ಆ್ಯಪ್ನಗರ

ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ

ಸ್ನೇಹಿತನೊಂದಿಗೆ ಈಜಲು ಕಾಲುವೆಗೆ ಧುಮುಕಿದ ಬಾಲಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

Vijaya Karnataka 30 Apr 2019, 5:00 am
ಮಂಡ್ಯ: ಸ್ನೇಹಿತನೊಂದಿಗೆ ಈಜಲು ಕಾಲುವೆಗೆ ಧುಮುಕಿದ ಬಾಲಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
Vijaya Karnataka Web a boy who was mired in the canal
ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ


ನಾಗಮಂಗಲ ತಾಲೂಕಿನ ಅಗ್ರಹಾರದ ನಿವಾಸಿ ಹೇಮಂತ್‌ಗೌಡ(16) ಕೊಚ್ಚಿ ಹೋದ ಬಾಲಕ. ಈತ ಮದ್ದೂರು ತಾಲೂಕಿನ ಶಿವಾರಗುಡ್ಡ ನವೋದಯ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿದ್ದನು. ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದನು. ರಜೆಯ ಹಿನ್ನೆಲೆ ಶಾಲೆಯ 8 ಮಂದಿ ಸ್ನೇಹಿತರು ಸೋಮವಾರ ಬೆಳಗ್ಗೆ ಮೇಲುಕೋಟೆಗೆ ಪ್ರವಾಸ ಹೊರಟಿದ್ದರು.

ಪ್ರವಾಸ ಮುಗಿಸಿ ಸ್ನೇಹಿತ ಗುಣಶೇಖರ್‌ ಗ್ರಾಮವಾದ ಗುನ್ನಾಯಕನಹಳ್ಳಿಗೆ ಎಲ್ಲರೂ ತೆರಳಿದ್ದಾರೆ. ಈ ವೇಳೆ ಗ್ರಾಮದ ಹೊರ ವಲಯದಲ್ಲಿರುವ ಕಾಲುವೆಯಲ್ಲಿ ಗುಣಶೇಖರ್‌ ಈಜುತ್ತಿದ್ದಾಗ, ಸರಿಯಾಗಿ ಈಜು ಬಾರದ ಹಿನ್ನೆಲೆ ಟ್ಯೂಬ್‌ನ ಸಹಾಯದಿಂದ ಕಾಲುವೆಗೆ ಧುಮುಕಿದ ಹೇಮಂತ್‌ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಕಾಲುವೆಯಲ್ಲಿ ಈಜುತ್ತಿದ್ದ ಗುಣಶೇಖರ್‌ ಮತ್ತು ಏರಿಯ ಮೇಲಿದ್ದ ಸ್ನೇಹಿತರು ಹೇಮಂತ್‌ನನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಆಳವಾದ ಕಾಲುವೆ, ರಭಸವಾಗಿ ಬರುತ್ತಿದ್ದ ನೀರಿನಲ್ಲಿ ಹೇಮಂತ್‌ ಕೊಚ್ಚಿ ಹೋಗಿದ್ದಾನೆ. ಪೊಲೀಸರು ಮತ್ತು ಗ್ರಾಮಸ್ಥರು ಹೇಮಂತ್‌ಗಾಗಿ ಶೋಧ ಕಾರ‍್ಯ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ