ಆ್ಯಪ್ನಗರ

ನೀರಿನಲ್ಲಿ ಕೊಚ್ಚಿ ಹೋದ ಯುವಕ, ಮಗು

ಶ್ರೀರಂಗಪಟ್ಟಣ ಹೊರವಲಯದಲ್ಲಿರುವ ಕಾವೇರಿ ಸಂಗಮಕ್ಕೆ ಪ್ರವಾಸ ಬಂದಿದ್ದ ಯುವಕ ಮತ್ತು ಮೂರು ವರ್ಷದ ಮಗು ಕಾವೇರಿ ನದಿಯಲ್ಲಿ ಶುಕ್ರವಾರ ನೀರುಪಾಲಾಗಿದ್ದಾರೆ.

Vijaya Karnataka 19 Oct 2019, 5:00 am
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಹೊರವಲಯದಲ್ಲಿರುವ ಕಾವೇರಿ ಸಂಗಮಕ್ಕೆ ಪ್ರವಾಸ ಬಂದಿದ್ದ ಯುವಕ ಮತ್ತು ಮೂರು ವರ್ಷದ ಮಗು ಕಾವೇರಿ ನದಿಯಲ್ಲಿ ಶುಕ್ರವಾರ ನೀರುಪಾಲಾಗಿದ್ದಾರೆ.
Vijaya Karnataka Web a young boy a child flow in water
ನೀರಿನಲ್ಲಿ ಕೊಚ್ಚಿ ಹೋದ ಯುವಕ, ಮಗು


ದೊಡ್ಡಬಳ್ಳಾಪುರದ ಆಯೂಬ್‌ಖಾನ್‌ ಎಂಬುವವರ ಮಗ ಯಾಸೀನ್‌ ಸಲೀಂ(23) ಹಾಗೂ ಸಯ್ಯದ್‌ ಅನ್ವರ್‌ ಎಂಬುವವರ ಪುತ್ರ ಮನ್ನಾನ್‌(3) ಕಾವೇರಿ ನದಿಯಲ್ಲಿಕೊಚ್ಚಿ ಹೋಗಿದ್ದಾರೆ. ಮನ್ನಾನ್‌ ಶವ ಅರಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮಹದೇವಪುರ ಬಳಿ ಪತ್ತೆ ಯಾಗಿದೆ. ಯಾಸೀನ್‌ ಸಲೀಂಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಅಯುಬ್‌ಖಾನ್‌ ಕುಟುಂಬದ ಸದಸ್ಯರು ಶ್ರೀರಂಗಪಟ್ಟಣದಲ್ಲಿಟಿಪ್ಪು ಸಮಾಧಿ ಸ್ಥಳ, ಗುಂಬಸ್‌ಗೆ ಭೇಟಿ ನೀಡಿದ ನಂತರ ಕಾವೇರಿ ಸಂಗಮ್‌ಕ್ಕೆ ತೆರಳಿದ್ದರು. ಸಂಗಮದಲ್ಲಿನದಿಗಿಳಿದಿದ್ದ ಯಾಸೀನ್‌ ಸಲೀಂ ತಮ್ಮ ತಂಗಿಯ ಮಗು ಮನ್ನಾನ್‌ನನ್ನು ಮೆಟ್ಟಿಲುಗಳ ಮೇಲೆ ಕೂರಿಸಿದ್ದರು.

ಮೆಟ್ಟಿಲ ಮೇಲೆ ಆಟವಾಡುವ ವೇಳೆ ನೀರಿಗೆ ಬಿದ್ದಿದ್ದಾನೆ. ಆತನ ರಕ್ಷಣೆಗೆ ಮುಂದಾದ ಯಾಸೀನ್‌ ಸಲೀಂ ಕೂಡ ನೀರಿನಲ್ಲಿಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀರಂಗಪಟ್ಟಣ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ