29 ಮಂದಿಯಿಂದ ನಾಮಪತ್ರ ಹಿಂತೆಗೆತ
ಮಂಡ್ಯ: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ 113ರ ಪೈಕಿ 29 ಮಂದಿ ಶುಕ್ರವಾರ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದುಘಿ, ಅಂತಿಮವಾಗಿ 84 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಮದ್ದೂರು ವಿಧಾನಸಭೆ ಕ್ಷೇತ್ರದಲ್ಲಿ 4, ಮಳವಳ್ಳಿ ಕ್ಷೇತ್ರದಲ್ಲಿ 2, ಮೇಲುಕೋಟೆ ಕ್ಷೇತ್ರದಲ್ಲಿ 5, ಶ್ರೀರಂಗಪಟ್ಟಣದಲ್ಲಿ 6, ನಾಗಮಂಗಲದಲ್ಲಿ 3, ಮಂಡ್ಯದಲ್ಲಿ 5 ಹಾಗೂ ಕೆ.ಆರ್.ಪೇಟೆಯಲ್ಲಿ 4 ಮಂದಿ ನಾಮಪತ್ರವನ್ನು ಹಿಂಪಡೆದು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅಂತಿಮವಾಗಿ ಮದ್ದೂರು ಕ್ಷೇತ್ರದಲ್ಲಿ 13, ಮಳವಳ್ಳಿ ಕ್ಷೇತ್ರದಲ್ಲಿ 13, ಮೇಲುಕೋಟೆ ಕ್ಷೇತ್ರದಲ್ಲಿ 13, ಶ್ರೀರಂಗಪಟ್ಟಣದಲ್ಲಿ 11, ನಾಗಮಂಗಲದಲ್ಲಿ 10, ಮಂಡ್ಯದಲ್ಲಿ 13 ಹಾಗೂ ಕೆ.ಆರ್.ಪೇಟೆಯಲ್ಲಿ 11 ಮಂದಿ ಚುನಾವಣಾ ಅಖಾಡದಲ್ಲಿದ್ದಾರೆ.
ನಾಮಪತ್ರ ಹಿಂಪಡೆದವರು...
ಮದ್ದೂರು: ಹಿಂದೂಸ್ಥಾನ ಜನತಾ ಪಾರ್ಟಿಯ ಎಂ.ಪಿ. ಮುನಾವರ್ ಷರ್ೀ, ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿಯ ವಿಶ್ವನಾಥರಾವ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಜಾವೇದ್ ಖಾನ್, ಚಿಕ್ಕ ನಂಜಾಚಾರಿ.
ಮಳವಳ್ಳಿ: ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಅಭ್ಯರ್ಥಿ ನೀಲಮ್ಮ ಹಾಗೂ ಲೋಕ ಆವಾಜ್ ದಳ ಪಕ್ಷದ ಆಭ್ಯರ್ಥಿ ಎಂ.ಕೆ.ವಿದ್ಯಾ.
ಮೇಲುಕೋಟೆ: ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಆರ್.ಎಸ್.ಹನುಮಂತೇಗೌಡ, ಪಕ್ಷೇತರ ಅಭ್ಯರ್ಥಿಗಳಾದ ಪಿ.ವಿ.ಸುಂದರಮ್ಮ, ಸಿ.ಸುಬ್ರಮಣ್ಯ, ಜೆ.ಶಿವಲಿಂಗೇಗೌಡ, ಎಂ.ರಮೇಶ್.
ಶ್ರೀರಂಗಪಟ್ಟಣ: ರಾಷ್ಟ್ರೀಯ ಮಾನವ ವಿಕಾಸ ಪಕ್ಷದ ಎಸ್.ವೆಂಕಟೇಶ್, ಪಕ್ಷೇತರ ಅಭ್ಯರ್ಥಿಗಳಾದ ಸಿದ್ದಯ್ಯ, ಎಂ.ಸಿ.ಚಿದಂಬರ, ಕೆ.ಉದಯ್ಕುಮಾರ್ ಸಿ.ಹೇಮಂತ್ಕುಮಾರ್, ಪಿ.ಎಚ್.ಚಂದ್ರಶೇಖರ್.
ನಾಗಮಂಗಲ: ಪಕ್ಷೇತರ ಅಭ್ಯರ್ಥಿಗಳಾದ ಡಿ.ಆರ್.ಮಂಜುನಾಥ, ಎಲ್.ಜಯರಾಮೇಗೌಡ, ಬಿ.ಕೆ.ಗಂಗಾಧರ್.
ಮಂಡ್ಯ: ಪಕ್ಷೇತರರಾದ ಮಾಜಿ ಶಾಸಕ ಎಚ್.ಬಿ.ರಾಮು, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಹರೀಶ್, ಎಚ್.ಎನ್.ಉಮೇಶ್ ಚಂದ್ರಘಿ, ಬೋರಯ್ಯ.
ಕೆ.ಆರ್.ಪೇಟೆ: ಪಕ್ಷೇತರರಾದ ಮಾಜಿ ಶಾಸಕ ಬಿ.ಪ್ರಕಾಶ್, ಜಿ.ಪಂ.ಸದಸ್ಯ ಬಿ.ಎಲ್.ದೇವರಾಜು, ಎ.ಆರ್.ರಘು, ಕುಮಾರ.
ಕಣದಲ್ಲಿ ಉಳಿದವರು...
ಮದ್ದೂರು: ಡಿ.ಸಿ.ತಮ್ಮಣ್ಣ(ಜೆಡಿಎಸ್), ಜಿ.ಎಂ.ಮಧು (ಕಾಂಗ್ರೆಸ್), ಎಂ.ಸತೀಶ್(ಬಿಜೆಪಿ), ಹೀನಾಕೌಸರ್(ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ), ಎಸ್.ಎಚ್.ಲಿಂಗೇಗೌಡ(ಸ್ವರಾಜ್ ಇಂಡಿಯಾ), ಡಾಎಸ್.ಎಸ್.ಮೋಜಿತ್(ೆಡರಲ್ ಕಾಂಗ್ರೆಸ್ ಆ್ ಇಂಡಿಯಾ), ಬಿ.ವೆಂಕಟೇಶ್(ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ), ಪಿ.ಎಸ್.ಮಹೇಶ್ಕುಮಾರ್, ಶಿವಮಾದೇಗೌಡ, ಬಿ.ಚೇತನ್, ಎನ್.ಸಿ.ಪುಟ್ಟರಾಜು, ವೆಂಕಟೇಶ, ಎಸ್.ಮಹೇಶ್(ಪಕ್ಷೇತರರು).
ಮಳವಳ್ಳಿ: ಡಾ.ಕೆ.ಅನ್ನದಾನಿ(ಜೆಡಿಎಸ್), ಪಿ.ಎಂ.ನರೇಂದ್ರ ಸ್ವಾಮಿ(ಕಾಂಗ್ರೆಸ್), ಬಿ.ಸೋಮಶೇಖರ್(ಬಿಜೆಪಿ), ಎಂ.ಕೃಷ್ಣಮೂರ್ತಿ(ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋ ದಯ ಕಾಂಗ್ರೆಸ್), ಮಂಟೆಲಿಂಗು (ರಿಪಬ್ಲಿಕನ್ ಪಾರ್ಟಿ ಆ್ ಇಂಡಿಯಾ), ಜಿ.ಎಸ್.ವಿಶ್ವನಾಥ್(ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ), ಟಿ.ಸಿ.ವೆಂಕಟೇಶ್(ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿ), ಎಂ.ಎಸ್.ಶಶಿಕುಮಾರ್(ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ), ಎಚ್.ಡಿ.ದೇವಪ್ರಸಾದ್, ಎಂ.ನಂಜಪ್ಪ, ಎಚ್.ಮಹದೇವ, ಟಿ.ಎನ್.ಸತೀಶ್ಕುಮಾರ್, ಆರ್.ಸಿದ್ದರಾಜು(ಪಕ್ಷೇತರರು).
ಮೇಲುಕೋಟೆ: ಸಿ.ಎಸ್.ಪುಟ್ಟರಾಜು(ಜೆಡಿಎಸ್), ಸುಂಡಹಳ್ಳಿ ಸೋಮಶೇಖರ್(ಬಿಜೆಪಿ), ದರ್ಶನ್ ಪುಟ್ಟಣ್ಣಯ್ಯ(ಸ್ವರಾಜ್ ಇಂಡಿಯಾ), ಮಹೇಶ್(ಜನಸಾಮಾನ್ಯ ಪಾರ್ಟಿ), ಮಹೇಶ್(ಎಐಎಂಇಪಿ), ಜಿ.ಎಂ.ರಮೇಶ್(ಕರ್ನಾಟಕ ಜನತಾ ಪಕ್ಷ), ರೋಹಿಣಿ (ಸಮಾಜವಾದಿ), ಅರುಣ್ಕುಮಾರ್, ಕೆ.ಎಸ್.ದರ್ಶನ್, ಎಚ್.ನಾರಾಯಣ, ಪುಟ್ಟರಾಜು, ಬಿ.ಕೆ.ಪುಟ್ಟರಾಜು, ಡಿ.ಕೆ.ರವಿಕುಮಾರ್(ಪಕ್ಷೇತರರು).
ಶ್ರೀರಂಗಪಟ್ಟಣ: ಕೆ.ಎಸ್.ನಂಜುಂಡೇಗೌಡ(ಬಿಜೆಪಿ), ಎ.ಬಿ.ರಮೇಶ್ ಬಂಡಿಸಿದ್ದೇಗೌಡ(ಕಾಂಗ್ರೆಸ್), ಎ.ಎಸ್.ರವೀಂದ್ರ(ಜೆಡಿಎಸ್), ವಿ.ಸುರೇಶ್(ಎಐಎಂಇಪಿ), ಸಿ.ಎಸ್.ವೆಂಕಟೇಶ್(ಎಎಪಿ), ಎಚ್.ಎಂ.ಸತೀಶ್(ಪ್ರಜಾ ಪರಿ ವರ್ತನಾ ಪಾರ್ಟಿ), ಕೆಂಪೇಗೌಡ, ಎಂ.ಎಂ.ಮಹೇಶಗೌಡ, ಮೋಹನ್ಕುಮಾರ್, ಎಸ್.ಎಸ್.ರಾಜಶೇೀಖರಯ್ಯ, ಸಿ.ಲಿಂಗೇಗೌಡ(ಪಕ್ಷೇತರರು).
ನಾಗಮಂಗಲ: ಎನ್.ಚಲುವರಾಯಸ್ವಾಮಿ(ಕಾಂಗ್ರೆಸ್), ಡಾ.ವಿ.ಪಾರ್ಥಸಾರಥಿ(ಬಿಜೆಪಿ), ಸುರೇಶ್ಗೌಡ(ಜೆಡಿಎಸ್), ಬಿ.ಎಸ್.ಗೌಡ(ಕರ್ನಾಟಕ ಜನತಾ ಪಕ್ಷ), ವಸೀಂ ಉಲ್ಲಾಖಾನ್(ಎಐಎಂಇಪಿ), ಎನ್.ಎಸ್.ಅಶೋಕ, ಬಿ.ವಿ.ಧರಣೇಂದ್ರಬಾಬು, ಯಡವನಹಳ್ಳಿ ಪಿ.ಸಿ.ಕೃಷ್ಣೇಗೌಡ, ರುಕ್ಮಿಣಿ, ವೆಂಕಟೇಶ(ಪಕ್ಷೇತರರು)
ಮಂಡ್ಯ: ಪಿ.ರವಿಕುಮಾರ್(ಕಾಂಗ್ರೆಸ್), ಎನ್.ಶಿವಣ್ಣ (ಬಿಜೆಪಿ), ಎಂ.ಶ್ರೀನಿವಾಸ್(ಜೆಡಿಎಸ್), ಬಿ.ಎಸ್.ಶಿವ ಕುಮಾರ್ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ), ಎಂ.ಜೆ.ಕಾವೇರಿ ಶ್ರೇಯಾ(ಎಂಇಪಿ), ಡಾ.ಎಸ್.ಸಿ.ಶಂಕರೇಗೌಡ, ಎಸ್.ಜೆ.ಮಂಜುನಾಥ್, ಎಂ.ಬಿ.ನಾಗಣ್ಣ, ರಾಜೇಶ, ಸಿ.ಎಂ.ಕೃಷ್ಣ, ಎಂ.ಸಿ.ನಿತ್ಯಾನಂದ, ಕೆ.ಮಲ್ಲೇಶ, ಎಚ್.ಸಿ. ಶಿವರಾಮು(ಪಕ್ಷೇತರರು).
ಕೆ.ಆರ್.ಪೇಟೆ: ಕೆ.ಬಿ.ಚಂದ್ರಶೇಖರ್(ಕಾಂಗ್ರೆಸ್), ನಾರಾಯಣ ಗೌಡ (ಜೆಡಿಎಸ್), ಬಿ.ಸಿ.ಮಂಜು(ಬಿಜೆಪಿ), ಎ.ಸಿ.ಕಾಂತ (ಕರ್ನಾಟಕ ಪ್ರಜ್ಞಾವಂತ ಪಕ್ಷ), ಎಲ್.ಆರ್.ರವಿಕುಮಾರ್, ಬಿ.ಎನ್.ಲೋಕೇಶ್, ಮಂಜುಳ, ಪುಟ್ಟಣ್ಣ ಎಸ್.ಗೌಡ, ಆರ್.ಜಗದೀಶ್, ಕೆ.ಎನ್.ಶಂಕರೇಗೌಡ (ಪಕ್ಷೇತರರು).
ಹಿಂದೆ ಸರಿದ ಬಂಡಾಯಗಾರರು
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಮಾಜಿ ಶಾಸಕ ಎಚ್.ಬಿ.ರಾಮು, ಜೆಡಿಎಸ್ ಟಿಕೆಟ್ ಆಕಾಂಕ್ಷಿ ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಇಬ್ಬರೂ ಕೂಡ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದಾರೆ.
ಅದೇ ರೀತಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಬಿ.ಪ್ರಕಾಶ್, ಜಿ.ಪಂ. ಸದಸ್ಯ ಬಿ.ಎಲ್.ದೇವರಾಜು ಅವರೂ ಕೂಡ ಉಮೇದುವಾರಿಕೆ ಹಿಂಪಡೆದಿದ್ದಾರೆ.