ಆ್ಯಪ್ನಗರ

ಯುವತಿ ಅಪಹರಣ ದೂರು: ಆರೋಪಿಗಳು ಪರಾರಿ

ವಿಕ ಸುದ್ದಿಲೋಕ ಮೇಲುಕೋಟೆ ವಿವಾಹವಾಗುವಂತೆ ಪೀಡಿಸುತ್ತಿದ್ದ ಯುವಕನೊಬ್ಬ ಸ್ನೇಹಿತರ ಸಹಾಯದಿಂದ ತನ್ನನ್ನು ಅಪಹರಿಸಿದ್ದು, ಆತನಿಂದ ತಪ್ಪಿಸಿಕೊಂಡು ಬಂದಿರುವುದಾಗಿ ...

Vijaya Karnataka 30 May 2018, 7:47 pm
ಮೇಲುಕೋಟೆ: ವಿವಾಹವಾಗುವಂತೆ ಪೀಡಿಸುತ್ತಿದ್ದ ಯುವಕನೊಬ್ಬ ಸ್ನೇಹಿತರ ಸಹಾಯದಿಂದ ತನ್ನನ್ನು ಅಪಹರಿಸಿದ್ದು, ಆತನಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಯುವತಿಯೊಬ್ಬಳು ಮೇಲುಕೋಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.
Vijaya Karnataka Web abduction complaint by young woman escape from the accused
ಯುವತಿ ಅಪಹರಣ ದೂರು: ಆರೋಪಿಗಳು ಪರಾರಿ


ಪಾಂಡವಪುರ ತಾಲೂಕಿನ ಗ್ರಾಮವೊಂದರ ಯುವತಿಗೆ ಬಹು ದಿನಗಳಿಂದ ವಿವಾಹವಾಗುವಂತೆ ಪೀಡಿಸುತ್ತಿದ್ದ ನರಹಳ್ಳಿಯ ಕುಮಾರ್‌(25) ಮತ್ತವನ ಮೂವರು ಸ್ನೇಹಿತರು ಆರೋಪಿಗಳಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾರೆ.

''ಅಂತಿಮ ಬಿಎಸ್ಸಿ ವಿದ್ಯಾರ್ಥಿನಿಯಾದ ನಾನು ಬಯಾಲಜಿ ಪರೀಕ್ಷೆಗೆ ಸೋಮವಾರ ಬೆಳಗ್ಗೆ 9.30ರ ಸುಮಾರಿನಲ್ಲಿ ಬೆಳ್ಳಾಳೆ ಗ್ರಾಮಕ್ಕೆ ಬಸ್‌ ಹತ್ತಲು ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಕುಮಾರ ಮತ್ತು ಆತನ ಸ್ನೇಹಿತರಾದ ಸಿಂಗ್ರೀಗೌಡನಕೊಪ್ಪಲಿನ ಪರಮೇಶ್‌, ಚೀಕನಹಳ್ಳಿಯ ಶಿವಕುಮಾರ್‌ ಬಸ್‌ ನಿಲ್ದಾಣಕ್ಕೆ ಬಿಡುವುದಾಗಿ ಪುಸಲಾಯಿಸಿ ಕಾರು ಹತ್ತಿಸಿಕೊಂಡು ಮಡಿಕೇರಿಗೆ ಕರೆದುಕೊಂಡು ಹೋದರು. ಅಲ್ಲಿನ ಹೋಮ್‌ ಸ್ಟೇಯಲ್ಲಿ ನನ್ನನ್ನು ಕೂರಿಸಿ ಹಣ ತರಲು ಹೊರ ಹೋದರು. ಆಗ ಸಹಾಯಕ್ಕಾಗಿ ಕೂಗಿಕೊಂಡಾಗ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ರವಿ ಮತ್ತು ಇತರರು ಸಹಾಯಕ್ಕೆ ಬಂದರು. ನಂತರ ಬಂದ ಕುಮಾರ್‌ ಹಾಗೂ ಸ್ನೇಹಿತರನ್ನು ತರಾಟೆಗೆ ತೆಗೆದುಕೊಂಡು, ನನ್ನನ್ನು ಮರಳಿ ಗ್ರಾಮಕ್ಕೆ ಸುರಕ್ಷಿತವಾಗಿ ಬಿಡುವಂತೆ ತಾಕೀತು ಮಾಡಿ ಅವರ ಫೋಟೊ ಹಾಗೂ ಮೊಬೈಲ್‌ ನಂಬರ್‌ ಪಡೆದು ಕಳುಹಿಸಿದರು. ಕಾರು ಸುಂಟಿಕೊಪ್ಪ ಬಳಿ ಅಪಘಾತಕ್ಕೀಡಾದಾಗ ತಪ್ಪಿಸಿಕೊಂಡು ಮೈಸೂರಿಗೆ ಬಸ್‌ ಹತ್ತಿ ಬಂದೆ'' ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಮೇಲುಕೋಟೆ ಎಸ್‌ಐ ಸೋಮೇಗೌಡ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ