಿ-566, ಪಿ-568, ಪಿ1-055, ಪಿ-1105, ಪಿ-1108 ಸಂಖ್ಯೆಯ ಸೋಂಕಿತರು ಗುಣಮುಖರಾಗಿದ್ದಾರೆ. ಭಾನುವಾರ ಒಂದೇ ದಿನ 28 ಮಂದಿ ಗುಣಮುಖರಾಗಿದ್ದರು. ಎರಡು ದಿನಗಳ ಬೆನ್ನಲ್ಲೇ 20 ಮಂದಿ ಗುಣಮುಖರಾಗಿರುವುದು ಜಿಲ್ಲೆಯ ಜನರಿಗೆ ಸಮಾಧಾನ ಉಂಟು ಮಾಡಿದೆ.

ರಾಜ್ಯದಲ್ಲಿ ಕೊರೊನಾ ‘ಮಹಾ’ ಸ್ಫೋಟ, ಒಂದೇ ದಿನ 388 ಕೇಸ್‌; ಉಡುಪಿ 150, ಕಲಬುರಗಿ 100!

208 ಮಂದಿಯಲ್ಲಿ ವೈರಸ್ ಸಕ್ರಿಯಒಟ್ಟು 289 ಸೋಂಕಿತರಲ್ಲಿ ನೆನ್ನೆವರೆಗೆ 61 ಮಂದಿ ಗುಣಮುಖರಾಗಿದ್ದರು. ಮಂಗಳವಾರ ಗುಣಮುಖರಾದ 20 ಮಂದಿ ಸೇರಿ ಈವರೆಗೆ 81 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಯಾಗಿದ್ದಾರೆ. ಉಳಿದಂತೆ ಇನ್ನು 208 ಮಂದಿಯ ದೇಹದಲ್ಲಷ್ಟೇ ಕೊರೊನಾ ವೈರಸ್ ಸಕ್ರಿಯವಾಗಿದೆ. ಇನ್ನೂ 747 ಜನರ ಪರೀಕ್ಷಾ ವರದಿ ಬಾಕಿ ಇದೆ. 4964 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ